Just In
- 24 min ago ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- 41 min ago ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- 41 min ago Ather: ಬೆಂಗಳೂರಿನ ಎಥರ್ನಿಂದ ಫ್ಯಾಮಿಲಿ ಇ-ಸ್ಕೂಟರ್ 'ರಿಜ್ಟಾ' ಬುಕ್ಕಿಂಗ್ ಆರಂಭ, ರೂ.999 ಪಾವತಿಸಿದರೆ ಸಾಕು!
- 1 hr ago Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Movies ಬಿಸಿಲು, ಮಳೆ, ಧೂಳು ಬರಲಿ.. ಯಶ್ ಇದ್ರೆ ಸಾಕು.. ಏನಂತೀರಾ?
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಎಸ್ಆರ್ಟಿಸಿಗೆ 50 ನೂತನ ಬಸ್; ಸಂಚಾರ ಎಲ್ಲಿಂದ ಎಲ್ಲಿಗೆ?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್ಆರ್ಟಿಸಿ) ಮತ್ತೊಂದು ಕೋಡು ಬಂದಿದ್ದು, 50 ನೂತನ ಬಸ್ಗಳ ಸೇರ್ಪಡೆಯಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ನೂತನ ಬಸ್ಸುಗಳಿಗೆ ಚಾಲನೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಒಟ್ಟು 1,528 ಬಸ್ಸುಗಳು ಸೇರ್ಪಡೆಯಾಗಲಿದ್ದು, ಇದರ ಭಾಗವಾಗಿ ಇದೀಗ 50 ಹೊಚ್ಚ ಹೊಸ ಬಸ್ಸುಗಳ ಆಗಮನವಾಗಿದೆ. ಇದು ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಕೆಎಸ್ಆರ್ಟಿಸಿಯನ್ನು ಮತ್ತಷ್ಟು ಬಲಪಡಿಸಲಿದೆ. ಖಾಸಗಿ ಬಸ್ಗಳ ಅನಧಿಕೃತ ಪಯಣಕ್ಕೆ ಕಡಿವಾಣ ಹಾಕುವುದು, ಹಳೆ ಬಸ್ಸುಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸುವುದು ಹಾಗೂ ಯಾತ್ರಿಕರಿಗೆ ಸುಗುಮ ಸಂಚಾರ ಒದಗಿಸುವುದು ಕೆಎಸ್ಆರ್ಟಿಸಿ ಗುರಿಯಾಗಿದೆ.
ಪೀಣ್ಯದಲ್ಲಿ
32
ಕೋಟಿ
ರು.
ವೆಚ್ಚದಲ್ಲಿ
ತಲೆದೋರಿರುವ
ನೂತನ
ಸ್ಯಾಟ್ಲೈಟ್
ಬಸ್
ನಿಲ್ಧಾಣ
ಶೀಘ್ರದಲ್ಲೇ
ಲೋಕರ್ಪಣೆಯಾಗಲಿದೆ.
ಬೆಂಗಳೂರಿನ
ದೇವನಹಳ್ಳಿ
ಅಂತಾರಾಷ್ಟ್ರೀಯ
ವಿಮಾನ
ನಿಲ್ದಾಣದಿಂದ
ಮೈಸೂರಿಗೆ
ನೇರ
ಸಂಪರ್ಕ
ಕಲ್ಪಿಸುವ
ಫ್ಲೈ
ಬಸ್
ಸೇವೆಯನ್ನು
2
ತಿಂಗಳಿನಲ್ಲಿ
ಆರಂಭಿಸಲಾಗುವುದು.
ಇದಕ್ಕಾಗಿ
ಐರಾವತ
ಕ್ಲಬ್
ಕ್ಲಾಸ್
ಬಸ್ಸನ್ನು
ಬಳಸಿಕೊಳ್ಳಲಾಗುವುದು
ಎಂದು
ಸಚಿವರು
ತಿಳಿಸಿದರು.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಪ್ರವಾದ್ ಪ್ರಕಾರ, ನೂತನ 50 ಬಸ್ಸುಗಳಲ್ಲಿ ನಾಲ್ಕು ವೋಲ್ವೋ ಮಲ್ಟಿ ಎಕ್ಸೆಲ್, ಆರು ರಾಜಹಂಸ ಹಾಗೂ 40 ಸಾಮಾನ್ಯ ಬಸ್ಸುಗಳು ಸೇರಿರಲಿದೆ. ಈ ಎಲ್ಲ ಬಸ್ಸುಗಳು ಹೊಸ ರೂಟ್ನಲ್ಲಿ ಸಂಚಾರ ಆರಂಭಿಸಲಿದೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 1528 ಬಸ್ಸುಗಳನ್ನು ಸೇರ್ಪಡೆ ಮಾಡಲಾಗುತ್ತಿದ್ದು, ಇದರಲ್ಲಿ 236 ಗ್ರಾಮಾಂತರ, 1,079 ಕರ್ನಾಟಕ ಸಾರಿಗೆ, 87 ನಗರ ಸಾರಿಗೆ, 6 ಕರ್ನಾಟಕ ವೈಭವ, 58 ರಾಜಹಂಸ ಹಾಗೂ 62 ವೋಲ್ವೋ ಮಲ್ಟಿ ಎಕ್ಸೆಲ್ ಬಸ್ಸುಗಳು ಇರಲಿದೆ.
ಪ್ರಯಾಣಿಕರ ಸುರಕ್ಷಿತ ಪಯಣಕ್ಕೂ ಪಯಣಕ್ಕೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಈ ನಿಟ್ಟಿನಲ್ಲಿ 500 ಕೆಎಸ್ಆರ್ಟಿಸಿ ಬಸ್ಸುಗಳಿಗೆ ಪ್ರಾಯೋಗಿಕವಾಗಿ ಸಿಸಿಟಿವಿ ಆಳವಡಿಸಲಾಗುತ್ತಿದೆ. ರಾತ್ರಿ ವೇಳೆ ಸಂಚರಿಸುವ ಬಸ್ಗಳಿಗೆ ಈ ಕ್ಯಾಮೆರಾಗಳನ್ನು ಅಳವಡಿಸಲು ಚಿಂತನೆಯಿದೆ.
ಬೆಂಗಳೂರು ಕೇಂದ್ರ ವಿಭಾಗದಿಂದ 4 ವೋಲ್ವೋ ಮಲ್ಟಿ ಎಕ್ಸೆಲ್ ಬಸ್ಗಳು ಹಾಗೂ 6 ರಾಜಹಂಸ ಬಸ್ಗಳು ಬೆಂಗಳೂರಿನಿಂದ ರಾಯಚೂರು, ಮಂತ್ರಾಲಯ, ಹೈದರಾಬಾದ್, ಊಟಿ, ತಿರುಚಿ ಮಾರ್ಗಗಳಲ್ಲಿ ಹಾಗೂ ರಾಮನಗರ ವಿಭಾಗದಿಂದ 3 ಕೆಎಸ್ಆರ್ಟಿಸಿ ಬಸ್ಗಳು ಬೆಂಗಳೂರು-ಕುಕ್ಕೆ ಸುಬ್ರಹ್ಮಣ್ಯ-ಕನಕಪುರ, ಕೊಳ್ಳೆಗಾಲ ಮಾರ್ಗದಲ್ಲಿ ಸಂಚರಿಸಲಿವೆ.
ತುಮಕೂರು ವಿಭಾಗದಿಂದ 11 ಬಸ್ಗಳು ತುಮಕೂರು-ಬೆಂಗಳೂರು-ಬಳ್ಳಾರಿ, ಶಿರಾ-ಬೆಂಗಳೂರು-ಹುಬ್ಬಳ್ಳಿ, ದಾವಣಗೆರೆ-ಬೆಂಗಳೂರು-ಹುಬ್ಬಳ್ಳಿ, ದಾವಣಗೆರೆ-ಬೆಂಗಳೂರು-ಶಿವಮೊಗ್ಗ-ಅರಸಿಕೆರೆ ಮಾರ್ಗಗಳಲ್ಲಿ ಹಾಗೂ ಕೋಲಾರ ವಿಭಾಗದಿಂದ 4 ಕೆಎಸ್ಆರ್ಟಿಸಿ ಬಸ್ಗಳು ಬೆಂಗಳೂರು-ಹುಬ್ಬಳ್ಳಿ-ದಾವಣಗೆರೆ, ಮಾಲೂರು-ಬೆಂಗಳೂರು-ಹುಬ್ಬಳ್ಳಿ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿವೆ. ಚಿಕ್ಕಬಳ್ಳಾಪುರ ವಿಭಾಗದಿಂದ 4 ಗ್ರಾಮೀಣ ಸಾರಿಗೆ ಬಸ್ಗಳು ದೊಡ್ಡಬಳ್ಳಾಪುರ-ಕಾವೇರಿಭವನ-ಯಲಹಂಕ ಮಾರ್ಗಗಳಲ್ಲಿ ಸಂಚರಿಸಲಿವೆ.
ಮಂಡ್ಯ ವಿಭಾಗದಿಂದ ಕರ್ನಾಟಕ ಸಾರಿಗೆಯ 8 ಬಸ್ಗಳು ಕೆಆರ್ ಪೇಟೆ-ಬೆಂಗಳೂರು-ನಾಗಮಂಗಲ, ಪಾಂಡವಪುರ-ಧರ್ಮಸ್ಥಳ-ಮೈಸೂರು-ಹಾಸನ, ಶಿವಮೊಗ್ಗ-ಕೊಪ್ಪಳ-ತಿಪಟೂರು-ಅರಸಿಕೆರೆ, ಮಳವಳ್ಳಿ-ಮೈಸೂರು-ಶಿವಮೊಗ್ಗ-ಅರಸೀಕೆರೆ ಮಾರ್ಗಗಳಲ್ಲಿ, ಚಾಮರಾಜನಗರ ವಿಭಾಗದಿಂದ ಕರ್ನಾಟಕ ಸಾರಿಗೆಯ 8 ಬಸ್ಗಳು ಚಾಮರಾಜನಗರ-ಸೋಮವಾರಪೇಟೆ-ಮೈಸೂರು, ಬೆಂಗಳೂರು-ಕೊಳ್ಳೆಗಾಲ-ಚಾಮರಾಜನಗರ, ಕೊಳ್ಳೆಗಾಲ-ಬೆಂಗಳೂರು-ನಂಜನಗೂಡು, ಮಂಗಳೂರು-ಮೈಸೂರು-ಮಡಿಕೇರಿ, ಮಲೈಮಹದೇಶ್ವರ ಬೆಟ್ಟ-ದಾಬಸ್ಪೇಟೆ-ಕೊರಟಗೆರೆ ಮಾರ್ಗಗಳಲ್ಲಿ ಸೇವೆ ಒದಗಿಸಲಿವೆ.
ಹಾಗೆಯೇ ಚಿಕ್ಕಮಗಳೂರು ವಿಭಾಗದಿಂದ ಕೆಎಸ್ಆರ್ಟಿಸಿ ಎರಡು ಬಸ್ಗಳು ಚಿಕ್ಕಮಗಳೂರು-ಬೆಂಗಳೂರು-ಹಾಸನ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.