Just In
- 1 hr ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 1 hr ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 1 hr ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 2 hrs ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ
ಯಾವುದಾದರು ರಸ್ತೆ ಅಪಘಾತವಾದರೆ ಗಾಯಗೊಂಡವರನ್ನು ಆಸ್ಪತ್ರೆಗೆ ಆಗಲಿ ಅಥವಾ ಸಮಯಕ್ಕೆ ಬೇಕಾದ ಸಹಾಯ ಮಾದುವುದನ್ನು ಬಿಟ್ಟು ಸೆಲ್ಫಿ ತೆಗೆದುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಲೈವ್ ಹೋಗುವ ಜನಗಳಿರುವ ಈ ಸಮಾಜದಲ್ಲಿ ಸಹಾಯ ಮಾಡುವವರೆ ಕಡಿಮೆ.
ವೃತ್ತಿಪರರಾಗಿ ಆಟೋ ಚಾಲಕರು ದಿನನಿತ್ಯ ಪ್ರಯಾಣಿಕರು ಮಾಡಿರುವ ತಪ್ಪಿಗೆ ತಾವು ಬೈಗುಳವನ್ನು ಸ್ವೀಕರಿಸಿ, ಅದೇಷ್ಟೊ ಕಂಪ್ಲೈಂಟ್ಗಳನ್ನು ಕೇಳಿಸಿಕೊಂಡರೂ, ಅವರು ತಾವು ಮಾಡುವ ಕೆಲಸವನ್ನು ಶ್ರದ್ದೆಯಿಂದಲೇ ಮಾಡುತ್ತಾರೆ. ಇಂತಹ ಜನರ ನಡುವೆ ಆಟೋ ಚಾಲಕರಿಬ್ಬರು ತಾವು ಮಾಡುತ್ತಿರುವ ವೃತ್ತಿಯಿಂದಲೇ ಹಲವರಿಗೆ ಉಚಿತ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರೇ ನೀವು ನಂಬಲೇಬೇಕು.
ಮದುವೆಯಾಗದೆಯೆ ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗಾಗಿಯೆ ಮುಡಿಪಾಗಿಟ್ಟಿರುವ ಹಲವರು ನಮ್ಮ ದೇಶದಲ್ಲಿ ಹೆಚ್ಚು ಮಂದಿ ಇದ್ದಾರೆ. ಆದರೆ ತಾವು ಮಾಡುವ ಕೆಲಸದಲ್ಲಿಯೆ ಸಮಾಜ ಸೇವೆಯನ್ನು ಕೂಡಾ ಮಾಡುವವರು ಸಿಗುವುದು ಬಹಳ ಕಡಿಮೆ ಅಂತಾನೆ ಹೆಳ್ಬೋದು. ಅಂತಹ ವ್ಯಕ್ತಿಯ ಬಗ್ಗೆ ಈ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಹಾಗಾದರೆ ಆ ವ್ಯಕ್ತಿ ಯಾರು ಮತ್ತು ಆತನ ಸೇವೆ ಎಂತದ್ದು ಎಂದು ತಿಳಿಯಲು ಮುಂಡಕ್ಕೆ ಓದಿರಿ...
ಕಲಬುರ್ಗಿ ಮೂಲದ ಮಲ್ಲಿಕಾರ್ಜುನ್ ಎಂಬಾತ ಹಲವಾರು ವರ್ಷಗಳಿಂದ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಈತ ಕಳೆದ 5 ವರ್ಷಗಳಿಂದ ಉಚಿತವಾಗಿ ಗರ್ಭಿಣಿ ಸ್ತ್ರೀಯರು ತಮ್ಮ ತುರ್ತು ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಸೇವೆಯನ್ನು ಸಹ ಮಾಡುತ್ತಿದ್ದಾರೆ.
ಈಗಾಗಲೆ ಆಟೋ ಡ್ರೈವರ್ ಮಲ್ಲಿಕಾರ್ಜುನ್ರವರು ಕಳೆದ ಐದು ವರ್ಷಗಳಿಂದ ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಆಟೊ ರೈಡಿಂಗ್ ಅನ್ನು ನೀಡುತ್ತಾ ಬಂದಿದ್ದು, ಇಲ್ಲಿಯವರೆಗು ಈ ಸೇವೆಯನ್ನು ಸುಮಾರು 100ಕ್ಕು ಹೆಚ್ಚು ಮಂದಿ ಗರ್ಭಿಣಿಯರಿಗೆ ನೀಡಿದ್ದಾರೆ.
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ ಮಲ್ಲಿಕಾರ್ಜುನ್ರವರು ಒಟ್ಟು ನಾಲ್ಕು ಆಟೋಗಳ ಮಾಲೀಕರಾಗಿದ್ದು, ಆ ನಾಲ್ಕು ಆಟೋಗಳಲ್ಲಿ 24/7 ಗರ್ಭಿಣಿ ಸ್ತ್ರೀಯರ ತುರ್ತು ಪರಿಸ್ಥಿಯ ಸಂಧರ್ಭದಲ್ಲಿ ಉತ್ಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ.
ಮಲ್ಲಿಕಾರ್ಜುನ್ರವರಿಗೆ ಈ ಆಲೋಚನೆ ಬಂದಿದ್ದೆ ಅವರ ತಂಗಿಯ ಜೀವನದಲ್ಲಿ ನಡೆದ ದುಖಕರ ಘಟನೆ ಇಂದ. ಮಲ್ಲಿಕಾರ್ಜುನ್ರವರ ತಂಗಿ ಕಳೆದ ಐದು ವರ್ಷಗಳ ಹಿಂದೆ ಗರ್ಭಿಣಿಯಾಗಿದ್ದಾರು. ತಂಗಿಯ ತುರ್ತು ಪರಿಸ್ಥಿತಿಯಲಿ ಯಾವುದೇ ಆಂಬ್ಯೂಲೆನ್ಸ್ ಆಗಲಿ ಅವರ ಸ್ಥಳಕ್ಕೆ ಬರಲು ತಿರಸ್ಕರಿಸಿದರು.
ಈ ಘಟನೆಯಿಂದಾಗಿ ಮಲ್ಲಿಕಾರ್ಜುನ್ರವರು ಈ ತೀರ್ಮಾನವನ್ನು ತೆಗೆದುಕೊಂಡಿದ್ದು, ಕಲಬುರ್ಗಿಯಲ್ಲಿನ ಶಾಂತಿ ನಗರ್ ನಿವಾಸಿಯಾದ ಆತ ತನ್ನ ಫೋನ್ ನಂಬರ್ ಅನ್ನು ತಮ್ಮ ನಾಲ್ಕೂ ಆಟೋಗಳ ಹಿಂದೆ ಹಾಕಿಕೊಂಡು, ಗರ್ಭಿಣಿ ಸ್ತ್ರೀಯರಿಗೆ ತುರ್ತು ಪರ್ಸ್ಥಿತಿಯಲ್ಲಿ ಉಚಿತವಾದ ಸಂಚಾರವನ್ನು ನೀಡಲು ಮುಂದಾದರು.
ಇದು ಮಲ್ಲಿಕಾರ್ಜುನ್ರವರ ಸಮಾಜ ಸೇವೆಯ ಕಥೆಯಾದರೆ ಬೆಳಗಾಂ ಜಿಲ್ಲೆಯಲ್ಲಿನ ಆಟೋ ಚಾಲಕನೊಬ್ಬ ಕೇವಲ ಗರ್ಭಿಣಿ ಸ್ರ್ತೀಯರಿಗೆ ಮಾತ್ರವಲ್ಲದೇ, ಅಂಗವಿಕಲರಿಗೆ ಮತ್ತು ಯೋಧರಿಗೆ ಉಚಿತ ರೈಡ್ ಅನ್ನು ನೀಡುತ್ತಿದ್ದಾರೆ.
MOST READ: ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!
ಹೌದು, ಬೆಳಗಾಂ ತಾಲೂಕಿನವರಾದ ಮುನೇಸಾ ಮನಗುಲಿ ಬಿಎ ಪದವೀದರರಾಗಿದ್ದು, ವೃತ್ತಿಯಲ್ಲಿ ತಾವು ಆಟೋ ಚಾಲಕರಾಗಿದ್ದಾರೆ, ಸುಮಾರು 42 ವಯಸ್ಕರಾದ ಇವರು 2015ರಿಂದ ಈ ಸಮಾಜ ಸೇವೆಯನ್ನು ಮಾಡುತ್ತಲೇ ಬಂದಿದ್ದಾರೆ. ಇವರು ಚಲಾಯಿಸುತ್ತಿರುವ ಆಟೋವಿನ ದಿನದ ಬಾಡಿಗೆ 250 ಆದರೂ ಸಹ ಇವೆಲ್ಲವನ್ನು ಪಕ್ಕಕಿಟ್ಟು ಇಂತಹ ಸಮಾಜ ಸೇವೆಯನ್ನು ಮಾಡುತ್ತಿರುವುದನ್ನು ಮೆಚ್ಚಲೇಬೇಕು.
ಮೇಲೆ ಹೇಳಿರುವ ಹಾಗೆ ಮುನೇಸಾ ಮನಗುಲಿಯವರು 2015ರಿಂದ ಈ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಈ ಸೇವೆಯನ್ನು ಈತ ಶುರು ಮಾಡಲು ಪ್ರೇರೆಪಿಸಿದ ಘಟನೆಯೊಂದನ್ನು ತಾವು ಹಂಚಿಕೊಂಡಿದ್ದಾರೆ. ಅದೇನೆಂದರೆ, 1992ರಲ್ಲಿ ನಾರಾಯಣಪುರ ಎಂಬ ಹಳ್ಳಿಯಲ್ಲಿ ಗರ್ಭಿಣಿ ಸ್ತ್ರೀ ತನ್ನ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಆಂಬ್ಯೂಲೆನ್ಸ್ ಬಾರದಿದ್ದನ್ನು ಕಂಡ ಇವರಿಗೆ ಈ ಸೇವೆಯನ್ನು ಮಾಡಲು ಪ್ರೇರೇಪಣೆ ಮಾಡಿತಂತೆ.
ಮುನೇಸಾ ಮನಗುಲಿಯವರು ತಮ್ಮ ಆಟೋ ಹಿಂಭಾಗದಲ್ಲಿ ತಾವು ಯಾರಿಗೆ ಉಚಿತ ಸೇವೆಯನ್ನು ನೀಡುತ್ತೇನೆ ಎಂದು ಉಲ್ಲೇಖಿಸಿರುವುದಾಗಿ, ಅವರಲ್ಲಿ ಯಾರೊಬ್ಬರು ನಾನು ನೀಡಿದ ಸಂಖ್ಯೆಗೆ ಕರೆ ಮಾಡುತ್ತಾರೆಯೊ ಅವರನ್ನು ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಅವರ ಮನೆಗೆ ಉಚಿತವಾಗಿ ಕರೆದೊಯ್ಯುತ್ತೇನೆ ಎಂದು ಹೇಳಿಕೊಂಡಿದ್ದಾರೆ.
Image courtesy: India Times
ಮನಗುಲಿಯವರು ತಮ್ಮ ವೃತ್ತಿಪರ ಜೀವನದಲ್ಲಿ ಇಲ್ಲಿಯವರೆಗು ಸುಮಾರು 2000ಕ್ಕು ಹೆಚ್ಚು ಮಂದಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದ್ದು, ತಾನು ಎಷ್ಟು ಮಂದಿಗೆ ಸಹಾಯ ಮಾಡಿದ್ದೇನೆ ಎಂಬುದನ್ನು ಸಹ ಅವರು ಲೆಕ್ಕ ಹಾಕಿಕೊಂಡಿದ್ದಾರಂತೆ.
MOST READ: ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ
ಏನೇ ಹೇಳಿ ನಗರ ಪ್ರದೇಶಗಳಲ್ಲಿ ತಪ್ಪು ತಮ್ಮದಾದರೂ, ಆಟೋ ಚಾಲಕರನ್ನು ಬೈಯುತ್ತಾ ಬಾಳುತ್ತಿರುವ ಸಮಾಜದಲ್ಲಿ ತಮ್ಮ ಜೀವನದಲ್ಲಿ ತಾವು ಕಂಡ ಘಟನೆಯಿಂದ ಪ್ರೇರಿತರಾಗಿ ಸಾಮಾಜ ಸೇವೆಯನ್ನು ಮಾಡಲು ಮುಂಡಾಗಿರುವ ಆಟೋ ಚಾಲಕರು, ಇನ್ನು ಹಲವಾರು ಆಟೋ ಚಾಲಕರಿಗೆ ಮತ್ತು ಇನ್ನಿತರರಿಗೆ ಮಾರ್ಗದರ್ಶಿಯಾಗಿದ್ದಾರೆ. ಮತ್ತು ಇವರ ಈ ಸೇವೆಯನ್ನು ಹಲವರು ಶ್ಲಾಘಿಸಿದ್ದಾರೆ.