Just In
- 6 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 6 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 7 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 9 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಜಾಗ್ವಾರ್ ಕಾರಿನ ಸ್ಥಿತಿ ನೋಡಿ
ಶಿವಮೊಗ್ಗದ ಹೆದ್ದಾರಿಯಲ್ಲಿ ಐಷಾರಾಮಿ ಜಗ್ವಾರ್ ಎಕ್ಸ್ಎಫ್ ಸೆಡಾನ್ ಕಾರು ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಅಪ್ಪಳಿಸಿದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.
ಬಹಳಷ್ಟು ಅಪಘಾತಗಳು ನಿರ್ಲಕ್ಷದಿಂದ ಸಂಭವಿಸುತ್ತವೆ ಎಂಬುದು ನಮ್ಮ ನಿಮ್ಮೆಲರಿಗೂ ತಿಳಿದಿರುವ ವಿಚಾರ. ಆದರೆ ಇನ್ನು ಹೆಚ್ಚು ಅಪಘಾತಗಳು ಭೂಮಿ ಮೇಲೆ ಜೀವಿಸುವ ಮೂಕ ಪ್ರಾಣಿಗಳಿಂದ ಸಂಭವಿಸುತ್ತದೆ ಎಂದರೆ ನೀವು ನಂಬಲೇ ಬೇಕು.
ಹೌದು, ಏನು ತಿಳಿಯದ ಮೂಕ ಪ್ರಾಣಿಗಳು ಹೆದ್ದಾರಿಗಳಲ್ಲಿ ಹಠಾತ್ ಎಂಟ್ರಿ ಕೊಟ್ಟು ಹೆಚ್ಚಿನ ಮಟ್ಟದ ಪ್ರಾಣಿ ಹಾನಿ ಮಾಡಿವೆ, ಅದೇ ರೀತಿ ತಮ್ಮ ಪ್ರಾಣಗಳನ್ನೂ ಕಳೆದುಕೊಂಡಿವೆ ಕೂಡ. ಇದೇ ರೀತಿಯ ಘಟನೆಯೊಂದು ಶಿವಮೊಗ್ಗ ಸಮೀಪ ಸಂಭವಿಸಿದೆ.
ಶಿವಮೊಗ್ಗ ಬಳಿ ಇತ್ತೀಚೆಗೆ ನೆಡೆದ ಅಪಘಾತದಲ್ಲಿ ಐಷಾರಾಮಿ ಜಗ್ವಾರ್ ಎಕ್ಸ್ಎಫ್ ಸೆಡಾನ್ ಕಾರು ರಸ್ತೆಯ ಮಧ್ಯೆ ನಿಂತಿದ್ದ ಎಮ್ಮೆಗೆ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಚಿತ್ರಗಳಲ್ಲಿ ಕಾರಿನ ಸ್ಥಿತಿ ಗಮನಿಸಿದರೆ ಕಾರಿನಲ್ಲಿದ್ದವರು ಖಂಡಿತವಾಗಿಯೂ ತೊಂದರೆಗೀಡಾಗಿರಬಹುದು ಎಂಬ ಅನುಮಾನ ಬಾರದೆ ಇರಲಾರದು.
ಈ ಅಪಘಾತದ ಬಗ್ಗೆ ಟೀಮ್ ಬಿಎಚ್ಪಿ ವರದಿ ಮಾಡಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯ ತೀವ್ರತೆ ಗಮನಿಸಿದರೆ ಎಮ್ಮೆ ಸಹ ಬದುಕುಳಿದಿರುವ ಸಾಧ್ಯತೆ ಕಡಿಮೆ ಇದ್ದು, ಕಾರಿನ ಸಂಪೂರ್ಣ ವೇಗ ಎಮ್ಮೆಯನ್ನು ಸಾವಿನ ಕದ ತಟ್ಟುವಂತೆ ಮಾಡಿರುವುದು ವಿಷಾದಕರ ಸಂಗತಿ.
ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರು ಬಂಡೆಯಂತಹ ಎಮ್ಮೆಗೆ ಅಪ್ಪಳಿಸಿದ್ದು ಅಲ್ಲದೆ ಎರಡು ಬಾರಿ ಪಲ್ಟಿ ಹೊಡೆದು ನೇರ ಹೋಗಿ ರಸ್ತೆ ಪಕ್ಕದ ಇಕ್ಕಲಕ್ಕೆ ಸಿಲುಕಿಹಾಕಿಕೊಂಡಿದೆ.
ನಸುಕಿನ ವೇಳೆಯಲ್ಲಿ ಸಂಭವಿಸಿರುವ ಈ ರಸ್ತೆ ಅಪಘಾತದಲ್ಲಿ ಮಾರ್ಗ ಮಧ್ಯೆ ನಿಂತಿದ್ದ ಎಮ್ಮೆ ದೂರದಿಂದ ಗೋಚರಿಸದೇ ಇರುವುದು ಇಷ್ಟೆಲ್ಲ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಸೂಪರ್ ಲಾಗ್ಜುರಿ ಕಾರು ಜಾಗ್ವಾರ್ ಎಮ್ಮೆಗೆ ಅಪ್ಪಳಿಸುವ ಮುನ್ನ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರಣ ಎಮ್ಮೆಯನ್ನು ಅಪಘಾತದಿಂದ ತಪ್ಪಿಸಲು ಸಾಧ್ಯವಾಗದೆ ಇರಬಹುದು ಎನ್ನಲಾಗಿದೆ.
ಅಪಘಾತ ಸಂಭವಿಸಿದ ನಂತರ ನಿಯಂತ್ರಣ ಸಿಗದೆ ಜಾಗ್ವಾರ್ ಕಾರು ರಸ್ತೆ ಬಿಟ್ಟು ಪಕ್ಕಕ್ಕೆ ಸರಿದಿದ್ದು, ಇದರಿಂದಾಗಿ ಎರಡು ಮೂರು ಬಾರಿ ಪಲ್ಟಿ ಆಗಿದೆ. ಜಾಗ್ವರ್ ಕಾರಿನ ಮುಂಭಾಗದ ಬೊನೆಟ್ ಸಂಪೂರ್ಣ ಹಾಳಾಗಿದ್ದು, ವಿಂಡ್ಶೀಲ್ಡ್ ಮತ್ತು ಕಾರಿನ ಮೇಲ್ಚಾವಣಿ ಜಖಂಗೊಂಡಿದೆ.
ಪದೇ ಪದೇ ಈ ರೀತಿಯ ದುರ್ಘಟನೆಗಳು ಸಂಭವಿಸುತ್ತಿರುವುದರಿಂದ, ಪ್ರತಿಯೊಬ್ಬ ಕಾರು ಸವಾರನೂ ಯಾವ ಸಮಯದಲ್ಲಿ ಏನಾಗುವುದೋ ಎಂಬ ಭಯದಲ್ಲಿಯೇ ಕಾರು ಚಾಲನೆ ಮಾಡಬೇಕಾದ ಪರಿಸ್ಥಿತಿ ಉಂಟಾದಿದೆ.
ಆದಷ್ಟು ಬೇಗ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಯೊಂದು ರಸ್ತೆ ಹೆದ್ದಾರಿಗೂ ತಂತಿ ಬೇಲಿ ಅಳವಡಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದೇ kannada.drivespark ತಂಡದ ಆಶಯವಾಗಿದೆ.