Just In
- 34 min ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- 1 hr ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- 1 hr ago Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- 1 hr ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
Don't Miss!
- News Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಜಿನುಗು ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ
ಇಡೀ ದೇಶವನ್ನೇ ನಡುಗಿಸಿದ ಟಾಟಾ ಮೋಟಾರ್ಸ್ನ ಕನಸಿನ ಕೂಸು 'ನ್ಯಾನೋ ಕಾರು' ಮತ್ತು ಸಿಂಗೂರು ಘಟಕದ ಬಗ್ಗೆ ಎದ್ದಿರುವ ವಿವಾದಗಳು ನಿಮಗೆ ತಿಳಿದೇ ಇದೆ. ಜಾಗತಿಕ ಮಟ್ಟದಲ್ಲೂ ಗಮನ ಸೆಳೆದ ಅತಿ ಅಗ್ಗದ ನ್ಯಾನೋ ಕಾರಿನ ಉತ್ಪಾದನಾ ಘಟಕವನ್ನು ಪಶ್ಚಿಮ ಬಂಗಾಳದ ಸಿಂಗೂರಿನ ಭೂ ಪ್ರದೇಶದಲ್ಲಿ ನಿರ್ಮಿಸಲು ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ನಿರ್ಧರಿಸಿತ್ತು.
ಇವನ್ನೂ ಓದಿ: ನ್ಯಾನೋ 'ಡಬ್ಬಾ ಪೀಸ್' ಅಂದವರು ಇದನ್ಮೊಮ್ಮೆ ಓದಿ
ಟಾಟಾ
ಮೋಟಾರ್ಸ್
ಮಹತ್ತರ
ಯೋಜನೆಗೆ
ಸಹಮತ
ವ್ಯಕ್ತಪಡಿಸಿದ್ದ
ಅಂದಿನ
ಸಿಪಿಎಂ
ಮುಂದಾಳತ್ವದ
ಪಶ್ಚಿಮ
ಬಂಗಾಳ
ಸರಕಾರ
ಸಿಂಗೂರ್
ಭೂ
ಪ್ರದೇಶದ
900
ಎಕರೆ
ಜಮೀನನ್ನು
ಟಾಟಾ
ಸಂಸ್ಥೆಗೆ
ಹಸ್ತಾಂತರಿಸಲು
ನಿರ್ಧರಿಸಿತ್ತು.
ಇದಕ್ಕೆ
ಆಕ್ಷೇಪ
ವ್ಯಕ್ತಪಡಿಸಿದ್ದ
ಸ್ಥಳೀಯ
ರೈತರು
ಮತ್ತು
ವಿಪಕ್ಷ
ನಾಯಕಿ
ಮಮತಾ
ಬ್ಯಾನರ್ಜಿ
ನೇತೃತ್ವದ
ತೃಣಮೂಲ
ಕಾಂಗ್ರೆಸ್
ಕಾರ್ಯಕರ್ತರು,
ಕೃಷಿ
ಭೂಮಿ
ಸ್ವಾಧೀನ
ಮಾಡುವುದರ
ವಿರುದ್ಧ
ಅನಿರ್ಧಿಷ್ಟಾವಧಿ
ಮುಷ್ಕರವನ್ನು
ಹೂಡಿದ್ದರು.
ಇದಾದ
ಬೆನ್ನಲ್ಲೇ
ಸಾಲು
ಸಾಲು
ಹಿಂಸಾಚಾರ
ಮತ್ತು
ಚಳುವಳಿ
ಪ್ರಕರಣಗಳು
ಘಟಿಸಿ
ಹೋಗಿದ್ದವು.
ರೈತ ಮತ್ತು ವಿಪಕ್ಷಗಳಿಂದ ಭಾರಿ ಪ್ರತಿಭಟನೆ ಎದುರಾಗಿದ್ದರಿಂದ ಭಾರಿ ಮುಖಭಂಗಕ್ಕೊಳಗಾಗಿದ್ದ ರತನ್ ಟಾಟಾ ನೇತೃತ್ವದ ಟಾಟಾ ಮೋಟಾರ್ಸ್ ಕೊನೆಗೆ ತಮ್ಮ ಕನಸಿನ ಕಾರಿನ ಯೋಜನೆಯನ್ನು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿಶೇಷ ಆಹ್ವಾನದ ಮೆರೆಗೆ ಸನಂದ್ ಘಟಕಕ್ಕೆ ಸ್ಥಳಾಂತರಿಸಿದ್ದರು.
ಟಾಟಾ ಮೋಟಾರ್ಸ್ ಯೋಜನೆಯಂತೆ ಬಹುನಿರೀಕ್ಷಿತ ನ್ಯಾನೋ ಕಾರು 2008ನೇ ಇಸವಿಯಲ್ಲಿ ಹೊರಬರಬೇಕಿತ್ತು. ಮಮತಾ ಬ್ಯಾನರ್ಜಿ ಅವರ 'ಕೃಷಿ ಭೂಮಿ ಉಳಿಸಿ' ಆಂದೋಲನಕ್ಕೆ ಪರಿಸರ ಕಾರ್ಯಕರ್ತರಾದ ಮೇಧಾ ಪಟ್ಕಾರ್, ಅನುರಾಧಾ ತಲ್ವಾರ್ ಮತ್ತು ಆರುಂಧತಿ ರಾಯ್ ಅವರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಸಿಂಗೂರು ಭೂಸ್ವಾಧೀನ ವಿವಾದ ಕೋರ್ಟ್ ಮೆಟ್ಟಿಲೇರಿದ ಬಳಿಕ ಅಂತಿಮವಾಗಿ 2008 ಅಕ್ಟೋಬರ್ 03ರಂದು ಘಟಕ ಸ್ಥಳಾಂತರ ಮಾಡಲು ಟಾಟಾ ನಿರ್ಧರಿಸಿತ್ತು. ಮಮತಾ ಬ್ಯಾನರ್ಜಿ ಮತ್ತು ಆಕೆಯ ಹಿಂಬಾಲಕರಿಂದ ವ್ಯಾಪಕ ಪ್ರತಿಭಟನೆ ಎದುರಾಗಿರುವುದು ಘಟಕ ಸ್ಥಳಾಂತರಕ್ಕೆ ಕಾರಣ ಎಂದು ರತನ್ ಟಾಟಾ ನೇರವಾಗಿ ಆರೋಪಿಸಿದರು. ಅಲ್ಲದೆ ಗುಜರಾತ್ ನಲ್ಲಿ ನೂತನ ನ್ಯಾನೋ ಘಟಕ ತೆರೆಯುವುದಾಗಿ ಘೋಷಿಸಿದ್ದರು.
ಭಾರಿ ಪ್ರತಿಭಟನೆಯ ನಡುವೆಯೂ 2007 ಜನವರಿ 21ರಂದು ಸಿಂಗೂರು ನ್ಯಾನೋ ಘಟಕ ನಿರ್ಮಾಣಕ್ಕೆ ಟಾಟಾ ಚಾಲನೆ ನೀಡಿತ್ತು. ಕೋಲ್ಕತ್ತಾ ಹೈ ಕೋರ್ಟ್ ಸಹ ಸಿಂಗೂರು ಭೂಸ್ವಾಧೀನವು ಕಾನೂನುಬದ್ಧವಾಗಿಲ್ಲ ಎಂಬ ತೀರ್ಪು ಹೊರಡಿಸಿರುವುದು ಟಾಟಾ ಮತ್ತು ಪಶ್ಚಿಮ ಬಂಗಾಳ ಸರಕಾರಕ್ಕೆ ದೊಡ್ಡ ಹೊಡೆತವನ್ನೇ ನೀಡಿತ್ತು.
ಸದ್ಯ ಸಿಂಗೂರಿನಿಂದ ಟಾಟಾ ಹೊರಟು ಹೋಗಿ ಎಂಟು ವರ್ಷಗಳೇ ಸಂದಿದ್ದು, ಇಲ್ಲಿನ ಟಾಟಾ ಘಟಕ ಹೇಳುವವರು ಕೇಳುವವರಿಲ್ಲದೆ ಬರಿದಾಗಿದೆ. ಸಂಸ್ಥೆ ಸ್ವಾಧೀನಪಡಿಸಿದ ಭೂಮಿಯು ಈಗ ನಿರ್ಜನ ಪ್ರದೇಶವಾಗಿ ಉಳಿದಿದೆ.
ಟಾಟಾ ಸಿಂಗೂರು ಘಟಕ ಎಷ್ಟು ಶೋಚನೀಯ ಅವ್ಯಸ್ಥೆಗೆ ತಲುಪಿದೆಯೆಂದರೆ ದನ ಮೇಯುವ ಪ್ರದೇಶವಾಗಿ ಘಟಕ ಮಾರ್ಪಟ್ಟಿರುವುದು ಖೇದಕರ ಸಂಗತಿಯಾಗಿದೆ.
ಸಿಂಗೂರು ಫಲವತ್ತಾದ ಭೂಮಿಯಲ್ಲಿ ವರ್ಷದಲ್ಲಿ ಮೂರು ಬಾರಿ ಇಳುವರಿಯನ್ನು ನೀಡಲಾಗುತ್ತದೆ. ಸಣ್ಣ ಪುಟ್ಟ ರೈತರೀಗ ಸರಕಾರ ಕೊಟ್ಟಿರುವ ಭರವಸೆಯ ಪ್ರಕಾರ ತಮ್ಮ ಭೂಮಿ ವಾಪಾಸು ಪಡೆಯುವುದಕ್ಕಾಗಿ ಕಾಯುತ್ತಿದ್ದಾರೆ.
ಒಟ್ಟಾರೆಯಾಗಿ ಸಿಂಗೂರಿನಲ್ಲಿ ಮೂಲಸೌಕರ್ಯಗಳಿಗೆ ಭಾರಿ ಹಾನಿ ಸಂಭವಿಸಿದ್ದು, ಘಟಕದಲ್ಲಿ ಪಾಳು ಬಿದ್ದಿರುವ ಟಾಟಾ ನ್ಯಾನೋ ಅವೇಶೇಷಗಳನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಕೋಟಿ ಗಟ್ಟಲೆ ರುಪಾಯಿಗಳ ಸ್ವತ್ತಿಗೆ ಹಾನಿ ಸಂಭವಿಸಿದೆ.
ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಿಂಗೂರ್ ಪ್ರದೇಶವನ್ನು ಬಳಸಿದಾಗ ಸ್ಥಳೀಯ ರೈತರಿಗೀಗ ದಿಕ್ಕು ತೋಚದಂತಾಗಿದೆ. ಪ್ರಕರಣ ಈಗಲೂ ನ್ಯಾಯಾಲಯದ ಬಳಿಯಿದ್ದು, ಸಿಂಗೂರು ಘಟಕ ನಿರ್ಜನ ಭೂಮಿಯಾಗಿ ಮಾರ್ಪಾಟ್ಟಿದೆ.
ಟಾಟಾ ನ್ಯಾನೋ: 15 ಆಸಕ್ತಿದಾಯಕ ಸತ್ಯಗಳು
ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ
ಆಲ್ಟೊ 800 vs ನ್ಯಾನೋ; ಒಂದು ಸಿಂಪಲ್ ಗೈಡ್
ಸಣ್ಣ ಕಾರಿನ ದೊಡ್ಡತನ; ಇದುವೇ ಟಾಟಾ ನ್ಯಾನೋ ಜೆನ್ ಎಕ್ಸ್
Article Source: The Quint
Image Source :Ritam Sengupta