Just In
- 1 hr ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 1 hr ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 2 hrs ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 2 hrs ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೈಕುಂಠ ಏಕಾದಶಿಯಂದು ಕೃಷ್ಣಯ್ಯ ಶೆಟ್ಟಿ ಹಿಟ್ ಆಂಡ್ ರನ್
ರಾಜ್ಯದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಕಾರು(ಕೆಎ-01. ಎಂಎಫ್-3973) ಉಪ್ಪಾರಪೇಟೆಯ ಶೇಷಾದ್ರಿ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ವಕೀಲರ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಆದರೆ ಹಿಟ್ ಆಂಡ್ ರನ್ ತಂತ್ರ ಅನುಸರಿಸಿದ ಕೃಷ್ಣಯ್ಯ ಶೆಟ್ಟಿ ಕಾರು ಚಾಲಕ ದೇವರಾಜು ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಗಳು ಹೇಳಿವೆ.
ಮಾಜಿ ಸಚಿವರ ಕಾರು ಡಿಕ್ಕಿ ಹೊಡೆದಾಗ ಬೈಕ್ ಸವಾರ ಜಗದೀಶ್ ನೆಲಕ್ಕೆ ಬಿದ್ದಿದ್ದರು. ಅವರ ಎಡಗೈ ಎಲುಬು ಮುರಿದಿತ್ತು. ಆದರೆ ಗಾಯಗೊಂಡ ವ್ಯಕ್ತಿಗೆ ಕೃಷ್ಣಯ್ಯ ಶೆಟ್ಟಿ ಯಾವುದೇ ಮಾನವೀಯತೆ ತೋರಿಸಲಿಲ್ಲ. ಬದಲಿಗೆ ಕಾರು ಚಾಲಕ ದೇವರಾಜು ಹಿಟ್ ಆಂಡ್ ರನ್ ತಂತ್ರ ಅನುಸರಿಸಿದ್ದರು.
ಗಾಯಗೊಂಡ ಜಗದೀಶನನ್ನು ತಕ್ಷಣ ಸ್ನೇಹಿತರು ಆಸ್ಪತ್ರೆಗೆ ಸಾಗಿಸಿದರು. ಅಪಘಾತದ ಕುರಿತು ದೂರು ದಾಖಲಿಸದಂತೆ ಮತ್ತು ಚಿಕಿತ್ಸೆ ವೆಚ್ಚ ಭರಿಸುವುದಾಗಿ ಕೃಷ್ಣಯ್ಯ ಶೆಟ್ಟಿ ಪಿಎ ಸುರೇಶ್ ತಿಳಿಸಿದ್ದರಂತೆ. ಕೃಷ್ಣಯ್ಯ ಶೆಟ್ಟಿ ಅಳಿಯ ಹರ್ಷವರ್ಧನ ಕೂಡ ಜಗದೀಶನನ್ನು ಭೇಟಿಯಾಗಿದ್ದರು. ಹಿಟ್ ಆಂಡ್ ರನ್ ದೂರಿಗೆ ಬದಲಾಗಿ ಸ್ವಯಂ ಆಕಸ್ಮಿಕ ಅಪಘಾತ ದೂರು ದಾಖಲಿಸುವಂತೆ ಸೂಚಿಸಿದ್ದರು ಎಂದು ವರದಿಗಳು ಹೇಳಿವೆ.
ಕೊನೆಗೂ ಕೃಷ್ಣಯ್ಯ ಶೆಟ್ಟಿ ಕಾರಿನಲ್ಲಿ ತಾವಿರಲಿಲ್ಲ ಎಂದು ವಾದಿಸಿದ್ದಾರೆ. ಜಗದೀಶ್ ಗೆ 40 ಸಾವಿರ ರು. ಪರಿಹಾರ ನೀಡಿದ್ದು ಉಳಿದ ಹಣವನ್ನು ಶೀಘ್ರದಲ್ಲಿ ನೀಡುವುದಾಗಿ ಹೇಳಿದರಂತೆ. ಮಾಜಿ ಸಚಿವರೊಬ್ಬರು ಕನಿಷ್ಠ ಕರುಣೆ, ಅನುಕಂಪವಿಲ್ಲದೇ ವರ್ತಿಸಿದ್ದು ಮಾತ್ರ ಯಾರಿಗೂ ಇಷ್ಟವಾಗುವಂತ್ತಿಲ್ಲ.
ಸಂಚಾರಿ ನೀತಿ ನಿಯಮಗಳನ್ನು ಪಾಲಿಸಿ ಎಂದು ಹೇಳುವ ಸರಕಾರ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಸುರಕ್ಷಿತ ಪ್ರಯಾಣ ಎಲ್ಲರ ಆದ್ಯತೆಯಾಗಬೇಕು.(ಕನ್ನಡ ಡ್ರೈವ್ ಸ್ಪಾರ್ಕ್ )