Just In
- 9 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 9 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 10 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 10 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾರುತಿಗೆ ಬಿಸಿ ಮುಟ್ಟಿಸಲಿರುವ ನೌಕರರ ಮುಷ್ಕರ
ಮಾರುತಿ ಸುಜುಕಿ ಹಾಗೂ ನೌಕರರ ನಡುವಣ ಬಿಕ್ಕಟ್ಟು ಸದ್ಯಕ್ಕಂತೂ ಬಗೆಹರಿಯುವ ಲಕ್ಷ್ಮಣಗಳು ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯ ಸ್ಥಗತಿಗೊಂಡಿರುವ ಮಾನೇಸರ್ ಘಟಕವು ಕಾರ್ಯಾಚರಣೆ ಪುನರಾರಂಭಿಸಿತ್ತು. ಆದರೆ ಮಾನೇಸರ್ ಘಟಕ ಸಹಜ ಸ್ಥಿತಿಗೆ ಮರಳುತ್ತಿರುವಂತೆಯೇ ನೌಕರರು ಮತ್ತೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುತ್ತಿದ್ದಾರೆ.
ಪ್ರಸ್ತುತ ಜುಲೈ ತಿಂಗಳ ಹಿಂಸಾಚಾರದಿಂದಾಗಿ ತಮ್ಮ ಕೆಲಸವನ್ನೇ ಕಳೆದುಕೊಂಡಿರುವ ನೌಕರರು ಎರಡು ದಿನಗಳ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಹಿನ್ನಲೆ...
ಜುಲೈ
ತಿಂಗಳಲ್ಲಿ
ಮಾನೇಸರ್
ಘಟಕದಲ್ಲಿ
ನೌಕರರ
ಮುಷ್ಕರದ
ನಡುವೆ
ಮಾರುತಿ
ಹಿರಿಯ
ವ್ಯವಸ್ಥಾಪಕರೊಬ್ಬರು
ಕೊಲೆಗೀಡಾಗಿದ್ದರು.
ಈ
ಘಟನೆಯಿಂದ
ಬೆಸತ್ತಿದ್ದ
ಮಾರುತಿ
500ರಷ್ಟು
ನೌಕರರನ್ನು
ಯಾವುದೇ
ಕಾರಣ
ಕೇಳಲು
ನೋಟಿಸ್
ಜಾರಿಗೊಳಿಸಲಿದೆಯೇ
ಕೆಲಸದಿಂದ
ವಜಾಗೊಳಿಸಿತ್ತು.
ಅಲ್ಲದೆ
ಯಾವುದೇ
ಹಂತದಲ್ಲಿಯೂ
ಮರುನೇಮಕ
ಮಾಡುವ
ಪ್ರಶ್ನೆಯೇ
ಇಲ್ಲ
ಎಂಬುದನ್ನು
ಸ್ಪಷ್ಟಪಡಿಸಿತ್ತು.
ಪೊಲೀಸ್ ಎಫ್ಐಆರ್ನಲ್ಲಿ ಹಿಂಸಾಚಾರ ಪ್ರಕರಣದಲ್ಲಿ 200ರಷ್ಟು ನೌಕರರ ಮೇಲೆ ಮಾತ್ರ ಕೇಸು ದಾಖಲಾಗಿದೆ. ಇದನ್ನೇ ಪ್ರಮುಖವಾಗಿ ಉಲ್ಲೇಖಿಸಿರುವ ನೌಕರರು ಮಾರುತಿ ವಿರುದ್ಧ ಮುಷ್ಕರಕ್ಕೆ ಮುಂದಾಗಿದ್ದಾರೆ. ನೌಕರರ ಈ ಪ್ರಯತ್ನಕ್ಕೆ ಮಾರುತಿ ಉದ್ಯೋಗ್ ಕಾಮಗಾರಿ ಯೂನಿಯನ್ (ಮುಕು) ಕೂಡಾ ಬೆಂಬಲ ಸೂಚಿಸಿದೆ. ಮಾರುತಿ ಸುಜುಕಿಯ ಗುರ್ವಾಂವ್ ಘಟಕವನ್ನು ಮುಕು ಯೂನಿಯನ್ ಪ್ರತಿನಿಧಿಸುತ್ತಿದೆ.
ಹಾಗಿದ್ದರೂ ಮುಕು ನೌಕರರು ನೇರವಾಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗುತ್ತಿಲ್ಲ. ಆದರೆ ರಾಜ್ಯ ಸರಕಾರದ ಕಾರ್ಮಿಕ ಇಲಾಖೆ ಹಾಗೂ ಇತರ ವೇದಿಕೆಗಳಲ್ಲಿ ನೌಕರರನ್ನು ಬೆಂಬಲಿಸಲಿದೆ.
ಹಿಂಸಾಚಾರ ಪ್ರಕರಣ ದಾಖಲಾಗದ ಎಲ್ಲ ನೌಕರರನ್ನು ಕೆಲಸಕ್ಕೆ ಹಿಂಪಡೆಯಬೇಕೆಂಬುದು ಉಪವಾಸ ಸತ್ಯಾಗ್ರಹ ನಿರತರಾಗಿರುವ ನೌಕರರ ಪ್ರಮುಖ ಬೇಡಿಕೆಯಾಗಿದೆ. ಯಾವುದೇ ಅಧಿಕೃತ ತನಿಖೆ ಜಾರಿಗೊಳಿಸದೆಯೇ ತಮ್ಮನ್ನು ವಜಾಮಾಡಿರುವುದು ನ್ಯಾಯಸಮ್ಮತವಲ್ಲ ಎಂದು ನೌಕರರು ವಾದಿಸಿದ್ದಾರೆ.
ಮಾನೇಸರ್ ಘಟಕದಿಂದ ವಜಾಗೊಂಡಿರುವ ನೌಕರರು ಗುರುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದು, ಗುರ್ವಾಂಗ್ ನೌಕರರು ಸಹ ಇದಕ್ಕೆ ಬೆಂಬಲ ಸೂಚಿಸುವ ನಿರೀಕ್ಷೆಯಿದೆ. ಹಾಗಿದ್ದರೂ ವಜಾಗೊಂಡಿರುವ ನೌಕರರನ್ನು ಯಾವುದೇ ಹಂತದಲ್ಲಿಯೂ ವಾಪಾಸ್ ಪಡೆಯುವುದಿಲ್ಲ ಎಂಬುದನ್ನು ಮಾರುತಿ ಸ್ಪಷ್ಟಪಡಿಸಿದೆ.