Just In
- 9 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 10 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 11 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 11 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ್ಯಾಲಿ- ವಿಜೇತರಾಗಿ ಹೊರಹೊಮ್ಮಿದ ಸುರೇಶ್ ರಾಣಾ ಮತ್ತು ನಟರಾಜ್ ಆರ್
ಜುಲೈ 15ರಂದು ಪ್ರತಿಷ್ಠಿತ ಮೊಬಿಲ್ ಸಂಸ್ಶೆಯ ನೇತೃತ್ವದಲ್ಲಿ ಬೆಂಗಳೂರಿನಿಂದ ಆರಂಭವಾಗಿದ್ದ 15ನೇ ಮಾರುತಿ ಸುಜುಕಿ ದಕ್ಷಿಣ ಡೇರ್ ರ್ಯಾಲಿಯು ಅಂತಿಮವಾಗಿ ಪುಣೆಯಲ್ಲಿ ಮುಕ್ತಾಯಗೊಂಡಿದೆ.
ಜುಲೈ 15ರಂದು ಪ್ರತಿಷ್ಠಿತ ಮೊಬಿಲ್ ಸಂಸ್ಶೆಯ ನೇತೃತ್ವದಲ್ಲಿ ಬೆಂಗಳೂರಿನಿಂದ ಆರಂಭವಾಗಿದ್ದ 9ನೇ ಮಾರುತಿ ಸುಜುಕಿ ದಕ್ಷಿಣ ಡೇರ್ ರ್ಯಾಲಿ ಆವೃತ್ತಿಯು ಅಂತಿಮವಾಗಿ ಪುಣೆಯಲ್ಲಿ ಮುಕ್ತಾಯಗೊಂಡಿದ್ದು, ಆರು ದಿನಗಳ ಕಾಲ ನಡೆದ ರೋಚಕ ಸ್ಪರ್ಧೆಯ ಹೈಲೈಟ್ಸ್ಗಳು ಇಲ್ಲಿವೆ.
ಮೊದಲ ದಿನದಿಂದಲೂ ಅಲ್ಟಿಮೆಟ್ ಕಾರುಗಳ ವಿಭಾಗದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಮಾರುತಿ ಸುಜುಕಿ ತಂಡದ ಸುರೇಶ್ ರಾಣಾ, ಕೊನೆ ಕ್ಷಣದವರೆಗೂ ಪ್ರತಿಸ್ಪರ್ಧಿಗಳೊಂದಿಗೆ ಉತ್ತಮ ಪ್ರದರ್ಶನ ನಡೆಸಿ ಪ್ರಥಮ ಸ್ಥಾನದೊಂದಿಗೆ ಪ್ರತಿಷ್ಠಿತ ಮೋಟಾರ್ ರೇಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಇದೇ ಪ್ರಯತ್ನ ನಡೆಸಿದ್ದ ಅಲ್ಟಿಮೆಟ್ ಬೈಕ್ ವಿಭಾಗದ ಸ್ಪರ್ಧಿ ನಟರಾಜ್ ಆರ್ ಕೂಡ ಪ್ರಥಮ ಸ್ಥಾನದೊಂದಿಗೆ 9ನೇ ದಕ್ಷಿಣ ಡೇರ್ ರ್ಯಾಲಿಯಲ್ಲಿ ತಮ್ಮ ಆಪ್ ರೋಡಿಂಗ್ ಕೌಶಲ್ಯಗಳನ್ನು ಪ್ರದರ್ಶನ ಮಾಡುವ ಮೂಲಕ ಮೋಟಾರ್ ರೇಸ್ ಪ್ರಿಯರಿಗೆ ರಸದೌತಣ ನೀಡಿದ್ದು ರೋಚಕವಾಗಿತ್ತು.
ಇನ್ನು ಅಲ್ಟಿಮೆಟ್ ಕಾರು ವಿಭಾಗದಲ್ಲಿ ಉತ್ತಮ ಸಾಧನೆ ತೊರಿದ ಸಮರ್ಥ್ ಯಾದವ್ ಮತ್ತು ಎಸ್ಎಂ ನಿಜಾಮಿ ದ್ವಿತಿಯ ಸ್ಥಾನ ಪಡೆದುಕೊಂಡರೆ ಸಂದೀಪ್ ಶರ್ಮಾ ಮತ್ತು ಕರಣ್ ಶರ್ಮಾ ತೃತಿಯ ಸ್ಥಾನ ತಮ್ಮದಾಗಿಸಿಕೊಂಡರು.
ಅದೇ ರೀತಿಯಾಗಿ ಅಲ್ಟಿಮೆಟ್ ಬೈಕ್ ವಿಭಾಗದಲ್ಲಿ ನಟರಾಜ್ ಆರ್ ನಂತರ ಉತ್ತಮ ಸಾಧನೆ ತೋರಿದ ಅಬ್ದುಲ್ ವಾಹಿದ್ ದ್ವಿತಿಯ ಸ್ಥಾನ ಮತ್ತು ಸಂಜಯ್ ಕುಮಾರ್ ತೃತಿಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇನ್ನು ಬೆಂಗಳೂರಿನಿಂದ ಆರಂಭವಾಗಿದ್ದ ದಕ್ಷಿಣ ಡೇರ್ ರ್ಯಾಲಿಯೂ ಒಟ್ಟು 2 ಸಾವಿರ ಕಿಮಿ ಸ್ಪರ್ಧೆಯಲ್ಲಿ 180 ಸ್ಪರ್ಧಿಗಳು ಭಾಗಿಯಾಗಿದ್ದರು.
ಆದ್ರೆ ಅಂತಿಮ ಹಂತದವರೆಗೂ ಯಾವುದೇ ರೀತಿಯ ತೊಂದರೆಗೆ ಒಳಗಾಗದೇ ವಿಜೇಯದ ಹಾದಿಯತ್ತ ಸಾಗಿದ್ದ ಸುರೇಶ್ ರಾಣಾ, ನಟರಾಜ್ ಆರ್, ಸಮರ್ಥ್ ಯಾದವ್, ಎಸ್ಎಂ ನಿಜಾಮಿ, ಅಬ್ದುಲ್ ವಾಹಿದ್ ಮತ್ತು ಸಂಜಯ್ ಕುಮಾರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು ರೋಚಕವಾಗಿತ್ತು.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಮೋಟಾರ್ ರೇಸ್ ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮಾರುತಿ ಸುಜುಕಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದಕ್ಕೆ ಬೆಂಬಲವಾಗಿ ನಿಂತಿದ್ದ ಪ್ರತಿಷ್ಠಿತ ಮೊಬಿಲ್ ಸಂಸ್ಥೆ ಕೂಡಾ ಈ ಕಾರ್ಯಕ್ರಮ ಹೊಣೆ ಹೊತ್ತಿತ್ತು.
ಒಟ್ಟಿನಲ್ಲಿ ಮೋಟಾರ್ ರೇಸ್ ಪ್ರಿಯರಿಗೆ ದಕ್ಷಿಣ ಡೇರ್ ರೇಸ್ ಆವೃತ್ತಿಯೂ ಖುಷಿ ನೀಡಿದ್ದು ಮಾತ್ರ ಸುಳ್ಳಲ್ಲ.