Just In
- 51 min ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 1 hr ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 2 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- 3 hrs ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
Don't Miss!
- News ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಉಳುವಿಗಾಗಿ ಸೆಣಸಾಟ: ಕಾಂಗ್ರೆಸ್ ಅವಕಾಶಕ್ಕಾಗಿ ಹೋರಾಟ
- Movies ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರ್ ಸ್ಟಂಟ್ ಮಾಡುವಾಗ ಆಯತಪ್ಪಿ ಓರ್ವ ಸವಾರ ಸಾವು- ವಿಡಿಯೋ ವೈರಲ್
ಇತ್ತೀಚಿನ ದಿನಗಳಲ್ಲಿ ಯುವಸಮುದಾಯಕ್ಕೆ ಮೋಟಾರ್ ಸ್ಟಂಟ್ ಬಗ್ಗೆ ಎಲ್ಲಿಲ್ಲದ ಕ್ರೇಜ್ ಬೆಳೆಯುತ್ತಿದ್ದು, ಮುಂಜಾಗ್ರತವಿಲ್ಲದ ಸ್ಟಂಟ್ಗಳು ಪ್ರಾಣಕ್ಕೆ ಕುತ್ತು ಎಂಬುವುದನ್ನು ಅರಿಯಬೇಕಿದೆ.
ವೃತ್ತಾಕಾರದ ಗೋಡೆ ಮೇಲೆ ಕಾರುಗಳ ಸಾಹನ ಪ್ರದರ್ಶನ ಮಾಡುತ್ತಿರುವ ಸಂದರ್ಭದಲ್ಲಿ ಆಯತಪ್ಪಿದ ಪರಿಣಾಮ ಕಾರು ನೆಲಕ್ಕೆ ಉರಳಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.
ಅಂದಹಾಗೆ ಇದೆಲ್ಲಾ ನಡೆದಿದ್ದು, ಓಡಿಶಾ ರಾಜಧಾನಿ ಭುವನೇಶ್ವರ ಬಳಿ. ಮೋಟಾರ್ ಶೋ ಕಾರ್ನಿವಾಲ್ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಕಾರು ಸ್ಟಂಟ್ ಪ್ರದರ್ಶನ ನೋಡಲು ಸಾವಿರಾರು ಜನ ಕೂಡಾ ಆಗಮಿಸಿದ್ದರು, ಆದ್ರೆ ಕಾರು ಪ್ರದರ್ಶನ ಆರಂಭವಾದ ಎರಡೇ ನಿಮಿಷದಲ್ಲಿ ಈ ದುರಂತ ನಡೆದಿದೆ.
ಮೊದಲು ಸರಳವಾಗಿಯೇ ಪ್ರದರ್ಶನ ತೊರಿದ ಚಾಲಕ, ನಂತರ ಆಯತಪ್ಪಿ ಚಾಲನೆ ಮೇಲಿನ ಹಿಡಿತ ಕಳೆದುಕೊಂಡಿದ್ದಾನೆ.
ನಿಯಂತ್ರಣ ತಪ್ಪಿದ ಹಿನ್ನೆಲೆ ಕಾರಿನ ಹಿಂದಿಯೇ ಇದ್ದ ಬೈಕ್ವೊಂದು ನೆಲಕ್ಕೆ ಬಿದ್ದಿದ್ದು, ಈ ಎಲ್ಲಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಾರು ನೆಲಕ್ಕೆ ಬಿದ್ದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರಿಗೆ ಗಂಭೀರ ಗಾಯಗಳಾಗಿವೆ.
ಕಾರ್ ಸ್ಟಂಟ್ನಲ್ಲಿ ಸ್ಥಳೀಯವಾಗಿ ಭಾರೀ ಪ್ರಸಿದ್ಧಿಯಾಗಿದ್ದ ಜೀತು ಬಣ್ಕಾರ್ (26) ಮೃತ ಪಟ್ಟಿದ್ದಾನೆ.
ಇತ್ತೀಚೆಗೆ ಭುವನೇಶ್ವರ ಸುತ್ತಮುತ್ತ ಪ್ರದೇಶಗಳಲ್ಲಿ ವೃತ್ತಾಕಾರದ ಕಟ್ಟಿಗೆ ಗೋಡೆಗಳ ಮೇಲಿನ ಕಾರ್ ಸ್ಟಂಟ್ಗಳು ಪ್ರಸಿದ್ಧಿ ಪಡೆಯುತ್ತಿದ್ದು, ಹತ್ತಾರು ಅನಾಹುತ ದಾರಿಮಾಡಿಕೊಡುತ್ತಿವೆ.
ಇನ್ನು ಮುಂಜಾಗ್ರತ ಕ್ರಮಗಳಲ್ಲಿದ ಹಿನ್ನೆಲೆಯೇ ಕಾರು ಚಾಲಕನ ಸಾವನ್ನಪ್ಪಿದ್ದು, ಆಯೋಜಕರ ಮೇಲೆ ದೂರು ಕೂಡಾ ದಾಖಲಾಗಿದೆ.
ಆದ್ರೆ ಅದೇನೇ ಇರಲಿ ಮುಂಜಾಗ್ರತ ಕ್ರಮಕೈಗೊಂಡಿದ್ದರೆ ಒಂದು ಜೀವ ಉಳಿತಿತ್ತು. ಜೊತೆಗೆ ಮೋಟಾರ್ ಸ್ಟಂಟ್ ಶೋಗಳಿಗೆ ಮುನ್ನ ಮುಂಜಾಗ್ರತ ಕ್ರಮಗನ್ನು ಕೈಗೊಳ್ಳುವುದು ಒಳಿತು.
ಗೋಡೆ ಮೇಲೆ ನಡೆಸಲಾಗುತ್ತಿದ್ದ ಕಾರಿನ ಸ್ಟಂಟ್ ವಿಡಿಯೋ ಇಲ್ಲಿದೆ ನೋಡಿ.