ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್ಟಿಸಿ ಬಸ್
ಕಳೆದ 2ದಿನಗಳ ಹಿಂದೆ ಶಾಂತಿನಗರದ ಒಂದನೇ ಡಿಪೋದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪೊಲೀಸ್ ವಿಚಾರಣೆ ವೇಳೆ ತಾನೇ ಅಪಘಾತ ಮಾಡಿರುವುದಾಗಿ ksrtc ಬಸ್ ಚಾಲಕ ಮೊಯಿನುದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ.
Recommended Video

ಕಳೆದ 2 ದಿನಗಳ ಹಿಂದೆ ಶಾಂತಿನಗರದ ಒಂದನೇ ಡಿಪೋದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪೊಲೀಸ್ ವಿಚಾರಣೆ ವೇಳೆ ತಾನೇ ಅಪಘಾತ ಮಾಡಿರುವುದಾಗಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಮೊಯಿನುದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ.

ಮೈಸೂರಿನಿಂದ ತಮಿಳುನಾಡಿಗೆ ಹೊರಟಿದ್ದ ಕೆಎಸ್ಆರ್ಟಿ ಬಸ್ ಒಂದು ಕಳೆದ 2ನೇ ತಾರೀಖು ಮೈಸೂರಿನ ಚನ್ನಪಟ್ಟಣದ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿತ್ತು. ಆದ್ರೆ ಬಸ್ ನಿಲ್ಲಿಸದ ಡ್ರೈವರ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡಿದ್ದ. ಈ ವೇಳೆ ಬಸ್ಸಿನ ಚಕ್ರದಲ್ಲಿ ವ್ಯಕ್ತಿ ಮೃತದೇಹ ಸಿಲುಕಿರುವುದು ಪತ್ತೆಯಾಗಿತ್ತು.

ಅಪಘಾತ ನಡೆದ ಸ್ಥಳದಲ್ಲಿ ಬಸ್ ನಿಲ್ಲಿಸದೆ ಬಸ್ ಚಾಲಕ ಬಸ್ ಚಲಾಯಿಸಿಕೊಂಡು ಬಂದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಚಾಲಕ ಮೊಯಿನುದ್ದೀನ್ ವಿರುದ್ಧ ಸಾಕ್ಷ್ಯ ನಾಶಕ್ಕೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆ ಮಾಡಿ ಘಟನೆಯ ನಿಜಾಂಶವನ್ನು ಪತ್ತೆ ಹಚ್ಚಿದ್ದಾರೆ.

ವಿಚಾರಣೆ ವೇಳೆ ತಾನು ಅಪಘಾತ ಮಾಡಿರುವುದು ಹೌದು, ಅಪಘಾತವಾದ ತಕ್ಷಣ ಬಸ್ ನಿಲ್ಲಿಸದೆ ಚಲಾಯಿಸಿಕೊಂಡು ಹೋದೆ, ಪೊಲೀಸರಿಗೆ ಭಯ ಪಟ್ಟು ತಿಳಿಸದೆ ಮನೆಗೆ ಹೋಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಆದ್ರೆ ಬಸ್ ಅಡಿ ಸಿಲುಕಿದ್ದ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ರಾತ್ರಿ ವೇಳೆಯಾಗಿದ್ದರಿಂದ ಆತನಿಗೂ ಅಪಘಾತ ನಡೆದ ಸ್ಥಳ ಯಾವುದು ಎಂದು ತಿಳಿದಿಲ್ಲ. ಘಟನೆ ನಡೆದ ಸ್ಥಳವನ್ನು ಪತ್ತೆ ಹಚ್ಚಿ ಪ್ರಕರಣವನ್ನು ಅಲ್ಲಿನ ಠಾಣೆಗೆ ವರ್ಗಾಯಿಸುವುದಾಗಿ ವಿಲ್ಸನ್ ಗಾರ್ಡ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೊಯಿನುದ್ದೀನ್ ರಾತ್ರಿ 12.30 ರ ಸುಮಾರಿಗೆ ರಾಮನಗರ ಮತ್ತು ಚನ್ನಪಟ್ಟಣ ಮಧ್ಯೆ ಈ ಅಪಘಾತ ನಡೆದಿದ್ದು, ಚಾಲಕ ಬಸ್ ನಿಲ್ಲಿಸದೆ ಬೆಂಗಳೂರಿಗೆ ಬಂದಿದ್ದಾನೆ. ಕೊನೆಯ ನಿಲ್ದಾಣವಾದ ಶಾಂತಿನಗರದಲ್ಲಿ ಪ್ರಯಾಣಿಕರೆಲ್ಲಾ ಇಳಿದ ಬಳಿಕ ಚಾಲಕ ಬಸ್ ಡಿಪೋದ ಬಳಿ ಬಸ್ ನ ಕೆಳಗೆ ನೋಡಿದಾಗ ವ್ಯಕ್ತಿಯ ಶವ ಇರುವುದು ಪತ್ತೆಯಾಗಿತ್ತು.
ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಇತ್ತೀಚೆಗೆ ನಟ ದರ್ಶನ್ ಖರೀದಿ ಮಾಡಿದ್ದ 5.70 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಅವೆಂಟಡೊರ್ ಕಾರಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹಬ್ಬಿತ್ತು. ಆದ್ರೆ ದರ್ಶನ್ ಅವರ ಹೊಸ ಕಾರಿನ ಮೇಲೆ ಪುದುಚೆರಿಯ ರಿಜಿಸ್ಟ್ರೇಷನ್ ನಂಬರ್ ಇರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಖರೀದಿಸಿರುವ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಅವೆಂಟಡೊರ್ ಹೈ-ಎಂಡ್ ಸ್ಫೋರ್ಟ್ಸ್ ಕಾರಿನ ಮೇಲೆ ಈಗ ಆರ್ಟಿಓ ಕಣ್ಣುಬಿದ್ದಿದೆ. ಈ ಕಾರು ಪುದುಚೇರಿ ರಿಜಿಸ್ಟ್ರೇಷನ್ ಸಂಖ್ಯೆ (PY01 CD 5008) ಹೊಂದಿರುವುದೇ ಇದಕ್ಕೆ ಕಾರಣ.

ಕರ್ನಾಟಕಕ್ಕೆ ಹೋಲಿಸಿದರೆ ಪುದುಚೇರಿಯಲ್ಲಿ ಲೈಫ್ಟೈಮ್ ಟ್ಯಾಕ್ಸ್ ತುಂಬಾ (ಕನಿಷ್ಠ ಪಕ್ಷ ಶೇ.20) ಕಡಿಮೆ ಇದ್ದು ಪುದುಚೇರಿಯಲ್ಲಿ ನೋಂದಣಿಯಾಗಿ ಕರ್ನಾಟಕದಲ್ಲಿ ಓಡಾಡುತ್ತಿರುವ ಕಾರುಗಳ ಮೇಲೆ ಸಾರಿಗೆ ಇಲಾಖೆ ಈಗ ದೃಷ್ಟಿ ಹರಿಸಿದೆ.

ಈ ಹಿಂದೆಯೂ ತಮಿಳಿನ ಖ್ಯಾತ ನಟಿ ಅಮಲಾ ಪೌಲ್ ಸೇರಿದಂತೆ ಒಂದಷ್ಟು ಮಂದಿ ಸೆಲೆಬ್ರಟಿಗಳು ಪುದುಚೆರಿಯಲ್ಲಿ ತಮ್ಮ ಕಾರನ್ನು ರಿಜಿಸ್ಟ್ರೇಷನ್ ಮಾಡಿಸಿ ಅದನ್ನು ಚೆನ್ನೈನಲ್ಲಿ ಓಡಿಸುತ್ತಿದ್ದರು. ಆಗ ಅದು ವಿವಾದವಾಗಿ 20 ಲಕ್ಷ ದಂಡ ಸಹ ಕಟ್ಟಿದ್ದರು.

ಒಂದು ಕಾರನ್ನು ಅಥವಾ ಬಸ್ಸನ್ನು ಬೇರೆ ರಾಜ್ಯದಿಂದ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಬರುವುದು ತಪ್ಪಲ್ಲ. ಆದರೆ, ಇಲ್ಲಿಗೆ ಬಂದ ಮೇಲೆ ಇಲ್ಲಿನ ರೋಡ್ ಟ್ಯಾಕ್ಸ್ ಕಟ್ಟಿ ಅದನ್ನು ಇಲ್ಲಿಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಬೇಕು. ಅದಕ್ಕೆ ಒಂದು ವರ್ಷಗಳ ಕಾಲ ಸಮಯಾವಕಾಶ ನೀಡಲಾಗುತ್ತದೆ.

ಇಷ್ಟೆಲ್ಲಾ ರೂಲ್ಸ್ಗಳು ಇದ್ದರೂ ಜನ ಸಾಕಷ್ಟು ವರ್ಷಗಳ ಕಾಲ ತಾವು ವಾಸ ಮಾಡುವ ರಾಜ್ಯಕ್ಕೆ ಟ್ರಾನ್ಸಫರ್ ಮಾಡಿಸಿಕೊಳ್ಳುವುದಿಲ್ಲ. ಹಾಗಾಗಿ ದರ್ಶನ್ ಕಾರಿನ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ಒಂದು ಕಣ್ಣಿಟ್ಟಿದ್ದಾರೆ.

ಅಷ್ಟಕ್ಕೂ ಪುದುಚೇರಿ ರಿಜಿಸ್ಟ್ರೇಷನ್ ಕಾರು ಖರೀದಿಸುವ ಮೂಲಕ ದರ್ಶನ್ ಅವರೇನು ಕಾನೂನು ಬಾಹಿರ ಕೆಲಸವೇನು ಮಾಡಿಲ್ಲ. ಕರ್ನಾಟಕದ ಹೊರಗೆ ರಿಜಿಸ್ಟ್ರೇಷನ್ ಮಾಡಿಕೊಂಡವರು ಒಂದು ವರ್ಷದ ತನಕ ನಮ್ಮ ರಾಜ್ಯದಲ್ಲಿ ಕಾರನ್ನು ಓಡಿಸಬಹುದು. ಅದಕ್ಕಿಂತಲೂ ಹೆಚ್ಚಿನ ಸಮಯ ಓಡಿಸಿದರೆ ಆಗ ಆರ್ಟಿಓ ಅಧಿಕಾರಿಗಳ ಕಿರಿಕಿರಿ ತಪ್ಪಿದ್ದಲ್ಲ.

ಲೈಫ್ಟೈಮ್ ಟ್ಯಾಕ್ಸ್ ಉಳಿಸಲು ಬೆಂಗಳೂರಿನಲ್ಲಿ ಶಾಶ್ವತ ವಿಳಾಸ ಇದ್ದರೂ ಪುದುಚೇರಿಯ ತಾತ್ಕಾಲಿಕ ವಿಳಾಸ ನೀಡಿ ದುಬಾರಿ ವಾಹನಗಳನ್ನು ಖರೀದಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಟಿಓ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಪುದುಚೇರಿಯಲ್ಲಿ ರಿಜಿಸ್ಟ್ರೇಷನ್ ಆಗಿದ್ದ ಸಾಕಷ್ಟು ವಾಹನಗಳನ್ನು ಈ ಹಿಂದೆ ಆರ್ಟಿಓ ತಪಾಸಣೆ ಮಾಡಿತ್ತು. ಬೇರೆ ರಾಜ್ಯದಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ರಾಜ್ಯದಲ್ಲಿ ಓಡಿಸಿದ ವಾಹನಗಳಿಗೆ ತೆರಿಗೆ ಕಟ್ಟುವಂತೆ ಸೂಚಿಸಿತ್ತು.

ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?
ಬರೋಬ್ಬರಿ 730 ಅಶ್ವಶಕ್ತಿ ಉತ್ಪಾದಿಸಬಲ್ಲ ಲಂಬೋರ್ಗಿನಿ ಅವೆಂಟಡೊರ್ ಕಾರು ಈ ಹಿಂದೆ 2017ರ ಫೆಬ್ರುವರಿಯಲ್ಲಿ ಭಾರತದಲ್ಲಿ ಭರ್ಜರಿ ಅನಾವರಣಗೊಂಡಿತ್ತು. ಇದು ಹಿಂದಿನ ಮಾದರಿಗಿಂತಲೂ ಹೆಚ್ಚುವರಿ 40-ಬಿಎಚ್ಪಿ ಉತ್ಪಾದಿಸುವ ಗುಣ ಹೊಂದಿದೆ.

ಎಂಜಿನ್ ಸಾಮರ್ಥ್ಯ
ನೂತನ ಲಂಬೋರ್ಗಿನಿ ಅವೆಂಟಡೊರ್ ಕಾರಿನಲ್ಲಿರುವ ಅತ್ಯಂತ ಶಕ್ತಿಶಾಲಿ 6.5-ಲೀಟರ್ ವಿ12 ಸೂಪರ್ ಕಾರು ಎಂಜಿನ್ 730 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.


Click it and Unblock the Notifications








