ರಸ್ತೆ ಅಪಘಾತ ತಾತ್ಕಾಲಿಕ ಪರಿಹಾರ- ಭಾಗ 2

ಕೆಲವೊಮ್ಮೆ ಅಪಘಾತಕ್ಕೆ ಈಡಾದತನದ್ದೇ ತಪ್ಪಿದರೂ, ವಾಹನ ಚಾಲಕನ ತಪ್ಪಲ್ಲದಿದ್ದರೂ ಆತ ವಕಾಲತ್ತು ಮಾಡುವಂತಿಲ್ಲ. ಎರಡು ಕಣ್ಣು ಕಳೆದುಕೊಳ್ಳುವುದು ಅಥವಾ ಕಿವಿ ಕೇಳಿಸದಾಗುವುದು ಅಥವಾ ದೇಹದ ಯಾವುದಾದರೂ ಅಂಗ ತುಂಡಾಗುವುದು ಇತ್ಯಾದಿಗಳು ಅಪಘಾತದಿಂದ ಉಂಟಾಗುವ ಶಾಶ್ವತ ಅಂಗವೈಕಲ್ಯಗಳಾಗಿವೆ.
ಅಪಘಾತದಿಂದ ಸಾವನ್ನಪ್ಪಿದರೆ ನೀಡಬೇಕಾದ ಪರಿಹಾರ ಧನ 50 ಸಾವಿರ ರೂ. ಅಥವಾ ಶಾಶ್ವತ ಅಂಗವೈಕಲ್ಯವುಂಟಾದರೆ 25 ಸಾವಿರ ರೂ. ಪರಿಹಾರ ಧನ ನೀಡಬೇಕಾಗುತ್ತದೆ. ರಸ್ತೆ ಅಪಘಾತ ಪರಿಹಾರ ಧನವನ್ನು ಕಡಿಮೆ ಮಾಡಲಾಗುವುದಿಲ್ಲ ಮತ್ತು ಕ್ಲೈಂ ಪಿಟಿಷನ್ ಗೆ ಅನುಗುಣವಾಗಿ ರಸ್ತೆ ಅಪಘಾತ ಪರಿಹಾರ ಧನ ಪಾವತಿಸುವ ಸ್ವಾತಂತ್ರ್ಯವಿದೆ. ಎಲ್ಲಾದರೂ ಅಂತಿಮವಾಗಿ ಕ್ಲೈಂ ಪಿಟಿಷನ್ ಡಿಸ್ ಮಿಸ್ ಮಾಡಿದರೆ ರಸ್ತೆ ಅಪಘಾತ ಪರಿಹಾರ ಧನವನ್ನು ಮತ್ತೆ ಮರುಪಾವತಿಸಲಾಗುವುದಿಲ್ಲ.
ಕ್ಲೈಂ ಪಿಟಿಷನ್ ನಲ್ಲಿ ಹೇಳಲಾದ ಮೊತ್ತವು ತಾತ್ಕಾಲಿಕ ಪರಿಹಾರ ಧನಕ್ಕಿಂತ ಅಧಿಕವಾಗಿದ್ದರೆ ತಾತ್ಕಾಲಿಕ ಪರಿಹಾರ ಧನವನ್ನು ಕಡಿಮೆ ಮಾಡಲಾಗುವುದು. ವಾಹನದ ಮಾಲೀಕನ ತಪ್ಪಿನಿಂದ ಅಪಘಾತ ಸಂಭವಿಸಿದೆ ಅಂತ ಅಪಘಾತಕ್ಕೆ ಈಡಾದ ವ್ಯಕ್ತಿ ರುಜುವಾತು ಮಾಡುವ ಅಗತ್ಯವಿಲ್ಲ.


Click it and Unblock the Notifications








