Just In
- 3 min ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
- 2 hrs ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 14 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 15 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
Don't Miss!
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಕದ್ದಿದ್ದ ಈ ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
"ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ" ಎಂಬ ವಾಕ್ಯ ಎಷ್ಟು ಅರ್ಥಗರ್ಭಿತವಾಗಿದೆಯಲ್ಲವೇ? ತಂತ್ರಜ್ಞಾನ ಮುಂದುವರಿದಂತೆ ಅದರ ದುರ್ಬಳಕೆಯು ಜಾಸ್ತಿಯಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಳೆದ ಹಲವಾರು ದಶಕಗಳಿಂದ ಕಾರುಗಳ ಸುರಕ್ಷಾ ತಂತ್ರಜ್ಞಾನಗಳಲ್ಲಿ ಭಾರೀ ಅಭಿವೃದ್ಧಿಯಾಗಿದೆ. ಆದರೆ ಇವೆಲ್ಲವನ್ನು ತಮ್ಮ ಕಪಟ ತಂತ್ರದ ಮೂಲಕ ಖದೀಮರು ತಂತ್ರಜ್ಞಾನವನ್ನೇ ಮೆಟ್ಟಿ ನಿಂತಿದ್ದಾರೆ.
ದೇಶದಲ್ಲಿ ಇತ್ತೀಚೆಗೆ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡಾ ಖರೀದಿಮ ಮಾತ್ರ ತಮ್ಮ ಕೈಚಳಕವನ್ನು ತೋರುತ್ತಿರುವುದು ವಾಹನ ಮಾಲೀಕರಿಗೆ ಸಿಕ್ಕಾಪಟ್ಟೆ ತಲೆ ಬಿಸಿ ಉಂಟು ಮಾಡಿದೆ. ಆದ್ರೆ ಉಪ್ಪು ತಿಂದವನೂ ನೀರು ಕುಡಿಯಲೇಬೇಕು ಅಲ್ಲವೇ? ಹೀಗಾಗಿ ವಾಹನಗಳನ್ನು ಕದ್ದ ಖದೀಮರು ಯಾವುದರೂ ಒಂದು ಸುಳಿವಿನೊಂದಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಹೌದು, ರಾಷ್ಟ್ರ ರಾಜಧಾನಿಯಲ್ಲಿ ಕಾರು ಮಾಲೀಕರಿಗೆ ತಲೆ ನೋವಾಗಿದ್ದ ಪರಿಣಮಿಸಿದ್ದ ಕಾರು ಖದೀಮರ ಗ್ಯಾಂಗ್ ಒಂದು ಅಂದರ್ ಆಗಿದ್ದು, ಬರೋಬ್ಬರಿ 1 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ದೆಹಲಿಯ ಕೆಶೋಪುರ ವಲಯದಲ್ಲಿ ಸಿಕ್ಕಿಬಿದ್ದಿರುವ ಮೂವರು ಕಾರು ಖದೀಮರ ತಂಡವೊಂದು ಕಾರು ಕಳ್ಳತನ ಮಾಡುತ್ತಿರುವ ಸಂದರ್ಭದಲ್ಲೇ ರೆಡ್ಹ್ಯಾಂಡ್ ಆಗಿ ಲಾಕ್ ಆಗಿದ್ದು, ಈ ಮೂಲಕ 121 ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ.
ಉತ್ತರ ಪ್ರದೇಶದ ರವೀಂದ್ರ, ದೆಹಲಿ ನಿವಾಸಿಗಳಾದ ಅನ್ವರ್ ಮತ್ತು ಅಶೋಕ್ ಎಂಬುವವರನ್ನು ಬಂಧಿಸಿರುವ ದೆಹಲಿ ಪೊಲೀಸರು, ಈ ಕಳ್ಳತನ ಜಾಲದಲ್ಲಿ ಭಾಗಿಯಾಗಿರುವ ಕೆಲವು ಸೇಕೆಂಡ್ ಹ್ಯಾಂಡ್ ಕಾರು ಮಾರಾಟದ ದಲ್ಲಾಳಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಮೊದಮೊದಲು ಸಣ್ಣಪುಟ್ಟ ಕಳ್ಳತನಗಳೊಂದಿಗೆ ಮನೆಗಳ್ಳತನ ಮಾಡುತ್ತಿದ್ದ ಈ ತಂಡ ತದನಂತರ ಬಹುಬೇಗ ಶ್ರೀಮಂತರಾಗುವ ಪ್ಲ್ಯಾನ್ನೊಂದಿಗೆ ಐಷಾರಾಮಿ ಕಾರು ಕಳ್ಳತನಕ್ಕೆ ಕೈ ಹಾಕಿದ್ದರು. ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಆಕ್ಟಿವ್ ಆಗಿದ್ದ ಈ ತಂಡವು ದೆಹಲಿಯ ವಿವಿಧಡೆ 10ಕ್ಕೂ ಹೆಚ್ಚು ಕಾರುಗಳನ್ನು ಕಳ್ಳತನ ಮಾಡಿದ್ದರು.
ತದನಂತರ ಕದ್ದ ಕಾರುಗಳನ್ನು ಉತ್ತರಪ್ರದೇಶ, ರಾಜಸ್ತಾನ ಮತ್ತು ಹರಿಯಾಣಗಳಲ್ಲಿ ಮಾರಾಟ ಮಾಡುತ್ತಿದ್ದ ಈ ಮೂವರು ಖದೀಮರು, ಸೇಕೆಂಡ್ ಹ್ಯಾಂಡ್ ಕಾರು ಖರೀದಿಗೆ ಎದುರು ನೋಡುತ್ತಿದ್ದ ಗ್ರಾಹಕರನ್ನು ಟಾರ್ಗೆಟ್ ಮಾಡಿ ಅಂತವರಿಗೆಯೇ ಈ ಕದ್ದ ಕಾರುಗಳನ್ನು ಮಾರಾಟ ಮಾಡುತ್ತಿದ್ದರು.
ಕದ್ದ ಕಾರುಗಳನ್ನು ಮಾರಾಟ ಮಾಡುವ ವೇಳೆ ವಾಹನಗಳ ದಾಖಲೆಗಳನ್ನು ಕೇಳಿದರೆ ಕುಂಟು ನೆಪಹೇಳುತ್ತಿದ್ದು ಈ ಖದೀಮರು ಒಂದು ವಾರದೊಳಗೆ ಎಲ್ಲಾ ದಾಖಲೆ ನೀಡುವುದಾಗಿ ಗ್ರಾಹಕರಿಂದ ಹಣ ಪಡೆದು ಜೂಟ್ ಆಗುತ್ತಿದ್ದಲ್ಲದೇ ವಾರದ ನಂತರ ಇವರು ಇತ್ತ ಕಡೆ ವಾಪಸ್ ಬರುತ್ತಲೇ ಇರಲಿಲ್ಲ.
ಈ ಖದೀಮರು ಸಿಕ್ಕಿಬಿದ್ದಿದ್ದೇ ರೋಚಕ..!
ಕದ್ದ ಕಾರುಗಳನ್ನು ನಾಜುಕಾಗಿಯೇ ಮಾರಾಟ ಮಾಡಿ ಹಣ ಮಾಡುತ್ತಿದ್ದ ಈ ಖರೀದಿಮರ ತಂಡ ಕಳೆದ ವಾರದ ಹಿಂದಷ್ಟೇ ಕದ್ದ ಟೊಯೊಟಾ ಫಾರ್ಚೂನರ್ ಕಾರನ್ನು ಮಾರಾಟ ಮಾಡಲು ಆನ್ಲೈನ್ ಮೋರೆ ಹೋಗಿದ್ದರು. ಇದೇ ನೋಡಿ ಕಳ್ಳರು ತಮ್ಮ ಗುಂಡಿಯನ್ನು ತಾವೇ ತೊಡಿಕೊಂಡಿದ್ದು.
ಕದ್ದ ಕಾರನ್ನು ಮಾಡಿಫೈ ಮಾಡಿಸಿದ್ದ ಈ ಖರೀದಿಮರು ಸೇಕೆಂಡ್ ಹ್ಯಾಂಡ್ ಕಾರು ಮಾರಾಟದ ಏಜೆನ್ಸಿವೊಂದರ ಮೂಲಕ ಮಾರಾಟಕ್ಕೆ ಡೀಲ್ ಮಾಡಿಕೊಂಡಿದ್ದರು. ಇದೇ ವೇಳೆ ಈ ಖದೀಮರಿಗೆ ಹುಡುಕಾಟ ನಡೆಸುತ್ತಿದ್ದ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಆ್ಯಂಡ್ ಸಿಸ್ಟಮ್ಸ್ ವಿಭಾಗದ ಅಧಿಕಾರಿಗಳು ಏಜೆಂಟ್ ನೀಡಿದ ಮಾಹಿತಿ ಮೇರೆಗೆ ಖದೀಮರನ್ನು ರೆಡ್ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ.
ಸದ್ಯ ಖದೀಮರಿಂದ 8 ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟೊಯೊಟಾ ಫಾರ್ಚೂನರ್, ಹ್ಯುಂಡೈ ಕ್ರೇಟಾ, ಹ್ಯುಂಡೈ ಆಕ್ಸೆಂಟ್, ಫೋರ್ಡ್ ಆಸ್ಪೈರ್ ಮತ್ತು ಮಹೀಂದ್ರಾ ಸ್ಕಾರ್ಪಿಯೋ ಕಾರುಗಳನ್ನೇ ಕದ್ದಿರುವುದು ಸಾಬೀತಾಗಿದೆ.
ಇದರಿಂದ ಕಾರು ಖರೀದಿಮರಿಗೆ ಕಾರು ಮಾಲೀಕರೇ ಅನುಕೂಲ ಮಾಡಿಕೊಟ್ಟಂತಾಗಿದ್ದು, ಸುರಕ್ಷಾ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡದೆ ಇಲ್ಲದಿರುವ ಇಂತಹ ಕಾರುಗಳನ್ನು ಟಾರ್ಗೆಟ್ ಮಾಡುತ್ತಿದ್ದ ಈ ಖದೀಮರು ಕೆಲವೇ ಸೇಕೆಂಡುಗಳಲ್ಲಿ ಡೋರ್ ಲಾಕ್ ಓಪನ್ ಮಾಡಿ ಕಾರು ಕದಿಯುತ್ತಿದ್ದರು.
ಹೀಗಾಗಿ ಅಗ್ಗದ ಬೆಲೆಯಲ್ಲಿ ಸಿಗುವ ಸೇಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವುದಕ್ಕೂ ಮುನ್ನ ಇಂತಹ ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸುವ ಅವಶ್ಯಕತೆಯಿದ್ದು, ನೀವು ಖರೀದಿ ಮಾಡುತ್ತಿರುವ ವಾಹನವು ಕಳ್ಳತನ ಮಾಡಿದ್ದೋ ಅಥವಾ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದೆಯೋ ಎನ್ನುವುದನ್ನು ತಿಳಿದುಕೊಂಡು ಮುಂದಿನ ವ್ಯವಹಾರ ಕೈಗೊಳ್ಳುವುದು ಒಳಿತು.
Source: News18