Just In
- 3 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 4 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 5 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 5 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Movies Nannamma Superstar: ಬಿಗ್ ಬಾಸ್ ಸಂಗೀತಾ ಹೊಟ್ಟೆಗೆ ಏನ್ ತಿಂತಾರೆ? ಮೃದಿನಿಗೆ ಕಾಡಿದ ದೊಡ್ಡ ಪ್ರಶ್ನೆ
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಸ್ತೆ ಮಾರ್ಗವಾಗಿ ಬೈಕಲ್ಲಿ ದೆಹಲಿಯಿಂದ ಕೇರಳಕ್ಕೆ ಸಾಹಸ ಪಯಣ
ಸಾಹಸಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಇಲ್ಲೊಬ್ಬ ಬೈಕ್ ಉತ್ಸಾಹಿಯೊಬ್ಬರು ದೆಹಲಿಯಿಂದ ಕೇರಳಕ್ಕೆ ಬೈಕ್ನಲ್ಲಿ ಪಯಣಿಸಿರುವುದು ಅಚ್ಚರಿ ಮೂಡಿಸಿದೆ. ದಕ್ಷಿಣ ದೆಹಲಿಯಿಂದ ಆರಂಭಿಸಿದ್ದ ಇಜಾಜ್ ಮೊಹಮ್ಮದ್ ಕೇರಳದ ಕಲ್ಲಿಕೋಟೆಯಲ್ಲಿ ಪಯಣ ಕೊನೆಗೊಳಿಸಿದ್ದರು.
ಕಳೆದ
ಜೂನ್
12ರಂದು
ತಮ್ಮ
ಪಯಣ
ಆರಂಭಿಸಿದ್ದ
ಇಜಾಜ್
ಮೊಹಮ್ಮದ್
17ರಂದು
ಗುರಿ
ಮುಟ್ಟುವಲ್ಲಿ
ಯಶಸ್ವಿಯಾಗಿದ್ದಾರೆ.
ಇದೇ
ತರಹನೇ
ದೀರ್ಘ
ಪಯಣ
ಕೈಗೊಳ್ಳಲು
ಇಚ್ಛಿಸುವವರಿಗೆ
ಇಜಾಜ್
ಸಲಹೆಗಳನ್ನು
ಕೊಡಲು
ಬಯಸುತ್ತಿದ್ದಾರೆ.
ರಸ್ತೆ
ಮಾರ್ಗದಲ್ಲಿ
ಇಜಾಜ್ಗೆ
ಎದುರಾದ
ತೊಂದರೆಗಳೇನು?
ಸಮಗ್ರ
ಮಾಹಿತಿಗಾಗಿ
ಚಿತ್ರ
ಸಂಪುಟದತ್ತ
ಮುಂದುವರಿಯಿರಿ...
ಇದು ಯಾವ ದಾಖಲೆಗಾಗಿ ಮಾಡಿದ ಪಯಣವಲ್ಲ. ಹಾಗಿದ್ದರೂ ಅನಧಿಕೃತ ದಾಖಲೆಗಳ ಪಟ್ಟಿಯಲ್ಲಿ ಇದು ಸೇರಿಕೊಂಡಿರುವುದು ವಿಶೇಷ. ತಮ್ಮ ನೆಚ್ಚಿನ ಹೋಂಡಾ ಯೂನಿಕಾರ್ನ್ ಡಾಜ್ಲರ್ 150 ಸಿಸಿ ಬೈಕ್ನಲ್ಲಿ ಇಜಾಜ್ ಈ ಸಾಧನೆ ಮಾಡಿದ್ದಾರೆ.
ಹೀಗೆ ಕಡಿಮೆ ಸಿಸಿ ಬೈಕ್ನಲ್ಲಿ ಹೆಚ್ಚು ದೂರ ಸಂಚರಿಸುವುದು ಇಜಾಜ್ ಗುರಿಯಾಗಿತ್ತು. ಈ ಮೂಲಕ 2,500 ಕೀ.ಮೀ. ದೂರ ಕ್ರಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೆಟ್ರೋಲ್ಗಾಗಿ 4,000 ರು. ಖರ್ಚು ಮಾಡಿದ್ದನ್ನು ಬಿಟ್ಟರೆ ಒಟ್ಟಾರೆ 18,000 ರುಪಾಯಿಗಳು ವೆಚ್ಚವಾಗಿದ್ದವು.
ದಕ್ಷಿಣ ದೆಹಲಿಯಿಂದ ಆರಂಭಿಸಿದ ಪಯಣವು ಜೈಪುರ-ವಡೋದರಾ-ಮುಂಬೈ-ರತ್ನಗಿರಿ-ಪಣಜಿ-ಉಡುಪಿ-ಮಂಗಳೂರು ಹಾದಿಯಾಗಿ ಕೇರಳ ಗಡಿ ಪ್ರದೇಶವನ್ನು ತಲುಪಿದ್ದರು. ಅಂತಿಮವಾಗಿ ಕಲ್ಲಿಕೋಟೆಯಲ್ಲಿ ತಮ್ಮ ಜೈತ್ರಯಾತ್ರೆಯನ್ನು ಕೊನೆಗೊಳಿಸಿದರು.
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 21 ಹರೆಯದ ಇಜಾಜ್ ಸಿನೆಮಾ ಕ್ಷೇತ್ರದಲ್ಲೂ ತಮ್ಮ ಅಭಿರುಚಿಯನ್ನು ಹೊಂದಿದ್ದಾರೆ. ಅವರ ವೈಯಕ್ತಿಕ ಬಯಕೆ ಏನೆಂದರೆ ಉತ್ತರ ಪೂರ್ವ ರಾಜ್ಯಗಳಲ್ಲಿ ಭುಗಿಲೆಲುತ್ತಿರುವ ವರ್ಣಭೇದ ನೀತಿ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸಾಕ್ಷ್ಯಚಿತ್ರ ರಚಿಸುವುದಾಗಿದೆ.
ಸಹಜವಾಗಿಯೇ ಜೂನ್ ತಿಂಗಳಲ್ಲಿ ಉಷ್ಣಾಂಶ ಜಾಸ್ತಿಯಾಗಿದ್ದರಿಂದ ದೆಹಲಿಯಿಂದ ಮಹಾರಾಷ್ಟ್ರದ ವರೆಗೂ ರಾತ್ರಿ ಪಯಣ ಬೆಳೆಸಿದ್ದರು. ಅಲ್ಲದೆ ರಾತ್ರಿ ವೇಳೆಯ ಪಯಣ ತುಂಬಾನೇ ಸವಾಲಿನಿಂದ ಕೂಡಿರುತ್ತದೆ ಎಂದವರು ಅಭಿಪ್ರಾಯಪಡುತ್ತಾರೆ.
ತಮ್ಮ ಯಾತ್ರೆಯುದ್ಧಕ್ಕೂ ಸರಾಸರಿ ಗಂಟೆಗೆ 45 ಕೀ.ಮೀ. ವೇಗವನ್ನು ಕಾಯ್ದುಕೊಂಡಿದ್ದ ಇಜಾಜ್, ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ವೇಗವರ್ಧನೆಯಲ್ಲೂ ಏರುಪೇರು ತಂದಿದ್ದರು.
ಭಾರತದ ರಸ್ತೆ ಪರಿಸ್ಥಿತಿಗಳ ಬಗ್ಗೆ ಮಾತನಾಡಿರುವ ಇಜಾಜ್, ಗುಜರಾತ್ನ ವಡೋದರಾ-ಅಹಮದಾಬಾದ್ ಎಕ್ಸ್ಪ್ರೆಸ್ ವೇ ಹಾಗೂ ಮುಂಬೈ-ಪುಣೆ ಎಕ್ಸ್ಪ್ರೆಸ್ ವೇ ಅತ್ಯುತ್ತಮವಾಗಿದೆ ಎಂದಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ತಂದಿರುವ ಅಭಿವೃದ್ಧಿಗೆ ಸಾಕ್ಷಿಯಾಗಿದೆ.
ಮುಂಬೈ-ಪುಣೆ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ರಾತ್ರಿ ಎರಡು ಗಂಟೆಯ ಸಮಯದಲ್ಲಿ ವಾಹನ ಚಲಾಯಿಸಿರುವ ಘಟನೆಯನ್ನು ಇಜಾಜ್ ನೆನಪಿಸಿಕೊಳ್ಳುತ್ತಾರೆ. ರಾತ್ರಿ ಪಯಣಕ್ಕೆ ಅರಣ್ಯಧಿಕಾರಿಗಳ ಅನುಮಿತಿಯಿಲ್ಲದಿದ್ದರೂ ಅದನ್ನು ಲೆಕ್ಕಿಸದೇ ಇಜಾಜ್ ತಮ್ಮ ಸಾಹಸ ಯಾತ್ರೆಯನ್ನು ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ದೀರ್ಘ ಪಯಣ ಕೈಗೊಳ್ಳಲು ಇಚ್ಛಿಸುವ ಯುವ ಬೈಕ್ ಉತ್ಸಾಹಿಗಳಿಗೆ ಸಲಹೆ ಕೊಡಲು ಬಯಸುತ್ತಿರುವ ಇಜಾಜ್, ಯಾವತ್ತೂ ಸಾಹಸ ಮನೋಭಾವ ಕೈಬಿಡಬಾರದು ಎನ್ನುತ್ತಾರೆ.
ಎಲ್ಲರೂ ಕಡಿಮೆ ವೇಗದಲ್ಲಿ ಸಂಚರಿಸಲು ಸಲಹೆ ಕೊಡುತ್ತಾರೆ. ಆದರೆ ಇದಕ್ಕೆ ವಿರುದ್ಧವಾಗಿರುವ ಇಜಾಜ್ ಅಪಘಾತಕ್ಕೆ ವೇಗ ಕಾರಣವಲ್ಲ. ಬದಲಾಗಿ ಸುರಕ್ಷಿತ ಪಯಣ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಡುತ್ತಾರೆ.
ಅಂದ ಹಾಗೆ ನೀವು ಸಹ ಬೈಕ್ನಲ್ಲಿ ದೀರ್ಘ ಪಯಣ ಹಮ್ಮಿಕೊಂಡಿದ್ದಲ್ಲಿ ನಿಮ್ಮ ಅನುಭವಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.