ತಮಿಳುನಾಡಿನಲ್ಲಿ ಸಂಭವಿಸಿದ ಬಿಎಂಡಬ್ಲ್ಯೂ ಕಾರಿನ ಅಪಘಾತದ ಚಿತ್ರಗಳನ್ನು ನೋಡುದ್ರೆ ಬೆಚ್ಚಿ ಬೀಳ್ತೀರಾ !!
ತಮಿಳುನಾಡಿನ ವಂದಲೂರ್ - ಮಿಂಜೂರ್ ಮಾರ್ಗ ಮದ್ಯ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ತಮ್ಮ ಜೀವ ಕಳೆದುಕೊಂಡಿದ್ದಾರೆ.
ಭೀಕರ ರಸ್ತೆ ಅಪಘಾತದಲ್ಲಿ ಬಿಎಂಡಬ್ಲ್ಯೂ ಕಾರಿನಲ್ಲಿ ಸಂಚರಿಸುತ್ತಿದ್ದ ಮೂವರು ಯುವಕರು ತಮ್ಮ ಜೀವ ಕಳೆದುಕೊಂಡಿದ್ದಾರೆ, ಅದೃಷ್ಟವಶಾತ್ ಕಾರಿನ ಹಿಂದಗಡೆ ಕೂತಿದ್ದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರವಿಂದ್ (23), ಮನೋಹರ್(22), ದೀಪಕ್(22), ಮತ್ತು ಪ್ರಭು ತಮ್ಮ ಸ್ನೇಹಿತರ ವಿವಾಹ ಸಮಾರಂಭಕ್ಕೆ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಬಿಎಂಡಬ್ಲ್ಯೂ ಮೂರನೇ ಸರಣಿಯ ವಾಹನ ಇದಾಗಿದ್ದು, ಅಚ್ಚರಿ ಎನ್ನುವಂತೆ ಹಿಂದಗಡೆ ಕೂತಿದ್ದ ಪ್ರಭು ಬಕುಳಿದಿದ್ದಾರೆ.

ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಪ್ರಭುಗೆ ಹೆಚ್ಚು ಗಾಯಗಳಾಗಿದ್ದು ಪೂನಮಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ದುರಸ್ತಿ ಮಾಡಲೂ ಸಹ ಆಗದೆ ಇರುವಷ್ಟು ಹಾಳಾಗಿದೆ ಎಂದರೆ ಅಪಘಾತದ ತೀವ್ರತೆ ಎಷ್ಟಿತ್ತೆಂಬುದನ್ನು ನೀವು ಊಹಿಸಬಹುದು.

ಉಳಿದಂತೆ ಮೂವರಲ್ಲಿ ಅರವಿಂದ್ ಮತ್ತು ಮನೋಹರ್ ಘಟನೆ ನೆಡೆದ ಸ್ಥಳದಲ್ಲಿಯೇ ಅಸುನೀಗಿದರೆ, ದೀಪಕ್ ಎಂಬುವವರು ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಕುಡಿದು ವಾಹನ ಚಲಾವಣೆ ಮಾಡಿದ್ದಾರೆಯೇ ಎಂಬುದು ತನಿಖೆಯ ನಂತರವೇ ತಿಳಿಯಲಿದೆ.

ಇವರುಗಳು ಇಂಜಿನಿಯರಿಂಗ್ ಮುಗಿಸಿ ಪೆರುಂಗಳತುರ್ ನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತಿದ್ದರು ಎನ್ನಲಾಗಿದೆ.

ಪೊರೂರ್ ಊರಲ್ಲಿ ಇರುವ ಖಾಸಗಿ ಆಸ್ಪೆತ್ರೆಯಲ್ಲಿ ಮೂವರ ಮರಣೋತ್ತರ ಪರೀಕ್ಷೆ ನೆಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿಎಂಡಬ್ಲ್ಯೂ ಮೂರನೇ ಸರಣಿ ಕಾರಿನ ಚಿತ್ರಗಳನ್ನು ವೀಕ್ಷಿಸಿ


Click it and Unblock the Notifications








