Just In
- 7 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 8 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 9 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 9 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೆನ್ನೈಯಿಂದ ದೆಹಲಿಗೆ ಬುಲೆಟ್ ಟ್ರೈನ್ ಬಿಡ್ತೀವಿ: ಸುರೇಶ ಪ್ರಭು
ಎಲ್ಲಾ ಅಂದುಕೊಂಡಂತೆ ನೆಡೆದರೆ ಇನ್ನು ಹತ್ತು ಹದಿನೈದು ವರ್ಷಗಳ ಒಳಗಾಗಿ ನೀವು ಒಂದು ಗಂಟೆಯೊಳಗೆ 600 ಕಿಲೋಮೀಟರು ಲೆಕ್ಕದಲ್ಲಿ ರೈಲು ಪ್ರಯಾಣ ಮಾಡಲಿದ್ದೀರಿ.
ಹೊಸ ರೈಲು ಯೋಜನೆಗಳನ್ನು ಉದ್ಘಾಟಿಸುವ ಸಲುವಾಗಿ ಚೆನೈಗೆ ಭೇಟಿ ನೀಡಿದ್ದ ಸುರೇಶ ಪ್ರಭು 2030 ಮಿಷನ್ ಮತ್ತು ಸಚಿವಾಲಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
"2030 ಮಿಷನ್ ಪ್ರಕಾರ ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಶಕೆ ಆರಂಭಿಸಲು ಹೊರಟಿದ್ದು, ಪ್ಯಾಸೆಂಜರ್ ಹಾಗೂ ಗೂಡ್ಸ್ ರೈಲುಗಳ ವೇಗವನ್ನು ಹೆಚ್ಚಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದ್ದು, ಈ ಬಗ್ಗೆ ಈಗಾಗಲೇ ಕಾರ್ಯೋನ್ಮುಕವಾಗಿದ್ದೇವೆ " ಎಂದು ಚೆನ್ನೈನಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಸುರೇಶ ಪ್ರಭು ತಿಳಿಸಿದರು.
ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಪ್ರತಿ ಗಂಟೆಗೆ 600 ಕಿಮೀ ವೇಗಕ್ಕೆ ರೈಲುಗಳ ವೇಗವನ್ನು ಹೆಚ್ಚಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಸುತ್ತಿದ್ದು ಎಂದು ತಿಳಿಸಿದರು.
ಸದ್ಯ ಕೇವಲ ಒಂದು ಗಂಟೆ ಅವಧಿಯಲ್ಲಿ 350 ಕಿ.ಮೀ ನಷ್ಟು ದೂರ ಕ್ರಮಿಸುವ 6 ಹೈ ಸ್ಪೀಡ್ ರೈಲುಗಳನ್ನು ಭಾರತದಲ್ಲಿ ಹರಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ಈ ನಿಟ್ಟಿನಲ್ಲಿ ವಿದೇಶಿ ಕಂಪನಿಗಳ ಜೊತೆ ಮಾತು ಕತೆ ನೆಡೆಸಲಾಗುತ್ತಿದೆ ಹೆಚ್ಚಿನ ಮಾಹಿತಿಯನ್ನು ಸದ್ಯದರಲ್ಲಿಯೇ ತಿಳಿಸಲಾಗುವುದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದರು.
ಮಾತನ್ನು ಮುಂದುವರೆಸಿದ ಕೇಂದ್ರ ಸಚಿವ ಸುರೇಶ ಪ್ರಭು, "ವಿದೇಶಿ ಕಂಪನಿಗಳಿಗೆ ಈಗಾಗಲೇ ಈ ಬಗ್ಗೆ ತಿಳಿಸಲಾಗಿದ್ದು, ನಮ್ಮ ತಾಂತ್ರಿಕ ತಂಡ ಕಂಪನಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದು, ಕೇವಲ ಇನ್ನು ಹತ್ತು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು" ಎಂದರು.
ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಚೆನ್ನೈ ಇಂದ ದೆಹಲಿ ಪ್ರಯಾಣ ಗಮನದಲ್ಲಿಟ್ಟುಕೊಂಡು ಈ ಯೋಜನೆ ಕೈಗೆತ್ತುಕೊಂಡಿದ್ದು, ಇದರಿಂದಾಗಿ ದೆಹಲಿ ಇಂದ ಚೆನ್ನೈ ಪ್ರಾಯಾಣ ಅವಧಿ ಕಡಿಮೆಯಾಗುವುದಂತೂ ಖಂಡಿತ.
ಬಹುನಿರೀಕ್ಷಿತ ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನ ಯೋಜನೆಯ ಕೆಲಸ ಈಗಾಗಲೇ ಶುರುವಾಗಿದ್ದು, ಈ ಯೋಜನೆಯ ಪ್ರಕಾರ ಬುಲೆಟ್ ರೈಲು ಗಂಟೆಗೆ 300 ಕಿ.ಮೀ ಲೆಕ್ಕದಲ್ಲಿ ರೈಲು ಸಂಚರಿಸಲಿದೆ.
ಟ್ರೈನ್ ಸಹವಾಸ ಬೇಡಪ್ಪ ಅನ್ನೋರಿಗೆ ನೆಚ್ಚಿನ ಆಯ್ಕೆ ಈ ಹೊಚ್ಚ ಹೊಸ ಕಾರು ಹೋಂಡಾ ಸಿವಿಕ್ 2017.