ಮಾನೆಸರ್ ಕಿರಿಕ್: ಹೊಸ ಮಾರುತಿ 800 ಆಗಮನ ವಿಳಂಬ
"ಹೌದು, ಘಟಕದಲ್ಲಿನ ಗಲಭೆಯಿಂದಾಗಿ ನಾವು 800ಸಿಸಿ ಕಾರನ್ನು ಪರಿಚಯಿಸುವ ಸಮಯವನ್ನು ಮುಂದೂಡಿದ್ದೇವೆ" ಎಂದು ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ಶಿಂಝೊ ನಕನಿಶಿ ಹೇಳಿದ್ದಾರೆ.
ಕಂಪನಿಯು ಅತ್ಯಧಿಕ ಇಂಧನ ದಕ್ಷತೆಯ 800ಸಿಸಿ ಕಾರೊಂದನ್ನು ಹಬ್ಬದ ವೇಳೆಗೆ ಪರಿಚಯಿಸುವುದಾಗಿ ಹೇಳಿತ್ತು. ಈ ಕಾರು ಆಲ್ಟೊ ಕಾರಿಗಿಂತ ಹೆಚ್ಚು ದುಬಾರಿಯಾಗಿರಲಿದೆ ಎಂದು ಹೇಳಲಾಗಿತ್ತು. ಗುರ್ ಗಾಂವ್ ಘಟಕದಲ್ಲಿ ನೂತನ ಕಾರಿನ ಉತ್ಪಾದನೆಯನ್ನು ಆಗಸ್ಟ್ ತಿಂಗಳಲ್ಲಿ ಆರಂಭಿಸುವ ನಿರೀಕ್ಷೆಯಿದೆ.
ನಗರಗಳಲ್ಲಿ 800 ಕಾರಿನ ಮಾರಾಟವನ್ನು ಮಾರುತಿ ಈಗಾಗಲೇ ಸ್ಥಗಿತಗೊಳಿಸಿದೆ. ಆಲ್ಟೋ ಬೇಡಿಕೆ ತುಸು ಕಡಿಮೆಯಾಗಿರುವುದರಿಂದ ನೂತನ 800 ಸಿಸಿ ಕಾರೊಂದರ ಮೂಲಕ ಪಾಲು ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಕಂಪನಿ ಹೊಂದಿತ್ತು.
ಮಾನೆಸರ್ ಘಟಕದಲ್ಲಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ನಡುವೆ ಜುಲೈ 18ರಂದು ಆರಂಭವಾದ ಜಗಳವು ಒಂದು ಹತ್ಯೆಯಲ್ಲಿ ಅಂತ್ಯವಾಗಿತ್ತು.ಮಾನವಸಂಪನ್ಮೂಲ ವಿಭಾಗದ ಎಂಡಿ ಅವನೀಶ್ ಕುಮಾರ್ ದೇವ್ ರನ್ನು ನೌಕರರು ಸಜೀವವಾಗಿ ದಹಿಸಿದ್ದರು.
ಓದಿ: ಮಾನೆಸರ್ ಘಟಕವೆಂಬ ಮಾರುತಿ ಅಗ್ನಿ ಪರ್ವತ


Click it and Unblock the Notifications









