ಅಬ್ದುಲ್ ಕಲಾಂರ ಪ್ರಭಾವಕ್ಕೆ ಒಳಗಾದ ಆಟೋ ಚಾಲಕನಿಂದ ಸಮಾಜಸೇವೆ..!!
ಕಲಾಂರ ಆದರ್ಶಗಳಿಂದ ಪ್ರೇರೆಪಣೆ ಪಡೆದ ಆಟೋ ಚಾಲಕನೋರ್ವ ತಮಿಳುನಾಡಿನ ಚೈನ್ನೈನಲ್ಲಿ ಉಚಿತ ಆಟೋ ಸೇವೆಗಳನ್ನು ನೀಡುತ್ತಿದ್ದು, ಮಿಸೈಲ್ ಮ್ಯಾನ್ ಆದರ್ಶಗಳಿಗೆ ಮಾರುಹೋಗಿದ್ದಾರೆ.
ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿ ಕ್ಷಿಪ್ಪಣಿ ಮನುಷ್ಯ ಎಂದೇ ಖ್ಯಾತರಾಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಅವರು ನಮ್ಮನ್ನ ಅಗಲಿ ಎರಡು ವರ್ಷಗಳೇ ಕಳೆದಿವೆ. ಆದ್ರೆ ಅವರ ಆದರ್ಶಗಳು, ನೆನಪುಗಳು ಮಾತ್ರ ಅಜರಾಮರ.

ಇದೇ ಕಾರಣದಿಂದಲೇ ಕಲಾಂರ ಆದರ್ಶಗಳಿಂದ ಪ್ರೇರೆಪಣೆ ಪಡೆದ ಆಟೋ ಚಾಲಕನೋರ್ವ ತಮಿಳುನಾಡಿನ ಚೈನ್ನೈನಲ್ಲಿ ಉಚಿತ ಆಟೋ ಸೇವೆಗಳನ್ನು ನೀಡುತ್ತಿದ್ದು, ಮಿಸೈಲ್ ಮ್ಯಾನ್ ಆದರ್ಶಗಳಿಗೆ ಮಾರುಹೋಗಿದ್ದಾರೆ.

2ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಸಾರ್ವಜನಿಕರಿಗೆ ಉಚಿತ ಸೇವೆ ನೀಡುತ್ತಿರುವ 32 ವರ್ಷದ ಕಲೈಯಾರಸನ್, ವೃದ್ಧರು ಮತ್ತು ಮಹಿಳೆಯರು ಸೇರಿದಂತೆ ಯಾರೇ ಬಂದರೂ ಉಚಿತವಾಗಿ ಆಟೋ ಸೇವೆಗಳನ್ನು ಒದಗಿಸುತ್ತಿದ್ದಾರೆ.
Recommended Video


ಬೆಳಗ್ಗೆ 7 ಗಂಟೆಯಿಂದಲೇ ಉಚಿತ ಆಟೋ ಸೇವೆಯನ್ನು ಆರಂಭಿಸುವ ಕಲೈಯಾರಸನ್, ರಾತ್ರಿ 10 ಗಂಟೆಯ ತನಕ ಚೈನ್ನೈನ ಟಿ.ನಗರ, ಪಂಡಿ ಬಜಾರ್, ನಂದನಾಮ್ ಸೇರಿದಂತೆ ಹಲವೆಡೆ ಉಚಿತವಾಗಿ ಆಟೋ ಸೇವೆಗಳನ್ನು ನೀಡುತ್ತಿದ್ದಾರೆ.

ಅಬ್ದುಲ್ ಕಲಾಂರ ಪುಣ್ಯ ಸ್ಮರಣೆ ಹಿನ್ನೆಲೆ 1 ವಾರಗಳ ಕಾಲ ಈ ಸೇವೆ ಲಭ್ಯವಿರಲಿದ್ದು, ಕಳೆದ ಬಾರಿಯೂ ಕಲೈಯಾರಸನ್ ನೀಡಿದ ಉಚಿತ ಆಟೋ ಸೇವೆಗಳನ್ನು ಜನಮೆಚ್ಚುಗೆಗೆ ಕಾರಣವಾಗಿತ್ತು.

ಹೀಗಾಗಿಯೇ ಸರಳ ಸಜ್ಜನಿಕೆಯ ಕಲಾಂರ ಆದರ್ಶಗಳನ್ನು ಇಂದಿಗೂ ಅದೆಷ್ಟೋ ಜನ ಪಾಲನೆ ಮಾಡುತ್ತಿದ್ದು, ಕಡುಬಡತನದಲ್ಲೂ ತನ್ನ ಕಡೆಯಿಂದ ಆಗುಬುಹುದಾದ ಸಾಮಾಜಿಕ ಸೇವೆಯನ್ನು ಕಲೈಯಾರಸನ್ ಮಾಡಿದ್ದು ನಿಜಕ್ಕೂ ದೊಡ್ಡ ಸೇವೆಯೇ ಆಗಿದೆ.


Click it and Unblock the Notifications








