Just In
- 9 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 10 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 11 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 11 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...
ಒಂದು ವೇಳೆ ನಿಮ್ಮಲ್ಲು ನೈಟ್ ರೈಡಿಂಗ್ ಹವ್ಯಾಸವಿದ್ದಲ್ಲಿ ಈ ಸ್ಟೋರಿಯನ್ನು ಒಮ್ಮೆ ಓದಲೇಬೇಕು. ಜೊತೆಗೆ ಸುರಕ್ಷಾ ದೃಷ್ಟಿಕೋನದಲ್ಲೂ ರಾತ್ರಿ ಸಮಯದಲ್ಲಿನ ಡ್ರೈವಿಂಗ್ ಉತ್ತಮವಲ್ಲ.
ಕೆಲವರಿಗೆ ರಾತ್ರಿ ವೇಳೆಯಲ್ಲಿ ವಾಹನ ಚಾಲನೆ ಮಾಡುವುದೆಂದರೆ ತುಂಬಾನೇ ಇಷ್ಟ. ಹಾಗೊಂದು ವೇಳೆ ನಿಮ್ಮಲ್ಲೂ ನೈಟ್ ರೈಡಿಂಗ್ ಹವ್ಯಾಸವಿದ್ದಲ್ಲಿ ಈ ಸ್ಟೋರಿಯನ್ನು ಒಮ್ಮೆ ಓದಲೇಬೇಕು. ಯಾಕೆಂದ್ರೆ ಸುರಕ್ಷಾ ದೃಷ್ಟಿಯಿಂದ ರಾತ್ರಿ ಸಮಯದಲ್ಲಿನ ಡ್ರೈವಿಂಗ್ ಉತ್ತಮವಲ್ಲ ಎನ್ನುವುದಕ್ಕೆ ಇಂದಿನ ಈ ಲೇಖನದಲ್ಲಿ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹೇಳಲಿದ್ದೇವೆ.
ಹೈವೇನಲ್ಲಿ ಇತ್ತೀಚೆಗೆ ಸಾಕಷ್ಟು ಅಹಿತರ ಘಟನೆಗಳು ಸಂಭವಿಸುತ್ತಿರುವುದನ್ನು ನಾವೆಲ್ಲಾ ಕೇಳಿಯೇ ಇರುತ್ತವೆ. ಅದರಲ್ಲೂ ಡ್ರಾಪ್ ನೇಪದಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಇಂತದ್ದೇ ಒಂದು ಘಟನೆ ವಕೀಲರೊಬ್ಬರಿಗೆ ಅಘಾತ ಉಂಟುಮಾಡಿದೆ.
Recommended Video
ವೃತ್ತಿಯಲ್ಲಿ ವಕೀಲರಾಗಿರುವ ಚೆನ್ನೈ ಮೂಲದ ಶಿವಸುಬ್ರಮಣ್ಯನ್ ಎಂಬುವರು ತಮ್ಮ ಕಾರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ತಡರಾತ್ರಿ ತಂಬರಾಮ್ ಬಳಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಬಾಲಕನೊಬ್ಬ ಹೆದ್ದಾರಿ ಪಕ್ಕದಲ್ಲಿ ನಿಂತು ಡ್ರಾಪ್ ಕೇಳಿದ್ದಾನೆ.
ರಾತ್ರಿ ವೇಳೆ ಬಾಲಕ ಡ್ರಾಪ್ ಕೇಳುತ್ತಿದ್ದಾನೆ ಎಂದುಕೊಂಡು ಕಾರು ನಿಲ್ಲಿಸಿದ್ದಾರೆ. ಆದ್ರೆ ಶಿವಸುಬ್ರಮಣ್ಯನ್ ಕಾರು ನಿಲ್ಲಿಸಿದ್ದೇ ತಪ್ಪಾಗಿ ಹೋಗಿದೆ. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳು ಎಂದು ಹೇಳುವಷ್ಟರಲ್ಲೇ ವಕೀಲನ ಸುತ್ತ ಸುಮಾರು 10ಕ್ಕೂ ಹೆಚ್ಚು ದರೋಡೆಕೋರರು ಸುತ್ತುವರಿದಿದ್ದಾರೆ.
ಶಿವಸುಬ್ರಮಣ್ಯನ್ಗೆ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ ಕೈಯಲ್ಲಿ ಬಂಗಾರದ ಕಡಗ, ಒಂದು ಚೈನ್ ಮತ್ತು ಲ್ಯಾಪ್ಟಾಪ್ ಸೇರಿದಂತೆ ಕಾರಿನಲ್ಲಿದ್ದ ಬೆಲೆಬಾಳುವ ಕೆಲ ವಸ್ತುಗಳನ್ನು ದೋಚಿದ್ದಾರೆ.
ಪ್ರಾಣಭಯದಿಂದಲೇ ದರೋಡೆಕೋರರು ಕೇಳಿದ ಎಲ್ಲಾ ವಸ್ತುಗಳನ್ನು ಕೊಟ್ಟು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಹೀಗಾಗಿ ಹೆದ್ದಾರಿ ಬಳಿ ನಿಂತು ಡ್ರಾಪ್ ಕೇಳುವವರ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಲ್ಲದೇ ಎಲ್ಲಂದಲ್ಲೇ ಕಾರುಗಳನ್ನು ಪಾರ್ಕ್ ಮಾಡುವುದು ಕೂಡಾ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ.
ಕಾರಿಗೆ ರಾತ್ರಿ ಮೊಟ್ಟೆ ಬೀಳುತ್ತೆ..!!
ರಾತ್ರಿ ಸಮಯದಲ್ಲಿ ಕಾರನ್ನೊಡಿಸುತ್ತಿರುವಾಗ ಕಾರಿನ ಮುಂಭಾಗಕ್ಕೆ ಆಕಸ್ಮಾತ್ ಮೊಟ್ಟೆ ಅಭಿಷೇಕವಾದ್ದಲ್ಲಿ ಯಾವುದೇ ಕಾರಣಕ್ಕೂ ಗಾಡಿ ನಿಲ್ಲುಸುವ ಗೋಜಿಗೆ ಹೋಗದಿರಿ. ಅದಕ್ಕೂ ಮುಖ್ಯವಾಗಿ ಕಾರಿನ ವೈಪರ್ ಆನ್ ಮಾಡುವ ಪ್ರಯತ್ನಕ್ಕೆ ಮುಂದಾಗದಿರಿ.
ಮೇಲೆ ತಿಳಿಸಿದಂತೆ ರಾತ್ರಿ ಪ್ರಯಾಣ ಮಾಡುತ್ತಿರುವಾಗ ಆಕಾಸ್ಮತ್ ಮೊಟ್ಟೆಗಳ ದಾಳಿ ನಡೆದರೆ ವೈಪರ್ ಆನ್ ಮಾಡದಿರಿ. ನೀರು ಚಿಮುಕಿಸಿ ಅದನ್ನು ತೊಳೆಯುವ ಪ್ರಯತ್ನಕ್ಕೆ ಮುಂದಾಗದಿರಿ. ಈ ರೀತಿ ಮಾಡುವುದರಿಂದ ದರೋಡೆಕೋರರ ಉದ್ದೇಶ ಸುಲಭವಾಗಿ ಈಡೇರಲಿದೆ.
ಮೊಟ್ಟೆಯ ಲೋಳೆ, ಹಳದಿ ಹಾಗೂ ನೀರು ಮಿಶ್ರಣವಾಗಿ ಕಾರಿನ ವಿಂಡ್ ಸ್ಕ್ರೀನ್ ಶೇಕಡಾ 90ರಷ್ಟು ಮುಸುಕಿದಂತಾಗುತ್ತದೆ. ಶುಭ್ರವಾಗಿದ್ದ ಕನ್ನಡಿ ಮೇಲೆ ಕೆಲವೇ ಕ್ಷಣಗಳಲ್ಲಿ ಬಿಳಿ ಪೇಂಟ್ ಬಳಿದಂತಾಗುತ್ತದೆ. ಮೊಟ್ಟೆ ನೀರಿನೊಂದಿಗೆ ಮಿಶ್ರಣವಾದರೆ ಶೇಕಡಾ 9ದರಷ್ಟು ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಸಹ ಕಡಿಮೆ ಮಾಡಲಿದೆ.
ದರೋಡೆಕೋರರ ಉದ್ದೇಶ ಈಡೇರುವುದು
ಈ ಸಂದರ್ಭದಲ್ಲಿ ಕಾರು ನಿಲ್ಲಿಸಬೇಕಾಗಿರುವುದು ಅನಿವಾರ್ಯವಾಗುತ್ತದೆ. ತಕ್ಷಣ ಕಾರ್ಯಪ್ರವೃತರಾಗುವ ಕಳ್ಳರು ನಿಮ್ಮನ್ನು ಸುತ್ತುವರಿದು ನಿಮ್ಮಲ್ಲಿರುವ ಅಮೂಲ್ಯ ವಸ್ತುಗಳನ್ನ ದೋಚುವ ಸಾಧ್ಯತೆಯಿದೆ.
ಗ್ಯಾಂಗ್ ದರೋಡೆ
ಪ್ರಸ್ತುತ ಮೊಟ್ಟೆಯೆಸೆದು ದರೋಡೆ ಮಾಡುವ ಪ್ರಕ್ರಿಯೆ ಬಲು ಜೋರಾಗಿ ನಡೆಯುತ್ತಿದೆ. ಗುಂಪು ಗುಂಪಾಗಿ ಆಗಮಿಸುವ ಕಳ್ಳರ ತಂಡ ಸುಲಭದಲ್ಲಿ ನಿಮ್ಮನ್ನು ಮೋಸ ಮಾಡಬಲ್ಲರು.
ಹೀಗಾಗಿ ಎಚ್ಚರ ವಹಿಸಿರಿ. ರಾತ್ರಿ ಪಯಣದ ವೇಳೆ ಆಕಸ್ಮಾತ್ ಮೊಟ್ಟೆ ಎಸೆತ ಉಂಟಾದಲ್ಲಿ ತಕ್ಷಣ ಕಾರು ನಿಲ್ಲಿಸದಿರಿ. ಹಾಗೆಯೇ ವೈಪರ್ ಆನ್ ಮಾಡುವ ಸಾಹಸಕ್ಕೆ ಮುಂದಾಗದಿರಿ. ಇಲ್ಲದಿದ್ದರೆ ಯೋಗರಾಜ್ ಭಟ್ಟರ ಹಾಡಿನಂತೆ "ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಬೇಡಿ" ಎನ್ನುವ ಹಾಡು ನಮಗೆ ಅನ್ವಯಿಸುವುದರಲ್ಲಿ ಎರಡು ಮಾತಿಲ್ಲ.
ಹ್ಯಾಪಿ ಡ್ರೈವಿಂಗ್!