ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್
ಯಾವತ್ತಾದರೂ ಯೋಚಿಸಿ ನೋಡಿರುವೀರಾ, ನೀರಲ್ಲಿ ಬೋಟ್ ಬದಲಿಗೆ ಬಸ್ಸಿನಲ್ಲಿ ಸಂಚರಿಸುವ ಅವಕಾಶ ದೊರೆತ್ತಲ್ಲಿ ಹೇಗಿರಬಹುದು? ವಿದೇಶಗಳಲ್ಲಿ ಹೆಚ್ಚು ಕಾಣಸಿಗುವ ಇಂತಹ ವಾಹನಗಳ ಭಾರತ ಪ್ರವೇಶವೂ ಇನ್ನು ಹೆಚ್ಚು ದೂರವಿಲ್ಲ.
ನೆಲದಲ್ಲೂ, ನೀರಿನಲ್ಲೂ ಸಂಚರಿಸುವ ಉಭಯಚರ ಬಸ್ಸು ಭಾರತದಲ್ಲೂ ಓಡಾಡಲಿದೆ. ಈ ಸಂಬಂಧ ಸಾರಿಗೆ ಸಚಿವಾಲಯದಿಂದ ಹಸಿರು ನಿಶಾನೆ ದೊರಕಿದ್ದು, ಪ್ರಮುಖವಾಗಿಯೂ ಪ್ರವಾಸೋದ್ಯಮಕ್ಕಾಗಿ ಬಳಕೆ ಮಾಡಲಿದೆ.

ಜಲಾಶಯಗಳನ್ನು ಹೊಂದಿರುವ ಟೂರಿಸ್ಟ್ ಕೇಂದ್ರಗಳಲ್ಲಿ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ನೂತನ ಉಭಯಚರ ಬಸ್ಸಿನ ಯೋಜನೆಯನ್ನು ಹೊರಲಾಗುತ್ತಿದೆ.

ಭಾರತೀಯ ಸರಕಾರದ ಅಧೀನತೆಯಲ್ಲಿರುವ ಜವಹರ್ ಲಾಲ್ ನೆಹ್ರೂ ಪೋರ್ಟ್ ಟ್ರಸ್ಟ್ (ಜೆಎನ್ ಪಿಟಿ) ಮೊದಲ ಉಭಯಚರ ಗಾಡಿಯನ್ನು ತಮ್ಮದಾಗಿಸಿದೆ. ಇದು ಮುಂಬೈನಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ಸಂಚರಿಸುವ ಬಗ್ಗೆಯೂ ಮಾಹಿತಿಯಿದೆ.

ಗೋವಾ ತಳಹದಿಯ ಸಂಸ್ಥೆಯು ಇಂತಹ 14 ಬಸ್ಸುಗಳನ್ನು ನಿರ್ಮಿಸಿ ಸಾರಿಗೆ ಸಚಿವಾಲಯಕ್ಕೆ ಹಸ್ತಾಂತರಿಸಲಿದೆ. ಅಲ್ಲದೆ ಸಂಚಾರ ಆರಂಭಕ್ಕಾಗಿ ಅನುಮತಿ ನೀಡುವಂತೆ ಬೇಡಿಕೊಂಡಿದೆ.

ಗಂಟೆಗೆ 40 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಉಭಯಚರ ಬಸ್ಸುಗಳನ್ನು ಸೂರ್ಯಸ್ತಮಾನದ ಬಳಿಕ ಬಳಕೆಗೆ ನಿರ್ಬಂಧ ಹೇರಲಾಗುವುದು.

ರಾಜ್ಯ ಸಾರಿಗೆ ಇಲಾಖೆಯು ಸೂಚಿಸಿದ ಆಯ್ದ ಮಾರ್ಗಗಳಲ್ಲಿ ಮಾತ್ರ ಸಂಚರಿಸಲಿದೆ. ಮುಖ್ಯವಾಗಿಯೂ ಪ್ರವಾಸಿಗರ ಉಲ್ಲಾಸದಾಯಕ ಸಂಚಾರಕ್ಕಾಗಿ ಬಳಕೆ ಮಾಡಲಾಗುವುದು.

ಇನ್ನು ಬಸ್ ಪ್ರಯಾಣ ದರ ಇತ್ಯಾದಿ ಅಂಶಗಳನ್ನು ಆಯಾ ಸ್ಥಳೀಯ ಇಲಾಖೆಯಷ್ಟೇ ನಿರ್ಧರಿಸಿದೆ ಎಂದು ಉನ್ನತ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಅತ್ತ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಗೋವಾ, ಈಗಾಗಲೇ ನೆಲ ಮತ್ತು ಜಲದಲ್ಲಿ ಸಂಚರಿಸುವ ಬಸ್ಸುಗಳ ಘೋಷಣೆ ಮಾಡಿದೆ. ಆದರೆ ವಾಣಿಜ್ಯ ಬಳಕೆಯು ಇನ್ನಷ್ಟೇ ಆರಂಭವಾಗಬೇಕಿದೆ.

ನಮ್ಮ ಕರ್ನಾಟಕಕ್ಕೆ ನೀರಲ್ಲಿ ಮತ್ತು ನೆಲದಲ್ಲಿ ಸಂಚರಿಸುವ ಬಸ್ ಆಗಮನವಾದ್ದಲ್ಲಿ ಹೇಗಿರಬಹುದು? ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.


Click it and Unblock the Notifications








