Just In
- 10 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 12 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 12 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 13 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಎಲೆಕ್ಟ್ರಿಕ್ ಕಾರ್ ಉತ್ಪಾದನಾ ಸ್ಥಾವರಕ್ಕಾಗಿ ರೂ. 10,000 ಕೋಟಿ ಹೂಡಿಕೆಗೆ ಸಿದ್ಧವಾದ ಓಲಾ
ಲೆಕ್ಟ್ರಿಕ್ ವಾಹನ ತಯಾರಿಯಲ್ಲಿ ಗುರ್ತಿಸಿಕೊಂಡಿರುವ ದೇಶೀಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಓಲಾ, 10,000 ಕೋಟಿ ಹೂಡಿಕೆಯೊಂದಿಗೆ ಹೊಸ ಸ್ಥಾವರವನ್ನು ಸ್ಥಾಪಿಸಲು ಮುಂದಾಗಿದ್ದು, ಹೊಸ ಸ್ಥಾವರವನ್ನು ಮುಖ್ಯವಾಗಿ ಬ್ಯಾಟರಿ ಉತ್ಪಾದನೆಗೆ ಮತ್ತು ಸಾಧ್ಯವಾದರೆ ಕಾರು ಉತ್ಪಾದನೆಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.
ಆಪ್ ಮೂಲಕ ಟ್ಯಾಕ್ಸಿಗಳನ್ನು ಬುಕ್ ಮಾಡುವ ಕಂಪನಿಯಾಗಿ ಓಲಾ ಪ್ರಾರಂಭವಾದ ನಂತರ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ತಯಾರಿಸಲು ನಿರ್ಧರಿಸಿತು. ತರುವಾಯ, ಕಂಪನಿಯು ಕೃಷ್ಣಗಿರಿ ಜಿಲ್ಲೆಯಲ್ಲಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಘಟಕವನ್ನು ಸ್ಥಾಪಿಸಿತು. ಸ್ಥಾವರವು ಪ್ರಸ್ತುತ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ.
ಓಲಾ ಎಲೆಕ್ಟ್ರಿಕ್ ಸದ್ಯ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. 2021 ರಲ್ಲಿ ಆರಂಭವಾಗಿದ್ದ ಓಲಾ ಸ್ಕೂಟರ್ ಮಾರಾಟವು ತನ್ನ ಆರಂಭದಿಂದಲೂ ಸ್ಕೂಟರ್ಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದೆ. ಕಂಪನಿಯು ಸ್ಕೂಟರ್ ಮಾರಾಟದಲ್ಲಿ ಶೀಘ್ರದಲ್ಲೇ ನಂಬರ್ 1 ಸ್ಥಾನಕ್ಕೇರುವ ನಿರೀಕ್ಷೆಯಿದೆ.
ಆದರೆ ಕಂಪನಿ ಮಾರಾಟ ಮಾಡುವ ಸ್ಕೂಟರ್ಗಳ ಗುಣಮಟ್ಟ ಕಳಪೆಯಾಗಿದೆ ಹಾಗೂ ತಾಂತ್ರಿಕ ಸಮಸ್ಯೆಗಳಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಖರೀದಿದಾರರು ಪೋಸ್ಟ್ ಮಾಡುತ್ತಿದ್ದಾರೆ. ಕಂಪನಿಯ ಸ್ಕೂಟರ್ಗಳಿಗೆ ಬೆಂಕಿ ಹೊತ್ತಿಕೊಂಡ ಪ್ರಕರಣಗಳೂ ಕಂಪನಿಯ ಬೆಳವಣಿಗೆಯನ್ನು ಸ್ಥಗಿತಗೊಳಿಸಿವೆ. ಆದರೂ ಇದೆಲ್ಲವನ್ನು ಬದಿಗಿಟ್ಟು ಓಲಾ ಕಂಪನಿಯು ಈಗ ಕಾರ್ ತಯಾರಿಗೆ ಮುಂದಾಗಿದೆ.
ಕಳೆದ 6-8 ತಿಂಗಳುಗಳಿಂದ ಓಲಾ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ವ್ಯವಹಾರದಲ್ಲಿದೆ. ಕಂಪನಿಯ ಸಿಇಒ ಭವಿಷ್ ಅಗರ್ವಾಲ್, ಕಂಪನಿಯು ಕಾರ್ ತಯಾರಿ ಅಧ್ಯಯನದಲ್ಲಿ ಕೆಲಸ ಮಾಡುತ್ತಿದೆ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕಂಪನಿಯು ಪ್ರಸ್ತುತ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಸ್ಥಾವರ ನಿರ್ಮಾಣವನ್ನು ವೇಗಗೊಳಿಸುತ್ತಿದೆ.
ಇದಕ್ಕಾಗಿ, ಕಂಪನಿಯು ಮೊದಲು ಪ್ಲಾಂಟ್ ಅನ್ನು ಆಯ್ಕೆ ಮಾಡುತ್ತಿದೆ. ಸುಮಾರು 1000 ಎಕರೆ ಪ್ರದೇಶದಲ್ಲಿ ಸ್ಥಾವರವನ್ನು ನಿರ್ಮಿಸಲು ಯೋಜಿಸಿದೆ. ಪ್ರಸ್ತುತ ತಮಿಳುನಾಡಿನಲ್ಲಿ ದ್ವಿಚಕ್ರ ವಾಹನ ಘಟಕವನ್ನು ಹೊಂದಿದ್ದು, ಎರಡು ವರ್ಷಗಳಲ್ಲಿ 10 ಲಕ್ಷ ಸ್ಕೂಟರ್ಗಳನ್ನು ತಯಾರಿಸಲು ಯೋಜಿಸಿದೆ. ಈ ಮಧ್ಯೆ, ಕಂಪನಿಯ ಕಾರ್ ತಯಾರಿಗಾಗಿ 10 ಬಿಲಿಯನ್ ಹೂಡಿಕೆಯನ್ನು ತರಲು ಯೋಜಿಸುತ್ತಿದೆ.
ಓಲಾ ಪ್ರಸ್ತುತ ಸ್ಥಾಪಿಸಲು ಯೋಜಿಸುತ್ತಿರುವ ಹೊಸ ಘಟಕದಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಬ್ಯಾಟರಿಗಳನ್ನು ತಯಾರಿಸಲಿದೆ. ಓಲಾ ಭಾರತದಲ್ಲಿ ವಾಹನಗಳಿಗೆ ಬ್ಯಾಟರಿ ತಯಾರಿಸಲು ಪರವಾನಗಿ ಪಡೆದ ಕೆಲವೇ ಕಂಪನಿಗಳಲ್ಲಿ ಒಂದಾಗಿದ್ದು, ಕೇಂದ್ರ ಸರ್ಕಾರದ PLI ಯೋಜನೆಯಡಿಯಲ್ಲಿ ಈ ಅನುಮೋದನೆಯನ್ನು ಪಡೆದುಕೊಂಡಿದೆ.
ಕಂಪನಿಯು ಪ್ರಸ್ತುತ 20gWh ವರೆಗೆ ಬ್ಯಾಟರಿಗಳನ್ನು ಸಾಗಿಸಲು ಪರವಾನಗಿ ಪಡೆದಿದೆ. ಆದರೆ ಓಲಾ ಇದನ್ನು 50 gWh ಗೆ ಹೆಚ್ಚಿಸಲು ಯೋಜಿಸುತ್ತಿರುವುದಾಗಿ ತಿಳಿದುಬಂದಿದೆ. ಹೊಸ ಸ್ಥಾವರವು ಭಾರತದಲ್ಲಿ ಪ್ರಮುಖ ಬ್ಯಾಟರಿ ಉತ್ಪಾದನಾ ಘಟಕವಾಗಲಿದ್ದು, ಅಲ್ಲಿಂದ ಓಲಾ ಕಂಪನಿಯ ವಾಹನಗಳಿಗೆ ಮಾತ್ರವಲ್ಲದೆ ಇತರೆ ಕಂಪನಿಗಳಿಗೂ ಬ್ಯಾಟರಿಗಳನ್ನು ರಫ್ತು ಮಾಡಲಾಗುವುದು.
ಸ್ಥಾವರವನ್ನು ಸ್ಥಾಪಿಸಲು ಪ್ರಸ್ತುತ ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಯುಪಿ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಮತ್ತು ಗುಜರಾತ್ ಜೊತೆ ಮಾತುಕತೆ ನಡೆಯುತ್ತಿದೆ. ಯುಪಿ ಸರ್ಕಾರವು ತಮ್ಮ ರಾಜ್ಯಕ್ಕೆ ಪ್ಲಾಂಟ್ ತರಲು ಉತ್ಸುಕವಾಗಿದೆ ಎಂದು ಹೇಳಲಾಗುತ್ತದೆ.
ಇದು ಅಭಿವೃದ್ಧಿ ಹೊಂದಿದ ರಾಜ್ಯ ಎಂಬ ದೇಶದ ಚಿತ್ರಣವನ್ನು ಬದಲಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿಯವರ ಪ್ರಮುಖ ಉಪಕ್ರಮವೆಂದು ಪರಿಗಣಿಸಲಾಗಿದೆ. ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದಲ್ಲಿ 1000 ಎಕರೆ ಭೂಮಿಯನ್ನು ಕಂಪನಿಗೆ ಮೀಸಲಿಡುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಅದೇ ರೀತಿ 2009ರಲ್ಲಿ ಟಾಟಾ ನ್ಯಾನೊ ಕಾರ್ ಪ್ಲಾಂಟ್ ಅನ್ನು ಪ್ರಾರಂಭಿಸಲು ಯೋಜಿಸಿದಾಗ, ಹಲವಾರು ರಾಜ್ಯಗಳು ಅದರೊಂದಿಗೆ ಸ್ಪರ್ಧಿಸಿದವು. ಅಂತಿಮವಾಗಿ, ಗುಜರಾತ್ನಲ್ಲಿ ಟಾಟಾ ಮೋಟಾರ್ಸ್ನ ಟಾಟಾ ನ್ಯಾನೋ ಸ್ಥಾವರವನ್ನು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹಸ್ತಾಂತರಿಸಿದ್ದರು. ಪ್ರಸ್ತುತ ಯುಪಿ ಮುಖ್ಯಸ್ಥರು ಅದೇ ಶೈಲಿಯಲ್ಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಓಲಾ ಕಂಪನಿಯು ಬ್ಯಾಟರಿ ರಫ್ತು ಮಾಡಲು ಆಶಿಸುತ್ತಿರುವುದರಿಂದ ಬಂದರು ಬಳಿ ಸ್ಥಳವನ್ನು ಆಯ್ಕೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಸಮುದ್ರ ಗಡಿಯು ಯುಪಿ ರಾಜ್ಯದಿಂದ ದೂರವಿರುವುದರಿಂದ ಯುಪಿಯಲ್ಲಿ ತನ್ನ ಸ್ಥಾವರವನ್ನು ತರಲು ಕಂಪನಿಯು ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗಿದೆ.
ಕಾರನ್ನು ಹೇಗೆ ತಯಾರಿಸಲಾಗುತ್ತದೆ ಹಾಗೂ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳ ಆಧಾರದ ಮೇಲೆ ಸ್ಥಾವರದ ಸ್ಥಾಪನೆಗೆ ಕಂಪನಿ ನಿರ್ಧರಿಸಲಿದೆ. ಕಾರಿನ ವಿನ್ಯಾಸಕ್ಕೆ ಹೊಸ ಘಟಕದ ಅಗತ್ಯವಿದ್ದಲ್ಲಿ, ಕಾರನ್ನು ಅಲ್ಲಿಯೇ ಅಥವಾ ಕೃಷ್ಣಗಿರಿಯಲ್ಲಿರುವ ದ್ವಿಚಕ್ರ ವಾಹನ ತಯಾರಿಕಾ ಘಟಕದಲ್ಲಿ ಉತ್ಪಾದಿಸುವ ನಿರೀಕ್ಷೆಯಿದೆ.