Just In
- 8 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 9 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 10 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 10 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೈರಿ: ಬದುಕೆಂಬ ಮೊಬೈಲ್ ಡಿಸ್ಕನೆಕ್ಟ್ ಆಗದಿರಲಿ
ನನ್ನ ಓರಗೆಯ ವ್ಯಕ್ತಿಯೊಬ್ಬರು ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡ ಘಟನೆ ನನ್ನನ್ನು ವಿಹ್ವಲಗೊಳಿಸಿದೆ. ಹೆಲ್ಮೆಟ್ ಧರಿಸಿ ಬೈಕ್ ರೈಡ್ ಮಾಡಿದ್ರೆ ಪ್ರಾಣವಾದರೂ ಉಳಿಯಬಹುದಿತ್ತೇನೋ. ಆ ಹುಡುಗ ಅಪಘಾತವಾಗುವ ಸಂದರ್ಭದಲ್ಲಿ ಫೋನಿನಲ್ಲೂ ಮಾತನಾಡುತ್ತಿದ್ದ. ಆ ಎರಡು ತಪ್ಪುಗಳಿಗೆ ತನ್ನ ಪ್ರಾಣವನ್ನೇ ತೆತ್ತಿದ್ದ.
ಪ್ರತಿದಿನ
ಪತ್ರಿಕೆಗಳಲ್ಲಿ
ಅಪಘಾತದ
ಸುದ್ದಿಗಳು
ಇದ್ದೇ
ಇರುತ್ತವೆ.
ಅದರಲ್ಲೂ
ದ್ವಿಚಕ್ರವಾಹನ
ಅಪಘಾತದಲ್ಲಿ
ಪ್ರಾಣ
ಕಳೆದುಕೊಳ್ಳುವರೇ
ಹೆಚ್ಚು.
ಸಂಚಾರಿ
ನಿಯಮಗಳನ್ನು
ಪಾಲಿಸದೆ
ಇರುವುದು
ಮತ್ತು
ಸುರಕ್ಷತೆಯ
ಸಾಧನಗಳನ್ನು
ಬಳಸದೆ
ಇರುವುದು
ರಸ್ತೆ
ಅಪಘಾತಗಳಲ್ಲಿ
ಹೆಚ್ಚಿನ
ಜನರ
ಪ್ರಾಣ
ಕಬಲಿಸುತ್ತಿದೆ.
ದ್ವಿಚಕ್ರ ವಾಹನ ಸವಾರಿ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಕೂಡ ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತಿದೆ. ಬೈಕ್ ರೈಡ್ ಮಾಡುತ್ತ ಫೋನಿನಲ್ಲಿ ಕರೆ ಮಾಡಿ ಎಲ್ಲೋ ಮಾತಿನಲ್ಲಿ ಕಳೆದುಹೋಗುತ್ತಾರೆ. ಇಂತಹ ಸಮಯದಲ್ಲಿ ಬೈಕ್ ನಿಯಂತ್ರಣ ತಪ್ಪಿ, ಅಥವಾ ಇನ್ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆಯುತ್ತದೆ.
ಬೆಂಗಳೂರಿನಂತಹ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಟೈಂ ಪಾಸ್ ಮಾಡಲು ಕೆಲವರು ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಹೀಗೆ ಮಾತನಾಡುತ್ತ ರಸ್ತೆ ದಾಟುವ ಜನರಿಗೆ ಅಥವಾ ಬೇರೆ ವಾಹನಗಳಿಗೆ ಅಪಘಾತ ಮಾಡುತ್ತಾರೆ. ಅಂಕಿಅಂಶಗಳ ಪ್ರಕಾರ ದ್ವಿಚಕ್ರವಾಹನ ಅಪಘಾತಗಳಲ್ಲಿ ಶೇಕಡ 80ರಷ್ಟು ಜನರು ಪ್ರಾಣ ಕಳೆದುಕೊಳ್ಳಲು ಹೆಲ್ಮೆಟ್ ಧರಿಸದೆ ಇರುವುದೇ ಪ್ರಮುಖ ಕಾರಣವಾಗಿದೆ.
ಹಲವು ಸಂಘ ಸಂಸ್ಥೆಗಳು ಸಂಚಾರಿ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಕುರಿತು ಹಲವು ಜಾಥಗಳು, ವಿಚಾರಗೋಷ್ಠಿಗಳು ಹೆಚ್ಚಾಗಬೇಕಿದೆ. ಫೇಸ್ ಬುಕ್ ಮುಂತಾದ ಸೋಷಿಯಲ್ ಮೀಡಿಯಾಗಳಲ್ಲೂ ಸಂಚಾರಿ ನೀತಿನಿಯಮಗಳ ಕುರಿತು ಎಚ್ಚರ ಮೂಡಿಸುವ ಪ್ರಕ್ರಿಯೆ ಹೆಚ್ಚಾಗಬೇಕಿದೆ.
ಈಗ ಹೆಲ್ಮೆಟ್ ಧರಿಸದೇ ಇರುವುದಕ್ಕೆ ನೂರು ರುಪಾಯಿ ದಂಡವಿದೆ. ಇದು ತೀರಾ ಕಡಿಮೆ ಎನ್ನುವುದು ನನ್ನ ಅಭಿಪ್ರಾಯ. ಹೆಲ್ಮೆಟ್ ಧರಿಸದೆ ಇರುವುದು ಅಥವಾ ಮೊಬೈಲ್ ಫೋನ್ ಬಳಕೆ ಮಾಡುವುದು ಸಂಚಾರಿ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಹೆಚ್ಚಿನವರು ಟ್ರಾಫಿಕ್ ಪೊಲೀಸರನ್ನು ಕಂಡಾಕ್ಷಣ ಮಾತ್ರ ಹೆಲ್ಮೆಟ್ ಧರಿಸುತ್ತಾರೆ. ಸ್ವಯಂಪ್ರೇರಿತವಾಗಿ ಹೆಲ್ಮೆಟ್ ಧರಿಸುವ ಮನೋಭಾವ ಬರಬೇಕಿದೆ.
ನೀವು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ನಿಮ್ಮನ್ನು ನಂಬಿರುವರು ಅನಾಥರಾಗುತ್ತಾರೆ. ನಿಮ್ಮ ಮೇಲೆ ಕನಸುಗಳನ್ನು ಇಟ್ಟುಕೊಂಡವರ ಬದುಕು ಕಮರಿ ಹೋಗಬಹುದು. ಅಮೂಲ್ಯ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ. ಡ್ರೈವಿಂಗ್ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡದಿರಿ.
ನಿಮ್ಮ ಬದುಕೆಂಬ ಫೋನ್ ಸ್ವಿಚ್ ಆಫ್ ಆಗದಿರಲಿ.
ಓದಿ: ಆಟೋ ಅಡ್ಡೆಯಲ್ಲಿ ಕುಳಿತ ಪಡ್ಡೆ ವೇಗಿಯ ಬ್ರಿಲಿಯಂಟ್ ಐಡಿಯಾಸ್