Just In
- just now ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೆವರೇಟ್ ಆಗುವುದು ಪಕ್ಕಾ!
- 2 hrs ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 2 hrs ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 2 hrs ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
Don't Miss!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News Priyank Kharge Life Threat: ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾ ಸ್ಕಾರ್ಪಿಯೊ ಹರಾಜು; ಮುಂದಿನ ಕಾರು ಇನ್ನೋವಾ?
ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಅಪ್ಪಟ ಗಾಂಧಿವಾದಿ ಅಣ್ಣಾ ಹಜಾರೆ ಅವರು ಬಳಕೆ ಮಾಡುತ್ತಿದ್ದ ಮಹೀಂದ್ರ ಸ್ಕಾರ್ಪಿಯೊ ಕಾರನ್ನು ಹರಾಜು ಮಾಡಲಾಗಿದೆ. ಈಗ ಇದರಿಂದ ಸಂಗ್ರಹವಾದ ಮೊತ್ತದಿಂದ ಹೆಚ್ಚಿನ ಸೌಲಭ್ಯದ ಹೊಸ ಇನ್ನೋವಾ ಕಾರನ್ನು ಖರೀದಿ ಮಾಡಲಿದ್ದಾರೆ.
ಅಷ್ಟಕ್ಕೂ
ಅಣ್ಣಾ
ಕಾರನ್ನು
ಮಾರಾಟ
ಮಾಡಿರುವ
ಹಿಂದಿನ
ಕಾರಣಗಳೇನು?
ಖರೀದಿ
ಮಾಡಿದವರು
ಯಾರು?
ಹರಾಜಿನಲ್ಲಿ
ಒಟ್ಟು
ಎಷ್ಟು
ಮೊತ್ತವನ್ನು
ಸಂಗ್ರಹಿಸಲಾಗಿತ್ತು?
ಇವೆಲ್ಲ
ಪ್ರಶ್ನೆಗಳ
ಉತ್ತರಕ್ಕಾಗಿ
ಫೋಟೊ
ಸ್ಲೈಡ್
ನತ್ತ
ಮುಂದುವರಿಯಿರಿ.
ಆರೋಗ್ಯ ಸಮಸ್ಯೆ
77ರ ಹರೆಯದ ಅಣ್ಣಾ ಅವರಿಗೆ ಪದೇ ಪದೇ ಬೆನ್ನು ನೋವು ಕಾಣಿಸಿಕೊಳ್ಳುತ್ತಿದ್ದು, ದೂರ ಪ್ರಯಾಣದ ವೇಳೆ ಸಮಸ್ಯೆ ಇನ್ನಷ್ಟು ಉಲ್ಪಣಗೊಂಡಿದೆ. ಇದರಿಂದಾಗಿ ಸ್ಕಾರ್ಪಿಯೊ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದರು.
ಖರೀದಿ ಮಾಡಿದವರು ಯಾರು?
ಇದರಂತೆ ಕಳೆದ ಭಾನುವಾರ (ಮೇ 21, 2015) ತಮ್ಮ ಹುಟ್ಟೂರಾದ ಮಹಾರಾಷ್ಟ್ರ ರಾಲೇಗಾಂವ್ ಸಿದ್ಧಿಯಲ್ಲಿ ಹರಾಜಿಗಿಡಲಾಗಿತ್ತು. ಪ್ರಸ್ತುತ ಕಾರನ್ನು ಅಣ್ಣಾ ಅವರ ನಿಕಟವರ್ತಿ ಹಾಗೂ ಬೆಂಬಲಿಗರಾಗಿರುವ ಅತುಲ್ ಲೋಕಂಡೆ (Lokhande) ಎಂಬವರು ಖರೀದಿಸಿದ್ದಾರೆ.
ಎಷ್ಟು ಮೊತ್ತಕ್ಕೆ ಹರಾಜು?
ಹರಾಜಿನಲ್ಲಿ ಬರೋಬ್ಬರಿ 9.11 ಲಕ್ಷ ರು.ಗಳನ್ನು ಸಂಗ್ರಹಿಸಲಾಗಿದೆ. ಅಹ್ಮೆದ್ ನಗರದ ದೇವ್ದೇಥನ್ ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ಅತುಲ್ ರಾಲೇಗಾಂವ್ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ.
ಒಟ್ಟು ಎಷ್ಟು ಮಂದಿ ಭಾಗಿ
ಮೂಲಗಳ ಪ್ರಕಾರ ಹರಾಜಿನಲ್ಲಿ ಒಟ್ಟು 14 ಮಂದಿ ಭಾಗವಹಿಸಿದ್ದರು. ಈಗ ಬಿಡ್ನಲ್ಲಿ ಅಣ್ಣಾ ಅವರ ಸ್ವಾಮಿ ವಿವೇಕಾನಂದ ಕೃತುದಂತ ನಿಧಿಗೆ ಸೇರಿದ ಕಾರನ್ನು ಗೆಲ್ಲುವಲ್ಲಿ ಅತುಲ್ ಯಶಸ್ವಿಯಾಗಿದ್ದಾರೆ.
ಜನಲೋಕಪಾಲ ಮಸೂದೆ
ಜನಲೋಕಪಾಲ ಮಸೂದೆ ರುವಾರಿಯಾಗಿರುವ ಅಣ್ಣಾ ಹಜಾರೆ ಇದೇ ಕಾರಿನಲ್ಲಿ ಸಂಚರಿಸುವ ಮೂಲಕ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ್ದರು. ಅಲ್ಲದೆ 2007 ಹಾಗೂ 2009ರಲ್ಲಿ ಮಹಾರಾಷ್ಟ್ರ ಭ್ರಷ್ಟ ಸಚಿವರ ವಿರುದ್ಧದ ಹೋರಾಟಕ್ಕೂ ಸ್ಕಾರ್ಪಿಯೊ ಬಳಕೆ ಮಾಡಿದ್ದರು. ಈ ಎಲ್ಲದರ ಮೂಲಕ ಅಣ್ಣಾ ಜೊತೆ ಜೊತೆಗೆ ಸ್ಕಾರ್ಪಿಯೊ ಸಹ ಚರಿತ್ರೆಯ ಭಾಗವಾಗಿದೆ.
ಇನ್ನೋವಾ ಖರೀದಿ?
ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಅಣ್ಣಾ ಅವರು ಸದ್ಯದಲ್ಲೇ ಹೆಚ್ಚು ಸೌಲಭ್ಯದ ಇನ್ನೋವಾ ಕಾರನ್ನು ಖರೀದಿ ಮಾಡಲಿದ್ದಾರೆ. ಈ ಮೂಲಕ ತಮ್ಮ ಮುಂದಿನ ಪಯಣವನ್ನು ಮತ್ತಷ್ಟು ಅನುಕೂಲ ಹಾಗೂ ಆರಾಮದಾಯಕವಾಗಿಸಲಿದ್ದಾರೆ.