Just In
- 8 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 9 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 10 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 10 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರಿನಲ್ಲಿ ಉಸಿರುಗಟ್ಟಿ ಸತ್ತ 2 ವರ್ಷದ ಪಾಪು
ಇದು ಚೆನ್ನೈನಲ್ಲಿ ನಿನ್ನೆ(ಸೋಮವಾರ) ನಡೆದ ಘಟನೆ. ಇಂತಹ ಘಟನೆಗಳು ಆಗಾಗ ವರದಿಯಾಗುತ್ತಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸುವಂತೆ ಕಾಣುತ್ತಿಲ್ಲ. ಕೆಟ್ಟಮೇಲೆ ಬುದ್ದಿ ಎಂಬಂತೆ ಆಮೇಲೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ. ಹೀಗಾಗಿ ಕನ್ನಡ ಡ್ರೈವ್ ಸ್ಪಾರ್ಕ್ ದಿನಕ್ಕೊಂದು ಸಲಹೆ ಮಾಲಿಕೆಯಲ್ಲಿ ಈ ಸತ್ಯಘಟನೆಯನ್ನೇ ನೀಡಲಾಗಿದೆ.
ನಿನ್ನೆ ಅಪರಾಹ್ನ ಹನ್ನೆರಡು ಗಂಟೆಯ ಸಮಯದಲ್ಲಿ ತುರ್ತು ಮೀಟಿಂಗ್ ನೆಪದಲ್ಲಿ ಕಾರಿನೊಳಗೆ ಎರಡು ವರ್ಷದ ಹಸುಳೆಯನ್ನು ಲಾಕ್ ಮಾಡಿ ತಂದೆಯೊಬ್ಬ ಹೊರಕ್ಕೆ ಹೋಗಿದ್ದ. ಆದರೆ ಒಂದು ಗಂಟೆ ಕಳೆದು ಕಾರಿನ ಲಾಕ್ ತೆಗೆದು ನೋಡಿದಾಗ ಮಗುವಿನ ದೇಹ ತಣ್ಣಗಾಗಿತ್ತು. ಕಾರಿನೊಳಗಿನ ವಾತಾವರಣಕ್ಕೆ ಉಸಿರುಗಟ್ಟಿ ಮಗು ಸತ್ತು ಹೋಗಿತ್ತು.
ಮಾರುತಿ ಹೆಸರಿನ ತಂದೆ ಎರಡು ವರ್ಷದ ಹಸುಳೆ ಇಳಮಾರನ್ ಸುರಕ್ಷಿತವಾಗಿರಲಿ ಎಂದು ಏರ್ ಕಂಡಿಷನರ್ ಆನ್ ಮಾಡಿ ಡೋರ್ ಲಾಕ್ ಮಾಡಿ ಹೋಗಿದ್ದರು. "ಹತ್ತು ನಿಮಿಷದಲ್ಲಿ ಮೀಟಿಂಗ್ ಮುಗಿಸಬಹುದೆಂದು ಭಾವಿಸಿದ್ದರು. ಆದರೆ ಅದು ಮುಗಿದಾಗ ಒಂದು ಗಂಟೆ ಕಳೆದಿತ್ತು. ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆ ತಂದರೂ ಕಾಲಮಿಂಚಿತ್ತು" ಎಂದು ಡಾಕ್ಟರ್ ಮಾಹಿತಿ ನೀಡಿದ್ದಾರೆ.
"ಇದನ್ನು ಅನೈಸರ್ಗಿಕ ಸಾವು ಸಿಆರ್ ಪಿಸಿ ಸೆಕ್ಷನ್ 174 ಅಡಿ ಪ್ರಕರಣ ದಾಖಲಿಸಿಲ್ಲ. ಈ ಸಾವನ್ನು ವಿಶೇಷ ಪ್ರಕರಣ ಎಂದು ದಾಖಲಿಸಿ ಇಳಮಾರನ್ ತಂದೆ ಅಥವಾ ತಾಯಿ ಮೇಲೆ ಪ್ರಕರಣ ದಾಖಲಿಸಲಾಗುವುದು" ಎಂದು ಅಲ್ಲಿನ ಜಂಟಿ ಆಯುಕ್ತ ಕೆ ಶಂಕರ್ ಹೇಳಿದ್ದಾರೆ.
"ಕಾರಿನೊಳಗೆ ಮಕ್ಕಳು ಮೃತರಾಗುವುದು ಅಸಹಜವಲ್ಲ. ಇಂತಹ ಹತ್ತು ಹಲವು ಘಟನೆಗಳು ವರದಿಯಾಗುತ್ತಿವೆ. ಏರ್ ಕಂಡಿಷನರ್ ನಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೆ ಯಾವುದೇ ವಿಷಾನಿಲ ಬಿಡುಗಡೆಯಾಗುವುದಿಲ್ಲ. ಆದರೆ ಎಳೆಯ ಮಕ್ಕಳು ಕಾರಿನೊಳಗೆ ತುಂಬಾ ಲಾಕ್ ಆಗಿ ತುಂಬಾ ಸಮಯವಿದ್ದರೆ, ಕಾರಿನೊಳಗೆ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ" ಎಂದು ವಿಶ್ಲೇಷಕರೊಬ್ಬರು ಹೇಳುತ್ತಾರೆ.
ಕಾರಿನೊಳಗೆ ಉಸಿರುಗಟ್ಟುವಂತಹ ಪರಿಸ್ಥಿತಿ ಬಂದಾಗ ದೊಡ್ಡವರಾದರೆ ಬಾಗಿಲು ತೆರೆದು ಅಥವಾ ಕಿಟಕಿ ಒಡೆದು ಹೊರಕ್ಕೆ ಹೋಗಬಹುದು. ಆದರೆ ಚಿಕ್ಕ ಮಕ್ಕಳಿಗೆ ಇಂತಹ ಸಮಯದಲ್ಲಿ ಹೊರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯಾವತ್ತೂ ಕಾರಿನೊಳಗೆ ಮಗುವನ್ನು ಬಾಗಿಲು ಹಾಕಿ ಹೋಗಬೇಡಿ. ಇದೇ ಇಂದಿನ ದಿನಕ್ಕೊಂದು ಸಲಹೆ. ದಯವಿಟ್ಟು ಪಾಲಿಸಿ. ಮಕ್ಕಳ ಪ್ರಾಣ ಉಳಿಸಿ (ಕನ್ನಡ ಡ್ರೈವ್ ಸ್ಪಾರ್ಕ್)