Just In
- 1 hr ago ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
- 1 hr ago ವಂದೇ ಭಾರತ್ ಸ್ಲೀಪರ್, ಸೂಪರ್ ಆಪ್.. ರೈಲ್ವೆಯಿಂದ ಬಿಗ್ ಪ್ಲ್ಯಾನ್: ನೀವು ತಿಳಿಯಬೇಕಾದ ವಿಚಾರಗಳಿವು!
- 2 hrs ago ಕೋಟಿ ಬೆಲೆಯ ಲ್ಯಾಂಡ್ರೋವರ್ ಖರೀದಿಸಿದ ಗಾಯಕಿ: ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದ ನೆಟ್ಟಿಗರು!
- 4 hrs ago Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
Don't Miss!
- Movies 5 ವರ್ಷದ ಹಿಂದೆ ಸುಮಲತಾ ಬೆಂಬಲಿಸಿದ್ದ ದರ್ಶನ್; ಈಗ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರವೇಕೆ?
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- News ‘ಸೋಲಿನ ಭೀತಿಯಿಂದ ಕಮಲ-ದಳ ಮೈತ್ರಿ; ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
- Finance BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಲ್ಡ್ ಕ್ರಾಸ್ Rally: ಕನ್ನಡಿಗ ಸಂತೋಷ್ ಸ್ಪರ್ಧೆ
ಬಹು ರಾಷ್ಟ್ರೀಯ ಸೂಪರ್ ಕ್ರಾಸ್ ಹಾಗೂ ಡರ್ಟ್ ಟ್ರಾಕ್ ಚಾಂಪಿಯನ್ ಆಗಿರುವ ಬೆಂಗಳೂರಿನ ಸಿಎಸ್ ಸಂತೋಷ್ ಇದೀಗ ವರ್ಲ್ಡ್ ಕ್ರಾಸ್ ಕಂಟ್ರಿ Rally ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ.
ಮೊದಲ ಹಂತದ ಚಾಂಪಿಯನ್ಶಿಪ್ ಅಬುದಾಬಿಯಲ್ಲಿ ಎಪ್ರಿಲ್ 4ರಿಂದ ಹಾಗೂ ಎರಡನೇ ಸುತ್ತಿನ Rally ಎಪ್ರಿಲ್ 21ರಿಂದ ಖತಾರ್ನಲ್ಲಿ ಜರಗಲಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯನೊಬ್ಬನಿಗೆ ಅಬುದಾಬಿ ಡೆಸಾರ್ಟ್ ಚಾಲೆಂಜ್ನಲ್ಲಿ ಭಾಗವಹಿಸುವ ಸುವರ್ಣಾವಕಾಶ ದೊರೆತಿದೆ.
14ನೇ 'ರೇಡ್ ಡಿ ಹಿಮಾಲಯ' ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಆಲಂಕರಿಸಿರುವುದೇ ಸಂತೋಷ್ಗೆ ಇಂತಹದೊಂದು ಬಹುದೊಡ್ಡ ಅವಕಾಶ ಹರಸಿಕೊಂಡು ಬಂದಿದೆ. ಇದೀಗ ಅಗ್ರ 20ರ ಪಟ್ಟಿಯೊಳಗೆ ಪ್ರವೇಶ ಪಡೆಯುವ ಗುರಿಯಿರಿಸಿಕೊಂಡಿದ್ದಾರೆ.
ಅಂದ
ಹಾಗೆ
ದಿನ
ಬೆಳಗಾಗುವುದರೊಳಗೆ
ಸಂತೋಷ್
ಮಹತ್ತರ
ಸ್ಥಾನ
ಗಿಟ್ಟಿಸಿಕೊಂಡಿಲ್ಲ.
ಕಳೆದ
ಹತ್ತು
ವರ್ಷಗಳಿಂದ
ರೇಸಿಂಗ್
ಜಗತ್ತಿನಲ್ಲಿ
ನಡೆಸಿರುವ
ಅವಿರತ
ಪ್ರಯತ್ನವೇ
29ರ
ಹರೆಯದ
ಸಂತೋಷ್
ಸಾಹಸಕ್ಕೆ
ಕೈಗನ್ನಡಿಯಾಗಿದೆ.
ಸೂಪರ್
ಕ್ರಾಸ್,
ಮೊಟೊ
ಕ್ರಾಸ್ನಿಂದ
ಹಿಡಿದು
ಡರ್ಟ್
ಟ್ರ್ಯಾಕ್
ವರೆಗೂ
ತಮ್ಮ
ಪ್ರಭಾವ
ಬೀರಿರುವ
ಸಂತೋಷ್
ಏಷಿಯನ್
ಮೊಟೊಕ್ರಾಸ್
ಚಾಂಪಿಯನ್ಶಿಪ್ನಲ್ಲಿ
ಗರಿಷ್ಠ
ಫಿನಿಷರ್
ಮಾಡಿದ
ಮೊದಲ
ಭಾರತೀಯ
(2008ರಲ್ಲಿ
4ನೇ
ಸ್ಥಾನ)
ಎನಿಸಿಕೊಂಡಿದ್ದರು.
ವರ್ಲ್ಡ್ ಕ್ರಾಸ್ ಕಂಟ್ರಿ Rally ಮುನ್ನಡಿಯಾಗಿ ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂತೋಷ್, ಉತ್ತಮ ನಿರ್ವಹಣೆ ನೀಡುವ ಭರವಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರೈಡ್ ಡಿ ಹಿಮಾಲಯ ವಿಜೇತ ಹೋಂಡಾ ಸಿಆರ್ಎಫ್ ಬೈಕ್ ಪ್ರದರ್ಶನಕ್ಕಿಟ್ಟಿದ್ದರು.
ಇನ್ನು ಅಬುದಾಬಿ ವರ್ಲ್ಡ್ ಕ್ರಾಸ್ ಕಂಟ್ರಿ Rally ಚಾಂಪಿಯನ್ಶಿಪ್ಗಾಗಿ ಸಂತೋಷ್ ಸುಜುಕಿಯ ಶಕ್ತಿಶಾಲಿ ಬೈಕ್ ಬಳಕೆ ಮಾಡಲಿದ್ದಾರೆ.
2015ನೇ ಇಸವಿಯ ಡಕಾರ್ Rally ಚಾಂಪಿಯನ್ಶಿಪ್ನಲ್ಲಿ ಸ್ಪರ್ದಿಸುವ ಸ್ಪಷ್ಟ ಗುರಿ ಹೊಂದಿರುವ ಸಂತೋಷ್ ಈಗಾಗಲೇ ಕಠಿಣ ಪ್ರಯತ್ನ ಆರಂಭಿಸಿದ್ದು, ಮುಂಬರುವ ವರ್ಲ್ಡ್ ಕ್ರಾಸ್ ಕಂಟ್ರಿ Rally ಭದ್ರ ಅಡಿಪಾಯ ಒದಗಿಸಿಕೊಡಲಿದೆ.
ಈಗಾಗಲೇ ಡಕಾರ್ Rally ವಿಜೇತ ಅಮೆರಿಕದ ಜಿಮ್ಮಿ ಲೆವಿಸ್ ಜತೆ ಒಂದು ವಾರ ವಿನಿಯೋಗಿಸಿರುವ ಸಂತೋಷ್, ನೆವಡಾದಲ್ಲಿ ನೇವಿಗೇಷನ್ ತರಬೇತಿ ಪಡೆದುಕೊಂಡಿದ್ದಾರೆ. ಇದು ಕೂಡಾ ಈ ಯುವ ಸಾಹಸಿಗನಿಗೆ ನೆರವಾಗಲಿದೆ.
ಭಾರತೀಯ ಮೊಟೊಕ್ರಾಸ್ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನಿಡುತ್ತಿರುವ ಸಂತೋಷ್, ಬೆಳೆದು ಬರುತ್ತಿರುವ ಯುವ ಪ್ರತಿಭಾವಂತ ರೈಡರ್ಗಳಿಗೆ ಸ್ಪೂರ್ತಿಯಾಗಿದ್ದಾರೆ. ಇನ್ನು ಸಂತೋಷ್ ಬೆಂಗ್ಳೂರಿಗ ಎಂಬುದು ಕನ್ನಡಿಗರ ಖುಷಿಗೆ ಪಾರವೇ ಇಲ್ಲದಂತಾಗಿದೆ.