Just In
- 47 min ago ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- 14 hrs ago ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- 16 hrs ago Air Taxi: ಬೆಂಗಳೂರು ಸೇರಿ ಈ ನಗರಗಳಲ್ಲಿ ಏರ್ ಟ್ಯಾಕ್ಸಿ.. ಆಕಾಶದಲ್ಲೇ ಆಫೀಸ್ಗೆ ಹೋಗಬಹುದು, ಕಡಿಮೆ ಖರ್ಚು!
- 16 hrs ago ಐಷಾರಾಮಿ ಸ್ಪೋರ್ಟ್ಸ್ ಕಾರಿನಂತೆ ಮಾರ್ಪಾಡಾದ ಬಡವರ ಮಾರುತಿ ಆಲ್ಟೋ ಕಾರಿಗೆ ನೆಟ್ಟಿಗರು ಫಿದಾ
Don't Miss!
- News ಶಿವಲಿಂಗೇಗೌಡರನ್ನು ಮಂತ್ರಿಗಿರಿ ಆಫರ್ ನೀಡಿದ ಸಿದ್ದರಾಮಯ್ಯ: ಕೊಟ್ಟ ಟಾಸ್ಕ್ ಏನು ಗೊತ್ತಾ?
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Technology ಇಂದು ಮೊಟೊ G64 5G ಫೋನ್ ಫಸ್ಟ್ ಸೇಲ್!..ಈ ಫೋನಿನ ಪ್ಲಸ್ ಪಾಯಿಂಟ್ ಏನು?
- Sports RR vs MI: 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ನಿರ್ಮಿಸಿದ ಮೊದಲಿಗ ಯುಜ್ವೇಂದ್ರ ಚಹಾಲ್!
- Finance ಎವರೆಸ್ಟ್ ಮಾತ್ರವಲ್ಲ ಎಂಡಿಎಚ್ನ ಉತ್ಪನ್ನದಲ್ಲೂ ಕೀಟನಾಟಕ ಪತ್ತೆ
- Movies ಈ ಬಾಲಿವುಡ್ ನಟ-ನಟಿಯರು ಭಾರತದಲ್ಲಿ ಯಾಕೆ ಮತ ಚಲಾಯಿಸಲ್ಲ; ಕಾರಣವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ
ವಾಹನ ನಿಲುಗಡೆ ಜಾಗವಿದ್ದಲ್ಲಿ ಮಾತ್ರ ಕಾರು ಮತ್ತು ಬೈಕ್ ಕೊಳ್ಳಲು ಅವಕಾಶ ನೀಡುವ ವಿನೂತನ ಕಾಯ್ದೆ ರೂಪಿಸಲು ಕೇಂದ್ರ ಸರಕಾರ ಹೊರಟಿದೆ.
ಗಮನಾರ್ಹ
ಬೆಳವಣಿಗೆಯೊಂದರಲ್ಲಿ
ಕ್ರಾಂತಿಕಾರಿ
ಪ್ರಸ್ತಾಪವೊಂದನ್ನು
ಮುಂದಿಟ್ಟಿರುವ
ಕೇಂದ್ರ
ಸರಕಾರವು,
ವಾಹನ
ನಿಲುಗಡೆ
ಜಾಗವಿದ್ದಲ್ಲಿ
ಮಾತ್ರ
ಕಾರು
ಮತ್ತು
ಬೈಕ್
ಕೊಳ್ಳಲು
ಅವಕಾಶ
ನೀಡುವ
ವಿನೂತನ
ಕಾಯ್ದೆ
ರೂಪಿಸಲು
ಹೊರಟಿದೆ.
ಕೇಂದ್ರ ಸರಕಾರ ಹೊರಡಿಸಿರುವ ಪ್ರಸ್ತಾವನೆಯಲ್ಲಿ ಹೊಸತಾಗಿ ಕಾರು ಅಥವಾ ಬೈಕ್ ಖರೀದಿಸುವ ಗ್ರಾಹಕರು, ಅಧಿಕಾರಿಗಳಿಗೆ ವಾಹನ ನಿಲುಗಡೆ ಮಾಡಲು ಹೊಂದಿರುವ ಸ್ಥಳದ ಪುರಾವೆಯನ್ನು ತೋರಿಸಬೇಕಿದೆ.
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಮಾರಾಟದಲ್ಲಿ ಗಣನೀಯವಾದ ವರ್ಧನೆಯುಂಟಾಗುತ್ತಿದೆ. ಇನ್ನೊಂದೆಡೆ ದೇಶದ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ಪ್ರದೇಶದ ಅಭಾವ ಎದುರಾಗುತ್ತಿದೆ.
2015 ಮಾರ್ಚ್ ವೇಳೆಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 26 ಲಕ್ಷಕ್ಕೂ ಹೆಚ್ಚು ಕಾರುಗಳು ನೆಲೆಗೊಂಡಿದೆ. ಇದು ದೇಶದ ಇತರೆಲ್ಲ ನಗರಗಿಂತಲೂ ಅತ್ಯಧಿಕವಾಗಿದೆ.
ಭವಿಷ್ಯದಲ್ಲಿ ಶೌಚಾಲಯವಿಲ್ಲದೆ ಯಾವುದೇ ಕಟ್ಟಡ ನಿರ್ಮಾಣಕ್ಕೂ ಆಸ್ಪದ ಕೊಡಲಾಗುವುದಿಲ್ಲ. ಅದೇ ರೀತಿ ಸಾಕಷ್ಟು ಪಾರ್ಕಿಂಗ್ ಪ್ರದೇಶ ಲಭ್ಯತಾ ಪ್ರಮಾಣಪತ್ರವಿಲ್ಲದೆ ಕಾರು ಅಥವಾ ಬೈಕ್ ಗಳ ನೊಂದಣಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಈ ಸಂಬಂಧ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಮಾತುಕತೆ ನಡೆಸಲಿರುವ ವೆಂಕಯ್ಯ ನಾಯ್ಡು ನಗರ ಪ್ರದೇಶಗಳ ಸೂಕ್ಷ್ಮತೆಯ ಬಗ್ಗೆ ಪರಿಶೋಧನೆ ನಡೆಸಲಿದ್ದು, ದಿಟ್ಟ ಹೆಜ್ಜೆಯನ್ನಿಡಲಿದ್ದಾರೆ.
ಈ ಮಹತ್ತರ ಯೋಜನೆಯನ್ನು ವಾಹನ ತಜ್ಞರು ಸ್ವಾಗತಿಸಿದರೂ ಸಹ ಅನೇಕ ಸವಾಲುಗಳು ಎದುರಾಗಲಿದೆ ಎಂದು ಬೊಟ್ಟು ಮಾಡಿ ತೋರಿಸಿದ್ದಾರೆ.
ಮೋಟಾರು ವಾಹನ ಕಾಯ್ದೆ (ತಿದ್ದುಪಡಿ) 2016ರಲ್ಲಿ ರಸ್ತೆ ಸುರಕ್ಷತೆಯಲ್ಲಿ ಸುಧಾರಣೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದಕ್ಕೆ ಸಂಸದೀಯ ಅಂಗೀಕಾರ ದೊರಕಬೇಕಾಗಿದೆ.
ಹಾಗಿದ್ದರೂ ಪಾರ್ಕಿಂಗ್ ನಿಯಮ ಜಾರಿಗೆ ತರುವುದು ಅಷ್ಟೊಂದು ಸುಲಭದ ವಿಚಾರವಲ್ಲ. ಯಾಕೆಂದರೆ ದೆಹಲಿ ಜನಸಂಖ್ಯೆಯ ಮೂರರಲ್ಲಿ ಒಂದಂಶವು ಅನಧಿಕೃತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.