Just In
- 12 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 14 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 15 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 16 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾರ್ ಬಂದ್ ಆದ್ರೂ ಬೆಂಗಳೂರಿಗರು ಕುಡಿಯೋದು ಬಿಟ್ಟಿಲ್ಲ ಅನ್ನುತ್ತೆ ಅಂಕಿ ಅಂಶ !!
ಹೆದ್ದಾರಿ ಅಕ್ಕ ಪಕ್ಕ ಬಾರ್ ಬಂದ್ ಆಗಿರುವುದರಿಂದ ನಮಗೆಲ್ಲರಿಗೂ ತಿಳಿದಿರುವಂತೆ ಅಪಘಾತಗಳ ಸಂಖ್ಯೆಯ ದೇಶದಲ್ಲಿ ಇಳಿಮುಖವಾಗಿದೆ. ಎಡಕ್ಕೆ ತದ್ವಿರುದ್ಧವೆಂಬಂತೆ ಬೆಂಗಳೂರಿನಲ್ಲಿ ಈ ಸಂಖ್ಯೆ ಜಾಸ್ತಿ ಆಗಿದೆ ಓದುಗರೇ.
ಹೆದ್ದಾರಿ ಅಕ್ಕ ಪಕ್ಕ ಬಾರ್ ಬಂದ್ ಆಗಿರುವುದರಿಂದ ನಮಗೆಲ್ಲರಿಗೂ ತಿಳಿದಿರುವಂತೆ ಅಪಘಾತಗಳ ಸಂಖ್ಯೆಯ ದೇಶದಲ್ಲಿ ಇಳಿಮುಖವಾಗಿದೆ. ಎಡಕ್ಕೆ ತದ್ವಿರುದ್ಧವೆಂಬಂತೆ ಬೆಂಗಳೂರಿನಲ್ಲಿ ಈ ಸಂಖ್ಯೆ ಜಾಸ್ತಿ ಆಗಿದೆ ಓದುಗರೇ.
ಹೌದು, ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಜಿಲ್ಲೆಯ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳು ಕಳೆದ ಜೂನ್ ಒಂದರಿಂದ ಬಂದ್ ಮಾಡಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಅಂಕಿ ಅಂಶಗಳ ಪ್ರಕಾರ ಈ ವರ್ಷದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಈ ತಿಂಗಳು ದಾಖಲಾಗಿವೆ ಎಂದರೆ ನಂಬಲೇ ಬೇಕು.
ಬೆಂಗಳೂರಿನಲ್ಲಿ ಕುಡಿದು ಚಾಲನೆ ಮಾಡುವವರ ಸಂಖ್ಯೆ ಇಂದೆಂದಿಗಿಂತಲೂ ಹೆಚ್ಚಳವಾಗಿದ್ದು, 2017ರ ಜನವರಿಯಿಂದ ಆಗಸ್ಟ್ವರೆಗಿನ ಅಂಕಿ ಅಂಶದ ಪ್ರಕಾರ ಜುಲೈನಲ್ಲಿ ಅತಿ ಹೆಚ್ಚು ಅಂದರೆ 7,438 ಪ್ರಕರಣಗಳು ದಾಖಲಾಗಿವೆ.
ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಆರಂಭವಾದ ಬಳಿಕ ಜುಲೈ ತಿಂಗಳಲ್ಲಿ 7,438 ಪ್ರಕರಣಗಳು ದಾಖಲಾಗಿರುವುದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.
ಕುಡಿತದ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಮ್ಮಿಕೊಂಡು ಇದರ ಜೊತೆಗೆ ಪೊಲೀಸರ ಕಠಿಣ ಕ್ರಮದ ನಡುವೆಯೂ ಕುಡಿದು ಚಾಲನೆ ಮಾಡುವರ ಸಂಖ್ಯೆ ಜಾಸ್ತಿಯಾಗಿರುವುದು ವಿಪರ್ಯಾಸವೇ ಸರಿ.
ಕೋರ್ಟ್ ಆದೇಶ ಪ್ರಕಾರ, ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಮದ್ಯದಂಗಡಿಗಳು ಮತ್ತು ಪಬ್, ಬಾರ್ ಅಂಡ್ ರೆಸ್ಟೋರೆಂಟ್ಗಳ ತವರು ಇಂದಿರಾನಗರ, ಕೋರಮಂಗಲ ಪ್ರದೇಶಗಳಲ್ಲಿಯೂ ಬಾರ್ಗಳೂ ಬಂದ್ ಆಗಿದ್ದವು. ಆದರೆ, ಈ ಪ್ರದೇಶದಲ್ಲೇ ಹೆಚ್ಚು ಕುಡುಕರು, ಸಂಚಾರ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ದಂಡ ಕಟ್ಟಿಸಿಕೊಂಡಿದ್ದಾರೆ.
ಇತ್ತೀಚೆಗೆ ಪಬ್ಗಳು ಮಧ್ಯಾಹ್ನ 2ಗಂಟೆಯಿಂದ 5 ಗಂಟೆವ ಅವಧಿಯಲ್ಲಿ 'ಹ್ಯಾಪಿ ಅವರ್' ಎಂಬ ಹೆಸರಿನಲ್ಲಿ ಕೊಡುಗೆ ನೀಡಿತ್ತಿವೆ. ಇದರ ಲಾಭ ಪಡೆಯುವ ಮೂಲಕ ಮಧ್ಯಾಹ್ನವೂ ಸಹ ಕುಡಿದು ವಾಹನ ಚಲಾಯಿಸುವ ಕೆಲಸವನ್ನು ಸಾರ್ವಜನಿಕರು ಮಾಡುತ್ತಿದ್ದು, ಈ ಬಗ್ಗೆ ಇಲಾಖೆ ಗಮನ ಹರಿಸಬೇಕಾಗಿದೆ.