Just In
- 1 hr ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 1 hr ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 1 hr ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 1 hr ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- News Asianet Digital Network Survey: ಮತ್ತೊಮ್ಮೆ ಮೋದಿಗೆ ಜೈ ಎಂದ ಮತದಾರರು!
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಪಿಎಸ್ ಅಧಿಕಾರಿಯೆಂದು ಜನರಿಗೆ ಟೋಪಿ ಹಾಕಿದವ ಈಗ ಅಂದರ್..!
ಬಹುತೇಕ ಭಾರತೀಯ ಬ್ಯಾಂಕುಗಳು ಸಾಲವನ್ನು ನೀಡಿ, ಸಾಲಗಾರರು ಸಾಲವನ್ನು ಮರುಪಾವತಿ ಮಾಡದ ಕಾರಣ, ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ಸಾಕಷ್ಟು ಒತ್ತಡವನ್ನು ಎದುರಿಸುತ್ತಿದೆ. ಕೇರಳದ ಗುರುವಾಯೂರ್ನಲ್ಲಿ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ತಾಯಿ ಮಗ ಇಬ್ಬರು ಸೇರಿ ಕಾರು ಸಾಲ ಪಡೆದು, ನಂತರ ಆ ಕಾರುಗಳನ್ನು ಮಾರಾಟ ಮಾಡಿ ಬ್ಯಾಂಕುಗಳಿಗೆ ವಂಚಿಸಿರುವ ಹಗರಣ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಭೇದಿಸಿರುವ ಕೇರಳ ಪೊಲೀಸರು ತಾಯಿಯನ್ನು ಬಂಧಿಸಿದ್ದಾರೆ. ಮಗ ತಪ್ಪಿಸಿಕೊಂಡಿದ್ದಾನೆ.
58 ವರ್ಷ ವಯಸ್ಸಿನ ಶ್ಯಾಮಲಾ ವೇಣುಗೋಪಾಲ್ ಹಾಗೂ ಆಕೆಯ ಪುತ್ರ 29 ವರ್ಷ ವಯಸ್ಸಿನ ವಿಪಿನ್ ಕಾರ್ತಿಕ್ ಅವರು ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದಾರೆ. ವಿಪಿನ್ ಕಾರ್ತಿಕ್ ತನ್ನನ್ನು ಕಾಶ್ಮೀರ ಮೂಲದ ಐಪಿಎಸ್ ಅಧಿಕಾರಿಯೆಂದು ನಕಲಿ ದಾಖಲೆಗಳನ್ನು ಸಲ್ಲಿಸಿ, ಸಾಲ ಪಡೆದಿದ್ದಾನೆ.
ಆತನ ತಾಯಿ ಶ್ಯಾಮಲಾ ತನ್ನ ಮಗನ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯಂತೆ ನಟಿಸಿದ್ದಾರೆ. ತಾಯಿ ಮಗ ಇಬ್ಬರೂ ಸೇರಿ ನಕಲಿ ದಾಖಲೆಗಳನ್ನು ಸಲ್ಲಿಸಿ, ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು 28 ಕಾರುಗಳನ್ನು ಖರೀದಿಸಿದ್ದಾರೆ.
ನಂತರ ಆ ಕಾರುಗಳನ್ನು ಉಪಯೋಗಿಸಿದ ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಆದರೆ ಬ್ಯಾಂಕುಗಳಿಗೆ ವಂಚಿಸಿ, ಸಾಲಗಳ ಮೂಲಕ ಖರೀದಿಸಿದ ಆ ಕಾರುಗಳು ಈಗ ಎಲ್ಲಿವೆ ಎಂಬ ಬಗ್ಗೆ ತಾಯಿ ಮಗ ಇಬ್ಬರಿಗೂ ತಿಳಿದಿಲ್ಲ.
ಕೇರಳ ಪೊಲೀಸರ ಪ್ರಕಾರ ಈ ಇಬ್ಬರೂ ಗುರುವಾಯೂರ್ನಲ್ಲಿರುವ ಬ್ಯಾಂಕುಗಳಿಂದ ಸಾಲ ಪಡೆದು ಒಟ್ಟು 12 ಕಾರುಗಳನ್ನು ಖರೀದಿಸಿದ್ದರೆ, ನಾದಪುರಂ, ತಲಷೇರಿ, ಕೊಟ್ಟಾಯಂ, ತಿರುವನಂತಪುರಂ, ಕಲಮಶೇರಿ, ಎರ್ನಾಕುಲಂ, ಕೊಯಿಲಾಂಡಿ ಹಾಗೂ ವಡಕರಾಗಳಲ್ಲಿರುವ ಬ್ಯಾಂಕುಗಳಿಂದ ಸಾಲ ಪಡೆದು 16 ಕಾರುಗಳನ್ನು ಖರೀದಿಸಿದ್ದಾರೆ.
ಒಂದು ಕಾರ್ ಅನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಕಾರುಗಳನ್ನು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಎಲ್ಲಾ ಮಾಹಿತಿಯು ವಿಪಿನ್ ಬರೆದಿರುವ ಡೈರಿಯಲ್ಲಿ ಕಂಡು ಬಂದಿದೆ. ಒಂದು ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಹಾಗೂ ಹ್ಯುಂಡೈ ಕ್ರೆಟಾ ಕಾರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಪೊಲೀಸರು ಈ ಇಬ್ಬರೂ ವಾಸವಿದ್ದ ಕೊಯಿಕೊಡ್ನ ಬಿಲಾತಿಕುಲಂ ಬಾಡಿಗೆ ಅಪಾರ್ಟ್ಮೆಂಟ್ ಅನ್ನು ಸುತ್ತುವರೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಲೇ ವಿಪಿನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಶ್ಯಾಮಲಾರವರನ್ನು ಬಂಧಿಸಲಾಗಿದೆ.
MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!
ವಿಪಿನ್ ತಾಯಿ ಶ್ಯಾಮಲಾ ಮೂಲತಃ ಮನಲುಟ್ಟಂನ ಕುನಿಯಿಲ್ಗೆ ಸೇರಿದವರು. ಪೊಲೀಸರು ಪರಾರಿಯಾಗಿರುವ ವಿಪಿನ್ಗಾಗಿ ಶೋಧ ನಡೆಸುತ್ತಿದ್ದಾರೆ. ಮೊದಲಿಗೆ ಬಿಲಾತಿಕುಲಂ ಅಪಾರ್ಟ್ಮೆಂಟ್ನ ವಿಳಾಸ ಹೊಂದಿದ್ದ ಆಧಾರ್ ಕಾರ್ಡ್ ನೀಡಿ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದಾರೆ.
MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!
ಇದಾದ ನಂತರ ನಕಲಿ ಸ್ಯಾಲರಿ ಸರ್ಟಿಫಿಕೇಟ್ ಹಾಗೂ ವಿಪಿನ್ ಐಪಿಎಸ್ ಅಧಿಕಾರಿಯ ಯೂನಿಫಾರಂ ತೊಟ್ಟಿದ್ದ ಫೋಟೊ ನೀಡಿದ್ದಾರೆ. ಸಾಲ ಪಡೆಯಲು ಬ್ಯಾಂಕುಗಳಲ್ಲಿ ಭಾರೀ ಮೊತ್ತದ ಹಣವಿರುವ ನಕಲಿ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ನೀಡಿದ್ದಾರೆ.
ಗಮನಿಸಬೇಕಾದ ಸಂಗತಿಯೆಂದರೆ, ಬ್ಯಾಂಕುಗಳೂ ಸಹ ಈ ಇಬ್ಬರ ವಂಚನೆಯ ಬಗ್ಗೆ ಯಾವುದೇ ವಿಚಾರಣೆ ನಡೆಸಿಲ್ಲ. ಹಿಂದೆ ಮುಂದೆ ನೀಡದೇ ಸಾಲ ಮಂಜೂರು ಮಾಡಿದ್ದಾರೆ. ವಿಪಿನ್ ನಕಲಿ ಯೂನಿಫಾರಂನಲ್ಲಿ ಗುರುವಾಯೂರಿನ ಶ್ರೀ ಕೃಷ್ಣ ದೇವಸ್ಥಾನ ಹಾಗೂ ಬೇರೆ ಪೊಲೀಸ್ ಠಾಣೆಗಳಲ್ಲಿರುವ ಫೋಟೊಗಳನ್ನು ಬ್ಯಾಂಕುಗಳಿಗೆ ನೀಡಿದ್ದಾನೆ.
ಇದರ ಜೊತೆಗೆ ಬೇರೆ ಪೊಲೀಸರ ಹೆಸರುಗಳನ್ನು ಹೇಳಿದ್ದಾನೆ. ಇಷ್ಟೇ ಅಲ್ಲದೇ ತಾಯಿ ಮಗ ಇಬ್ಬರೂ ಸೇರಿ ಗುರುವಾಯೂರಿನಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕಿಗೆ ರೂ.25 ಲಕ್ಷ ಹಾಗೂ 95 ಸವರನ್ ಚಿನ್ನವನ್ನು ವಂಚಿಸಿರುವ ಬಗ್ಗೆ ಆ ಬ್ಯಾಂಕಿನ ಮ್ಯಾನೇಜರ್ ದೂರು ನೀಡಿದ್ದಾರೆ.
ಶ್ಯಾಮಲಾರವರು ತಮ್ಮ ವಿಪಿನ್ ಕ್ಯಾನ್ಸರ್ ಪೇಷಂಟ್ ಎಂದು ಬ್ಯಾಂಕಿಗೆ ನಂಬಿಸಿ, ಚಿನ್ನ ಹಾಗೂ ಹಣ ಪಡೆದಿದ್ದಾರೆ. ಈ ಇಬ್ಬರ ಮೇಲೆ ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿಲ್ಲ.
Source: Manorama News