Just In
- 1 hr ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 2 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 3 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 4 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರುಗಳ ಸಾಗಣಿಕೆಗೆ ಆವೇಗ ತುಂಬಿದ 'ಆಟೋ ಎಕ್ಸ್ ಪ್ರೆಸ್'
ವಾಹನ ಕ್ಷೇತ್ರದಲ್ಲಿ ಅಗಾಧ ಆದಾಯ ಅವಕಾಶವನ್ನು ಮನಗಂಡಿರುವ ಭಾರತೀಯ ರೈಲ್ವೆ, ತನ್ನ ಚೊಚ್ಚಲ ವಾಹನ ಸಾಗಣಿಕಾ ರೈಲು 'ಆಟೋ ಎಕ್ಸ್ಪ್ರೆಸ್' ಲೋಕಾರ್ಪಣೆ ಮಾಡಿದೆ. ಇದು ಹರಿಯಾಣದ ಗುರ್ಗಾಂವ್ ನಿಂದ ನಮ್ಮ ಕರ್ನಾಟಕದ ಬೆಂಗಳೂರು ಹೊರವಲಯದಲ್ಲಿರುವ ನಡವಂದ ರೈಲ್ವೆ ನಿಲ್ದಾಣಕ್ಕೆ ಮೊದಲ ಪ್ರಯಾಣವನ್ನು ಬೆಳೆಸಿದೆ.
ವಾಹನಗಳ
ಸರಕು
ಸಾಗಣಿಕೆಯಲ್ಲಿ
ಶೇಕಡಾ
25ರಷ್ಟು
ಶೇರನ್ನು
ಗುರಿಯಿರಿಸಿಕೊಂಡಿರುವ
ಭಾರತೀಯ
ರೈಲ್ವೆ,
ಇದಕ್ಕಾಗಿ
ಸುಸ್ಸುಜ್ಜಿತ
ಹಾಗೂ
ಹೆಚ್ಚು
ಸುರಕ್ಷಿತ
ರೈಲನ್ನು
ಬಿಡುಗಡೆ
ಮಾಡಿದೆ.
ರಸ್ತೆ ಮಾರ್ಗವಾಗಿ ಬೃಹತ್ ಕಂಟೈನರ್ ಗಳಲ್ಲಿ ಹೊಚ್ಚ ಹೊಸ ಕಾರುಗಳ ಸಾಗಣಿಕೆ ವೇಳೆ ಸುರಕ್ಷತೆಯ ಬಗ್ಗೆ ಭೀತಿ ಕಾಡುತ್ತದೆ. ಆದರೆ ಅತಿ ಸುರಕ್ಷಿತ ಮಾರ್ಗ ಎನಿಸಿಕೊಂಡಿರುವ ರೈಲ್ವೆ ಮಾರ್ಗವಾಗಿ ಬಹಳ ವೇಗವಾಗಿ ಗಮ್ಯಸ್ಥಾನವನ್ನು ತಲುಪಬಹುದಾಗಿದೆ.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ರೈಲ್ವೆ ಸಚಿವ ಸುರೇಶ್ ಪ್ರಭು, "ನಮ್ಮ ಜನಸಂಖ್ಯೆಯಂತೆ ವಾಹನಗಳ ಸಂಖ್ಯೆಯು ಅತಿ ವೇಗದಲ್ಲಿ ವರ್ಧಿಸುತ್ತಿದೆ. ಬಹುಶ: ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವಲಯವು ಇದಾಗಿದೆ. ಹಾಗಾಗಿ ಇದನ್ನು ಸ್ವಾಧೀನಪಡಿಸಲು ಸಾಧ್ಯವಾದ್ದಲ್ಲಿ ರೈಲ್ವೆಗೆ ಪ್ರಮುಖ ಆದಾಯ ಮೂಲವಾಗಿ ಮಾರ್ಪಾಡುಗೊಳ್ಳಲಿದೆ" ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಗಮ್ಯಸ್ಥಾನ ತುಲುಪುವುದು ಆಟೋ ಎಕ್ಸ್ ಪ್ರೆಸ್ ವಾಹನ ಸಾಗಣಿಕಾ ಬಂಡಿಯ ಮುಖ್ಯ ಉದ್ದೇಶವಾಗಿರಲಿದೆ. ತನ್ಮೂಲಕ ಭಾರತೀಯ ರೈಲ್ವೆ ಹೆಚ್ಚು ವಿಶ್ವಾಸಾರ್ಹತೆಗೆ ಪಾತ್ರವಾಗಲಿದೆ.
ಪ್ರತಿ ತಿಂಗಳಲ್ಲಿ 2000ದಷ್ಟು ಕಾರುಗಳನ್ನು ಗುರ್ಗಾಂವ್ ನಿಂದ ಕರ್ನಾಟಕದ ನಿಡವಂದಕ್ಕೆ ರವಾನಿಸಲಾಗುತ್ತಿದೆ. ಈಗ ಆಟೋ ಎಕ್ಸ್ ಪ್ರೆಸ್ ರೈಲಿನ ಬಿಡುಗಡೆಯೊಂದಿಗೆ ಈ ಸಂಖ್ಯೆಯೀಗ 6000 ಯುನಿಟ್ ಗಳಿಗೆ ಏರಿಕೆಯಾಗಲಿದೆ.
ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸಲು ಸಾಮರ್ಥ್ಯ ಹೊಂದಿರುವ ಆಟೋ ಎಕ್ಸ್ ಪ್ರೆಸ್, ಸಮಯ ಉಳಿತಾಯವನ್ನು ಮಾಡಲಿದೆ. ಇದರೊಂದಿಗೆ 70 ತಾಸುಗಳ ಯಾತ್ರೆಯು 57 ತಾಸಿಗೆ ಇಳಿಕೆಯಾಗಲಿದೆ.
ಮುಂದಿನ ದಿನಗಳಲ್ಲಿ ಈ ಯೋಜನೆಯು ದೇಶದ ಇತರೆಡೆಗಳಿಗೆ ವ್ಯಾಪಿಸಲಿದೆ. ದೇಶದಲ್ಲಿ ಸ್ಥಿತಗೊಂಡಿರುವ ಪ್ರಮುಖ ವಾಹನ ವಲಯಗಳಿಂದ ಪ್ರಮುಖ ನಗರಗಳಿಗೆ ಕಾರುಗಳನ್ನು ರವಾನಿಸುವ ಮೂಲಕ ಭಾರತೀಯ ರೈಲ್ವೆ ಆದಾಯದ ಮಾರ್ಗ ಕಂಡುಕೊಳ್ಳಲಿದೆ.