ಅಬ್ಬಾ!! ಈ ರೀತಿ ಭಾರತದಲ್ಲಿ ಮಾಡಿದ್ದರೆ, ದೊಡ್ಡ ಜಗಳವೇ ನೆಡೆಯುತ್ತಿತ್ತು ಬಿಡಿ....
ಸಿಗಾಪುರ್ನ ವ್ಯಕ್ತಿಯೊಬ್ಬರು ರಾಂಗ್ ಪ್ಲೇಸ್ನಲ್ಲಿ ಕಾರು ಪಾರ್ಕ್ ಮಾಡಿದ ಕಾರಣಕ್ಕೆ ಸಾರ್ವಜನಿಕರು ಕಾರಿನ ಮೇಲ್ಭಾಗದಲ್ಲಿ ಬ್ಲೂ ಸ್ಟಿಕ್ಕರ್ ಅಂಟಿಸಿವ ಮೂಲಕ ನಿಯಮ ಉಲ್ಲಂಘಿಸಿದ ಕಾರು ಮಾಲಿಕನಿಗೆ ಪಾಠ ಕಲಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ.
ಸಿಗಾಪುರ್ನ ವ್ಯಕ್ತಿಯೊಬ್ಬರು ರಾಂಗ್ ಪ್ಲೇಸ್ನಲ್ಲಿ ಕಾರು ಪಾರ್ಕ್ ಮಾಡಿದ ಕಾರಣಕ್ಕೆ ಸಾರ್ವಜನಿಕರು ಕಾರಿನ ಮೇಲ್ಭಾಗದಲ್ಲಿ ಬ್ಲೂ ಸ್ಟಿಕ್ಕರ್ ಅಂಟಿಸಿವ ಮೂಲಕ ನಿಯಮ ಉಲ್ಲಂಘಿಸಿದ ಕಾರು ಮಾಲಿಕನಿಗೆ ಪಾಠ ಕಲಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ.

ಹೌದು, ಭಾರತದಲ್ಲಿ ನೀವೇನಾದರೂ ರೂಲ್ಸ್ ಫಾಲೋ ಮಾಡ್ಲಿಲ್ಲ ಅಂದ್ರೆ ನಿಮ್ಗೆ ಹೆಚ್ಚು ಅಂದ್ರೆ ದಂಡ ಹಾಕ್ತಾರೆ... ಇಲ್ಲ ಅಂದ್ರೆ ವಾಹನವನ್ನು ಜಪ್ತಿ ಮಾಡ್ತಾರೆ. ಸಾರ್ವಜನಿಕರು ಪ್ರೆಶ್ನಿಸಿದರೆ, ಕೆಲವರು ಹುಚ್ಚರಂತ ವರ್ತಿಸುವುದನ್ನು ನಾವು ಕಾಣುತ್ತೇವೆ. ಯಾವುದೇ ರೀತಿಯ ರೂಲ್ಸ್ ಫಾಲೋ ಮಾಡುವುದಿಲ್ಲ.
Recommended Video


ಅಡ್ಡದಿಡ್ಡಿಯಾಗಿ ವಾಹನ ಓಡಿಸುವುದು, ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವುದು, ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವುದು... ಹೇಗೆ ಸಾಕಷ್ಟು ರೂಲ್ಸ್ ಬ್ರೇಕ್ ಮಾಡುವುದು ಕೆಲವರ ನಿತ್ಯ ಕಾಯಕವಾಗಿರುತ್ತದೆ. ಬೇರೆಯವರಿಗೆ ತೊಂದರೆ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ, ತಮ್ಮ ನಿತ್ಯ ಕಾಯಕವನ್ನು ಮುಂದುವರೆಸುತ್ತಾರೆ.

ಆಕ್ಷನ್ ತೆಗೆದುಕೊಳ್ಳಬೇಕಾದ ಪೊಲೀಸರು ಎಲ್ಲಾ ಸಮಯದಲ್ಲಿ ಇರುವುದಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಂತಹ ಸಮಯದಲ್ಲಿ ರೂಲ್ಸ್ ಫಾಲೋ ಮಾಡದ ವ್ಯಕ್ತಿಗೆ ಜನರು ಹೇಗೆ ಬುದ್ದಿ ಕಲಿಸಿದರು ? ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ವ್ಯಕ್ತಿಯೊಬ್ಬ ರಾಂಗ್ ಪ್ಲೇಸ್ನಲ್ಲಿ ಕಾರು ಪಾರ್ಕ್ ಮಾಡಿದ ಕಾರಣಕ್ಕೆ, ಅಲ್ಲಿದ್ದ ಸಾರ್ವಜನಿಕರು ಕಾರಿನ ಮೇಲೆ ಬ್ಲೂ ಸ್ಟಿಕ್ಕರ್ ಅಂಟಿಸಿ, 'ನೀನು ಮಾಡಿರುವುದು ತಪ್ಪು' ಎಂಬ ಸಂದೇಶ ನೀಡುವ ಕೆಲಸ ಮಾಡಿದ್ದಾರೆ.

ಕಾರನ್ನು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಸ್ವಲ್ಪ ಸಮಯದ ಬಳಿಕ ಬಂದು ನೋಡಿದಾಗ ಆತನಿಗೆ ಶಾಕ್ ಕಾದಿತ್ತು. ಕಾರಿನ ಮೈಮೇಲೆ ಸಂಪೂರ್ಣವಾಗಿ ಸ್ಟಿಕರ್ ಅಂಟಿಸಲಾಗಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ, ಕಾರಿನ ಚಕ್ರವೂ ಕೂಡ ಕಾಣಿಸದ ಹಾಗೆ !!
ತನ್ನ ಕೆಲಸ ಮುಗಿಸಿಕೊಂಡು ಬಂದ ನಂತರ ಕಾರು ಕಾಣದೆ ಇರುವುದಕ್ಕೆ ಕಕ್ಕಾ ಬಿಕ್ಕಿಯಾದ ಮಾಲೀಕ, ಏನು ನೆಡೆಯುತ್ತಿದೆ, ಎಂಬುದನ್ನು ತಿಳಿದುಕೊಳ್ಳುವಷ್ಟರಲ್ಲಿ ಕಾಲ ಮೀರಿ ಹೋಗಿತ್ತು. ವಿಷಯ ಗೊತ್ತಾಗಿ, ಜನರ ಮೇಲೆ ಇದ್ದ ಸಿಟ್ಟನ್ನು ಕಾರುಗಳ ಮೇಲೆ ಅಂಟಿಸಿದ್ದ ಪೇಪರ್ಗಳನ್ನು ಕೀಳುವ ಮೂಲಕ ತೀರಿಸಿಕೊಂಡ.

ನಂತರ, ಕಾರನ್ನು ಸ್ಥಳದಿಂದ ತೆಗೆಯುವ ಮುನ್ನವೂ ಕೂಡ ಅಲ್ಲೇ ಇದ್ದ ಪೊಲೀಸರೊಂದಿಗೆ ವಾದಕ್ಕೆ ಇಳಿದ. ಆದರೂ ಏನು ಮಾಡುತ್ತಾನೆ, ಆತ ಮಾಡಿದ್ದು ತಪ್ಪಲ್ಲವೇ. ರಾಂಗ್ ಪ್ಲೇಸಲ್ಲಿ ಪಾರ್ಕಿಂಗ್ ಮಾಡಿದ್ದು ಅಲ್ಲದೆ, ಪೋಲೀಸರ ಮೇಲೆ ದಬಾಯಿಸಿದರೆ ಏನು ಬಂತು ಪ್ರಯೋಜನ ?

ಇಂದು ಬಹಳಷ್ಟು ಮಂದಿ ಇದನ್ನೇ ಮಾಡುತ್ತಿದ್ದಾರೆ. ಗಾಡಿ ಸರಿಯಾಗಿ ಓಡಿಸಿರಿ ಎಂದರೂ ಯಾರೂ ತಲೆಕೆಡಿಸಿಕೊಳ್ಳಲ್ಲ. ಅವರ ಮೇಲೆ ತಿರುಗಿ ಬೀಳುತ್ತಾರೆ. ತಾವು ಮಾಡುತ್ತಿರುವ ತಪ್ಪನ್ನು ತಿಳಿದುಕೊಳ್ಳುತ್ತಿಲ್ಲ. ಅದ್ಯಾವಾಗ ಬುದ್ದಿಬರುತ್ತದೋ. ಅವರಿಂದ ಬದಲಾವಣೆ ಬಯಸುವುದು ಸಹ ವೇಸ್ಟ್, ಶುದ್ಧ ದಂಡ ಅಲ್ಲವೇ..!


Click it and Unblock the Notifications








