Just In
- 29 min ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- 37 min ago Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- 49 min ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- 2 hrs ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡಿ ತಗ್ಲಾಕಿಕೊಂಡ ಪುಂಡರು
ಬಹುತೇಕ ಬೈಕ್ ಉತ್ಸಾಹಿಗಳಿಗೆ ಬೈಕುಗಳಲ್ಲಿ ಸ್ಟಂಟ್ ಮಾಡುವುದೆಂದರೆ ಒಂದು ರೀತಿಯ ಉತ್ಸಾಹ. ಸ್ಟಂಟ್ ಎನ್ನುವುದು ಅನೇಕರಿಗೆ ಹವ್ಯಾಸವೂ ಹೌದು. ಜವಾಬ್ದಾರಿ ಹೊಂದಿರುವ ಬೈಕ್ ಸವಾರನು ಯಾವಾಗಲೂ ರಸ್ತೆ ನಿಯಮಗಳನ್ನು ಪಾಲಿಸುತ್ತಾನೆ.
ಸಾರ್ವಜನಿಕ ರಸ್ತೆಗಳಲ್ಲಿ ಯಾವ ರೀತಿ ವಾಹನ ಚಲಾಯಿಸಬೇಕೆಂಬ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಸ್ಟಂಟ್ ಮಾಡುವ ಹೆಚ್ಚಿನ ಸವಾರರು ರಸ್ತೆಯಲ್ಲಿರುವ ಇತರ ಸಾರ್ವಜನಿಕರ ವಿರುದ್ಧ ತಲೆಕೆಡಿಸಿಕೊಳ್ಳುವುದಿಲ್ಲ. ಬೈಕ್ ಕೈಗೆ ಸಿಕ್ಕಿದ ತಕ್ಷಣ ಖುಷಿಗಾಗಿ ಸ್ಟಂಟ್ ಮಾಡುತ್ತಾರೆ.
ಕೆಲವರು ಮಾಡುವ ಸ್ಟಂಟ್ನಿಂದಾಗಿ ಇಡೀ ಬೈಕ್ ಸವಾರರ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿರುವವರಿಂದ ತೊಂದರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ, ಬೆಂಗಳೂರು ಟ್ರಾಫಿಕ್ ಪೊಲೀಸರು ವ್ಹೀಲಿಂಗ್ ಮಾಡುವವರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.
ಈ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 12 ಯುವಕರನ್ನು ಬಂಧಿಸಲಾಗಿದೆ. ಟ್ರಾಫಿಕ್ ಪೊಲೀಸರು ಸಿವಿಲ್ ಡ್ರೆಸ್ನಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 12 ಮಂದಿ ಬೈಕ್ ಸವಾರರನ್ನು ಬಂಧಿಸಿದ್ದಾರೆ.
ಇದರ ಜೊತೆಗೆ ಕೆಟಿಎಂ, ಪಲ್ಸರ್, ಸ್ಕೂಟರ್ ಹಾಗೂ ಕೆಲವು ಟೂ ಸ್ಟ್ರೋಕ್ ಬೈಕ್ ಸೇರಿದಂತೆ 9 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವವರಿಂದ ಬೆಂಗಳೂರಿಗರು ಭಯಭೀತರಾಗಿದ್ದಾರೆ.
ಹಲವು ಬೈಕ್ ಸವಾರರು ತಮ್ಮ ಬೈಕುಗಳನ್ನು ವ್ಹೀಲಿಂಗ್ ಮಾಡುವ ಕಾರಣಕ್ಕಾಗಿಯೇ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಹೊರ ತೆಗೆಯುತ್ತಾರೆ. ಪೊಲೀಸರು ಇಂತಹ ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರೂ, ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.
ಈ ಕಾರಣಕ್ಕಾಗಿಯೇ, ವ್ಹೀಲಿಂಗ್ ನಡೆಸುವವರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಲಾಯಿತು. ಮಫ್ತಿಯಲ್ಲಿದ್ದ ಪೊಲೀಸರು ಕತ್ತಲೆಯಾದ ನಂತರ ಸ್ಟಂಟರ್ಗಳು ಬರುವ ರಸ್ತೆಗಳಲ್ಲಿ ಕಾರ್ಯಾಚರಣೆಗಿಳಿದರು.
ಪೊಲೀಸರು ಇನ್ನೂ ಹೆಚ್ಚಿನ ಸ್ಟಂಟರ್ಗಳನ್ನು ಬಂಧಿಸುವವರೆಗೆ ಹಾಗೂ ಅವರ ಬೈಕ್ಗಳನ್ನು ವಶಪಡಿಸಿಕೊಳ್ಳುವವರೆಗೂ ಈ ಕಾರ್ಯಾಚರಣೆಯನ್ನು ಮುಂದುವರೆಸಲು ಬಯಸಿದ್ದಾರೆ. ವಾಹನ ಸವಾರರಲ್ಲಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮಾಡಲು ಬೆಂಗಳೂರು ಸಂಚಾರ ಪೊಲೀಸರು ಸಾಕಷ್ಟು ಸಕ್ರಿಯರಾಗಿದ್ದಾರೆ.
ಕೆಲವು ತಿಂಗಳುಗಳ ಹಿಂದಷ್ಟೇ, ಬೆಂಗಳೂರು ಟ್ರಾಫಿಕ್ ಪೊಲೀಸರು ಕಾರು ಹಾಗೂ ಬೈಕುಗಳನ್ನು ಮಾರ್ಪಡಿಸುತ್ತಿದ್ದ ಮೆಕ್ಯಾನಿಕ್ ಹಾಗೂ ಗ್ಯಾರೇಜುಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಬಗ್ಗೆ ವರದಿಗಳಾಗಿದ್ದವು.
ಇನ್ನು ಈ ರೀತಿಯ ಅಪಾಯಕಾರಿ ವ್ಹೀಲಿಂಗ್ ಬಗ್ಗೆ ಹೇಳುವುದಾದರೆ, ವ್ಹೀಲಿಂಗ್ ಮಾಡುವವರು ತಮ್ಮ ಜೀವಕ್ಕೆ ಮಾತ್ರವಲ್ಲದೇ, ರಸ್ತೆಯಲ್ಲಿ ಓಡಾಡುವವರ ಜೀವಕ್ಕೂ ಸಂಚಕಾರ ತರುತ್ತಿದ್ದಾರೆ. ವ್ಹೀಲಿಂಗ್ ಮಾಡುವವರು ಹೆಲ್ಮೆಟ್ ಆಗಲಿ, ರೈಡಿಂಗ್ ಜಾಕೆಟ್ ಹಾಗೂ ಬೂಟ್ಗಳನ್ನಾಗಲೀ ಧರಿಸುತ್ತಿಲ್ಲ.
ಕೆಲ ದಿನಗಳ ಹಿಂದಷ್ಟೇ ಮುಂಬೈ ಪೊಲೀಸರು ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿದ್ದ ಟಿಕ್ ಟಾಕ್ ಸ್ಟಾರ್ ವಿರುದ್ಧ ಕ್ರಮ ಕೈಗೊಂಡಿದ್ದರು. ವ್ಹೀಲಿಂಗ್ ಮಾಡುವುದು ತಪ್ಪು ಎಂದು ಹೇಳಲಾಗುವುದಿಲ್ಲ.
ಆದರೆ ಸಾರ್ವಜನಿಕ ರಸ್ತೆಗಳಿಗೆ ಬದಲಾಗಿ, ಮುಚ್ಚಿದ ರಸ್ತೆಗಳು, ನಿರ್ಜನ ತಾಣಗಳು ಹಾಗೂ ಸಂಚಾರಕ್ಕೆ ಮುಕ್ತವಾಗಿರದ ಇತರ ಸ್ಥಳಗಳಲ್ಲಿ ಮಾಡುವುದು ಒಳ್ಳೆಯದು. ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವುದರಿಂದ ಸವಾರನ ಜೊತೆಗೆ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ಬರಲಿದೆ. ಹೆಲ್ಮೆಟ್ನಂತಹ ಸುರಕ್ಷತಾ ಸಾಧನಗಳನ್ನು ಹೊಂದುವುದರಿಂದ ಅಪಘಾತವಾದಾಗ ಜೀವ ಉಳಿಯಲು ನೆರವಾಗಲಿದೆ.