Just In
- 2 hrs ago ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- 3 hrs ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 3 hrs ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 5 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ
ಪೈಲಟ್ವೊಬ್ಬರು ಬೈಕ್ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದ ಸಾತಿವಾಲಿ ಬ್ರಿಡ್ಜ್ ಬಳಿ ನಡೆದಿದ್ದು, ವೃತ್ತಿಯಲ್ಲಿ ಪೈಲಟ್ ಆಗಿದ್ದ ಭಾಯಂದರ್ ನಿವಾಸಿ ವರುಣ್ ಬರ್ಮೋಡಿ ಅವರನ್ನು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಆತ ವೃತ್ತಿಯಲ್ಲಿ ಪೈಲಟ್. ಆದರೂ ಸೂಪರ್ ಬೈಕ್ಗಳ ರೈಡಿಂಗ್ ಅಂದ್ರೆ ಆತನಿಗೆ ಎಲ್ಲಿಲ್ಲದ ಹುಚ್ಚು. ಹೀಗಾಗಿ ಸ್ನೇಹಿತರ ಜೊತೆಗೂಡಿ ಸೂಪರ್ ಬೈಕ್ನಲ್ಲಿ ರೈಡಿಂಗ್ಗೆ ಅಂತಾ ಹೋಗಿದ್ದ. ಆದ್ರೆ ವಿಧಿಯಾಟ ಬಲ್ಲವರು ಯಾರು? ಬೈಕ್ ಚಾಲನೆ ವೇಳೆ ಟ್ರಕ್ ಹರಿದ ಪರಿಣಾಮ ಯುವ ಪೈಲಟ್ ದುರಂತದಲ್ಲಿ ಅಂತ್ಯ ಕಂಡಿದ್ದಾನೆ.
ಪೈಲಟ್ವೊಬ್ಬರು ಬೈಕ್ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದ ಸಾತಿವಾಲಿ ಬ್ರಿಡ್ಜ್ ಬಳಿ ನಡೆದಿದ್ದು, ವೃತ್ತಿಯಲ್ಲಿ ಪೈಲಟ್ ಆಗಿದ್ದ ಭಾಯಂದರ್ ನಿವಾಸಿ ವರುಣ್ ಬರ್ಮೋಡಿ ಅವರನ್ನು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಟ್ರೇಲರ್ ಟ್ರಕ್ವೊಂದರ ಕೆಳಗೆ ಬೈಕ್ ಸಿಲುಕಿದ ಪರಿಣಾಮ ವರುಣ್ ಸಾವನ್ನಪ್ಪಿದ್ದು, ಘಟನೆ ನಡೆದಾಗ ವರುಣ್ ತನ್ನ 10-15 ಸ್ನೇಹಿತರೊಂದಿಗೆ ಬಿಎಂಡಬ್ಲ್ಯು ಜಿಎಸ್ 1200 ಬೈಕ್ನಲ್ಲಿ ಭಾಯಂದರ್ನಿಂದ ಮ್ಯಾನರ್ಗೆ ಹೋಗುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಸಾತಿವಾಲಿ ಬ್ರಿಡ್ಜ್ ಬಳಿ ತಲುಪಿದಾಗ ಮಧ್ಯದ ಲೇನ್ನಲ್ಲಿ ಟ್ರೇಲರ್ ಟ್ರಕ್ ವೇಗವಾಗಿ ಬಂದಿದ್ದು, ವರುಣ್ ಅದನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಆದ್ರೆ ನಿಯಂತ್ರಣ ತಪ್ಪಿದ ವರುಣ ಹಿಂಭಾಗದ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾನೆ.
ಘಟನೆಯ ಸಂದರ್ಭದಲ್ಲಿ ವರುಣ್ ಸಹೋದರ ಕುನಾಲ್ ಕೂಡಾ ಜೊತೆಗಿದ್ದ ಎನ್ನಲಾಗಿದ್ದು, ಟ್ರಕ್ ಅಡಿ ಸಿಲುಕಿ ತೀವ್ರ ಗಾಯಗೊಂಡಿದ್ದ ವರುಣ್ನನ್ನು ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ಕರೆ ತರಲಾಗಿತ್ತು.
ಆದ್ರೆ ತಲೆ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯದಲ್ಲೇ ವರುಣ್ ಬರ್ಮೋಡಿ ಜೀವ ಬಿಟ್ಟಿದ್ದಾನೆ ಎಂದು ಆತನ ಸ್ನೇಹಿತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಪ್ಪದೇ ಓದಿ-60 ಸಾವಿರ ಬೆಲೆಯ ಹೆಲ್ಮೆಟ್ ಹಾಕಿದ್ರು ಆ ಯುವಕನ ಜೀವ ಉಳಿಲಿಲ್ಲ...
ಪ್ರಕರಣದ ಬಗ್ಗೆ ವಾಲೀವ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಅಪಘಾತದ ನಂತರ ಟ್ರಕ್ ಚಾಲಕ ನಾಪತ್ತೆಯಾಗಿದ್ದಾನೆ. ಆದ್ರೆ ಅಪಘಾತದ ಟ್ರಕ್ ಪೊಲೀಸರ ವಶದಲ್ಲಿದ್ದು, ನಾಪತ್ತೆಯಾಗಿರುವ ಚಾಲಕನಿಗೆ ಪೊಲೀಸರು ಬಲೆ ಬಿಸಿದ್ದಾರೆ.
ಇನ್ನು ಅಪಘಾತದಲ್ಲಿ ಸಾವನ್ನಪ್ಪಿದ ವರುಣ್ ಬರ್ಮೋಡಿ ಸರ್ಟಿಫೈಡ್ ಬೈಕರ್ಗಳಾಗಿದ್ದು, ಸ್ನೇಹಿತರು ನೀಡಿರುವ ಮಾಹಿತಿ ಪ್ರಕಾರ ವರುಣ್ ಉತ್ತಮ ಬೈಕ್ ಸವಾರನಾಗಿದ್ದ ಎಂಬ ಮಾಹಿತಿ ದೊರೆತಿದೆ. ಆದ್ರೆ ವಿಧಿಯಾಟ ಒಂದು ಕ್ಷಣದಲ್ಲಿ ಆದ ತಪ್ಪು ಅವನ ಜೀವವನ್ನೇ ಪಡೆದಿದೆ.
Trending DriveSpark YouTube Videos
Subscribe To DriveSpark Kannada YouTube Channel - Click Here