Just In
- 11 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 11 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 12 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 13 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುದ್ಧ ಭೂಮಿಗಿಂತ ಕರ್ಮ ಭೂಮಿಯಲ್ಲಿ ಮಡಿಯುವ ಬಿಎಸ್ಎಫ್ ಯೋಧರು!
ಆಘಾತಕಾರಿ ಸುದ್ದಿಯೊಂದರಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಪಣ ತೊಟ್ಟು ತೆರಳುವ ಗಡಿ ರಕ್ಷಣಾ ಪಡೆಯ (ಬಿಎಸ್ ಎಫ್) ಯೋಧರು ಯುದ್ಧ ಭೂಮಿಗಿಂತ ಮಿಗಿಲಾಗಿ ತಮ್ಮ ಕರ್ಮ ಭೂಮಿಯಲ್ಲೇ ಜೀವ ಬಲಿ ಅರ್ಪಿಸುತ್ತಿರುವ ಅಪಾಯಕಾರಿ ವಿಚಾರ ಬೆಳಕಿಗೆ ಬಂದಿದೆ.
ಕಳೆದ
ಒಂದು
ವರ್ಷದಲ್ಲಿ
(2014
ಮಾರ್ಚ್
ರಿಂದ
2015
ಮಾರ್ಚ್
ವರೆಗೆ)
ಅನೇಕ
ಕಾರಣಾಂತರಗಳಿಂದಾಗಿ
ನಡೆದ
ಬೈಕ್
ಅಪಘಾತಗಳಲ್ಲಾಗಿ
42ರಷ್ಟು
ಯೋಧರು
ತಮ್ಮ
ಜೀವನವನ್ನೇ
ಕಳೆದುಕೊಂಡಿದ್ದಾರೆ
ಎಂಬುದು
ತಿಳಿದು
ಬಂದಿದೆ.
ವರದಿಗಳ ಪ್ರಕಾರ 2014 ಮಾರ್ಚ್ ರಿಂದ 2015 ಮಾರ್ಚ್ ವರೆಗಿನ ಅವಧಿಯಲ್ಲಿ ಬೈಕ್ ಅಪಘಾತದಲ್ಲಿ 42 ಯೋಧರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಗಡಿಯಲ್ಲಿ 12 ಮಂದಿ ಯೋಧರು ಸಾವಿಗೀಡಾಗಿದ್ದರು. ಇದು ದೇಶದ ಅತಿ ದೊಡ್ಡ ಅರೆ ಸೇನಾ ಪಡೆಯಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಖೇದ ವ್ಯಕ್ತಪಡಿಸಿರುವ ಬಿಎಸ್ ಎಫ್ ನಿರ್ದೇಶಕ ಡಿಕೆ ಪಾಠಕ್, "ಬೈಕ್ ಅಪಘಾತಗಳಲ್ಲಾಗಿ ಪ್ರತಿ ತಿಂಗಳು ಸರಿ ಸುಮಾರು ಐವರು ಯೋಧರನ್ನು ಕಳೆದುಕೊಳ್ಳುತ್ತಿದ್ದೇವೆ. ಬಹುತೇಕ ಇಂತಹ ಅಪಘಾತಗಳು ಯೋಧರು ಮನೆಗೆ ತೆರಳಿದಾಗ ಅಥವಾ ರಜೆಯಲ್ಲಿದ್ದಾಗ ಸಂಭವಿಸುತ್ತಿದೆ" ಎಂದಿದ್ದಾರೆ.
"ನಮ್ಮ ಜವಾನರು ನಮ್ಮ ದೊಡ್ಡ ಆಸ್ತಿ ಆಗಿದ್ದು ಹಾಗಾಗಿ ಇಂತಹ ಘಟನೆಗಳು ಮರಕಳುಹಿಸಬಾರದು. ಬೈಕ್ ಅಪಘಾತದಿಂದಾಗಿ ಯೋಧರು ಮೃತಪಡುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
ಈ ಸಂಬಂಧ ಕ್ಷಿಪ್ರ ಪರಿಹಾರಕ್ಕೆ ಮುಂದಾಗಿರುವ ಬಿಎಸ್ ಎಫ್, ಅರೆ ಸೇನಾ ಪಡೆಯ ಮೇಲೆ ಹದ್ದಿನ ಕಣ್ಣಿಡಲಿದ್ದು ಯೋಧರಿಗೆ ಸುರಕ್ಷಿತ ಚಾಲನೆ ಬಗ್ಗೆ ತರಬೇತಿ ನೀಡಲಾಗುವುದು ಎಂದವರು ತಿಳಿಸಿದ್ದಾರೆ.
ಇದರಂತೆ ಅಜಾಗರೂತಕೆಯಿಂದ ಬೈಕ್ ಸವಾರಿ ಮಾಡುವ ಪ್ರತಿಯೊಬ್ಬ ಯೋಧರ ಮೇಲೆ ನಿಗಾವಹಿಸುವಂತೆ ಮೇಲ್ವಿಚಾರಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಾತು ಮುಂದುವರಿಸಿರುವ ಪಠಾಕ್, ಭದ್ರತಾ ಕಾರ್ಯಾಚರಣೆಗಳನ್ನು ತಮ್ಮ ಹೆಗಲ ಮೇಲೆರಿಸುವ ಯೋಧರು ಇಂತಹ ವಿಚಿತ್ರ ವರ್ತನೆಯಿಂದಾಗಿ ಜೀವ ಕಳೆದುಕೊಳ್ಳಬಾರದು ಎಂದಿದ್ದಾರೆ.
ಇಷ್ಟೆಲ್ಲ ಆದರೂ ವರ್ಷಂಪ್ರತಿ ರಾಜಪಥದಲ್ಲಿ ನಡೆಯುವ ಪಥಸಂಚಲನದಲ್ಲಿ ಬಿಎಸ್ ಎಫ್ ಡೇರ್ ಡೆವಿಲ್ಸ್ ಪ್ರದರ್ಶಿಸುವ ಸ್ಟಂಟ್ ಶೋ ನಿಜಕ್ಕೂ ಮೈ ಜುಮ್ ಎನಿಸುವಂತೆ ಮಾಡುತ್ತದೆ.