ಉತ್ತರ ಭಾರತ ಪ್ರವಾಹ; ಕೊಚ್ಚಿ ಹೋದ ವಾಹನಗಳು
ಉತ್ತರ ಭಾರತದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಭೀತಿ ಪರಿಸ್ಥಿತಿಗೆ ಕೋಟಿಗಟ್ಟಲೆ ರುಪಾಯಿಗಳ ನಾಶನಷ್ಟ ಸಂಭವಿಸಿದೆ. ಪ್ರವಾಹದ ಪ್ರಭಾವಕ್ಕೆ ಸಿಲುಕಿರುವ ವಾಹನಗಳು ಕೊಚ್ಚಿ ಹೋದ ಚಿತ್ರಗಳನ್ನು ಭಾರತೀಯ ಪತ್ರಿಕಾ ಮಂಡಳಿ (ಪಿಟಿಐ) ಬಿತ್ತರಿಸಿದೆ.
ಕಳೆದೊಂದು ವಾರದಿಂದ ಉತ್ತರ ಪ್ರದೇಶ, ಗುಜರಾತ್, ಜಾರ್ಖಂಡ್, ಛತ್ತೀಸ್ ಗಡ, ಪಶ್ಚಿಮ ಬಂಗಾಳ, ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಒಡಿಸ್ಸಾ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದ್ದು, ಪ್ರಕೃತಿ ವಿಕೋಪಕ್ಕೆ ಹಲವಾರು ಮಂದಿ ಬಲಿಯಾಗಿಯಾಗಿದ್ದಾರೆ.

ಮಣಿಪುರ: ಮಣಿಪುರದ ತೌಬಾಲ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ವಾಹನವನ್ನು ಹೊರ ತೆಗೆಯಲು ಪ್ರಯತ್ನಿಸುತ್ತಿರುವ ಸಾರ್ವಜನಿಕರು.

ಕೋಲ್ಕತ್ತಾ: ಉಕ್ಕಿ ಹರಿದ ಗಂಗಾ ನದಿಯ ಪ್ರಭಾವದಿಂದಾಗಿ ಖಾಲಿಘಾಟ್ ಪ್ರದೇಶ ಸಂಪೂರ್ಣ ಜಲಾವೃತ.

ಇಂಪಾಲ: ಇಲ್ಲಿ ಸುರಿದ ಧಾರಾಕಾರ ಮಳೆಗೆ ಕೊಚ್ಚಿ ಹೋದ ರೈಲ್ವೆ ಹಳಿ.

ಇಂಪಾಲ: ಕೊಚ್ಚಿ ಹೋದ ರೈಲ್ವೆ ಹಳಿಯನ್ನು ಪರೀಶೀಲಿಸುತ್ತಿರುವ ಭಾರತೀಯ ಸೇನೆಯ ಸೈನಿಕ.

ಮಣಿಪುರ: ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಸ್ಥಿತಿಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥ.

ಅಹಮದಾಬಾದ್: ಗುಜರಾತ್ನ ಸಬರ್ಮತಿ ನದಿ ಪ್ರವಾಹಕ್ಕೆ ಸಿಲುಕಿದ ವಾಹನಗಳ ವೈಮಾನಿಕ ನೋಟ-ಜನರ ಪರದಾಟ.

ಪಶ್ಚಿಮ ಬಂಗಾಳ: ಪ್ರವಾಹವಾದರೂ ಪ್ರಳಯವಾದರೂ ನಮಗೇನು? ಬುರ್ದ್ವಾನ್ ಜಿಲ್ಲೆಯ ಕರಾಳಘಾಟ್ ರಸ್ತೆಯಲ್ಲಿ ಮಕ್ಕಳ ಚಕ್ಕಂದವಾಟ.

ಅಹಮದಾಬಾದ್: ಗುಜರಾತ್ ಪ್ರವಾಹದ ಮಗದೊಂದು ದೃಶ್ಯ

ಅಹಮದಾಬಾದ್: ಗಜುರಾತ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ದಿಕ್ಕು ಪಾಲಾದ ಜನರು.

ಮಣಿಪುರ: ತೌಬಾಲ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ವಾಹನವನ್ನು ರಕ್ಷಿಸುವ ಪ್ರಯತ್ನದಲ್ಲಿ ಸಾರ್ವಜನಿಕರು.


Click it and Unblock the Notifications








