Just In
- 1 hr ago Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- 2 hrs ago ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- 14 hrs ago ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- 15 hrs ago ಭಾರತದ ನಂ.1 ಕಾರು... ದಾಖಲೆಯ ಮಾರಾಟ... 5.5 ಲಕ್ಷ ಬೆಲೆ... 34 ಕಿ.ಮೀ ಮೈಲೇಜ್
Don't Miss!
- News ಬೆಂಗಳೂರು ಬೆಳ್ಳಂದೂರು ಶಾಲಾ ಆವರಣದಲ್ಲಿ ಸ್ಪೋಟಕ ಪತ್ತೆ, ಮಕ್ಕಳು ಪೋಷಕರಲ್ಲಿ ಆತಂಕ
- Movies ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
- Finance ಬಯೋಕಾನ್ ರಾಜಕೀಯ ದೇಣಿಗೆ ನೀಡಿಲ್ಲ ಎಂದ ಕಿರಣ್ ಮಜುಂದಾರ್ ಶಾ: ಹಾಗಿದ್ರೆ 6 ಕೋಟಿ ರೂ. ಯಾರದ್ದು?
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಹಿನ್ನೆಲೆ ಟೆಕ್ಕಿಯ ಮರ್ಡರ್
ಟ್ರಾಫಿಕ್ ವೇಳೆ ಬೈಕ್ವೊಂದು ಮತ್ತೊಂದು ಬೈಕ್ಗೆ ಉಜ್ಜಿಕೊಂಡು ಹೋಗಿದ್ದರ ಪರಿಣಾಮ ಟೆಕ್ಕಿ ಮತ್ತು ರೌಡಿ ಶೀಟರ್ ಮಧ್ಯೆ ಮಾರಾಮಾರಿ ನಡೆದಿದ್ದು, ರೂ.500 ಕೊಡಲು ಒಪ್ಪದ ಟೆಕ್ಕಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಟ್ರಾಫಿಕ್ ವೇಳೆ ಬೈಕ್ವೊಂದು ಮತ್ತೊಂದು ಬೈಕ್ಗೆ ಉಜ್ಜಿಕೊಂಡು ಹೋಗಿದ್ದರ ಪರಿಣಾಮ ಟೆಕ್ಕಿ ಮತ್ತು ರೌಡಿ ಶೀಟರ್ ಮಧ್ಯೆ ಮಾರಾಮಾರಿ ನಡೆದಿದ್ದು, ರೂ. 500 ಕೊಡಲು ಒಪ್ಪದ ಟೆಕ್ಕಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹತ್ಯೆಯಾದ ಟೆಕ್ಕಿಯನ್ನು 28 ವರ್ಷದ ಪ್ರಣಾಯ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಆಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಟೆಕ್ಕಿ ಪ್ರಣಾಯ್ ಹತ್ಯೆ ಮಾಡಿದ್ದ ಓರ್ವ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಸೋಮವಾರ ಪ್ರಣಾಯ್ ಮಿಶ್ರಾ ಅವರ ದ್ವಿಚಕ್ರ ವಾಹನವು ತಾವರೆಕೆರೆ ಮುಖ್ಯ ರಸ್ತೆಯ ಚಾಕ್ಲೇಟ್ ಫ್ಯಾಕ್ಟರಿ ಬಳಿ ಹೊಗುವಾಗ ರೌಡಿಶೀಟರ್ ಕಾರ್ತಿಕ್ ವಾಹನಕ್ಕೆ ಉಜ್ಜಿಕೊಂಡು ಹೊಗಿತ್ತು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಕಾರ್ತಿಕ್ ಮತ್ತು ಆತನ ಸ್ನೇಹಿತ ಅರುಣ್ ಪ್ರಣಾಯ್ರನ್ನು ಹಿಂಬಾಲಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
Recommended Video
500 ರೂ.ಗೆ ಕೊಲೆ
ಇನ್ನೂ ಆಘಾತಕಾರಿ ಸಂಗತಿ ಅಂದ್ರೆ ಕೇವಲ 500 ರೂ. ಗಾಗಿ ಈ ಕೊಲೆ ನಡೆದಿದೆ. ಗಾಡಿ ಉಜ್ಜಿಕೊಂಡು ಹೋದ ಕಾರಣ ಮುರಿದುಹೋಗಿದ್ದ ಮಡ್ ಗಾರ್ಡ್ ಸರಿಪಡಿಸಲು 500 ರೂ. ಕೊಡಬೇಕು ಎಂದು ರೌಡಿಗಳು ಜಗಳ ಮಾಡಿದ್ದರು.
ಆದ್ರೆ ಪ್ರಣಾಯ್ ಇದು ನನ್ನ ತಪ್ಪಲ್ಲ ಎಂದು ಹೇಳಿ ಹಣ ನೀಡಲು ನಿರಾಕರಿಸಿ ಅಲ್ಲಿಂದ ಹೊರಟುಹೋಗಿದ್ದರು. ಇದರಿಂದ ಕೋಪಗೊಂಡ ಆರೋಪಿಗಳು, ಪ್ರಣಾಯ್ ಅವರನ್ನ ಬೈಕ್ನಲ್ಲಿ ಹಿಂಬಲಿಸಿ ಅಡ್ಡಗಟ್ಟಿದ್ರು.
ಪ್ರಣಾಯ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಕೆಳಗೆ ಬಿದ್ದಿದ್ದರು. ಇದರ ಲಾಭ ಪಡೆದ ಆರೋಪಿಗಳು ಪ್ರಣಾಯ್ ಅವರ ಮುಖಕ್ಕೆ ಹೊಡೆದು, ಎರಡು ಬಾರಿ ಹೊಟ್ಟೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದರು.
ಪ್ರಣಾಯ್ ರಾಯ್ ವಾಸವಿದ್ದ ಮನೆಯಿಂದ ಕೆಲವು ಕಿ.ಮೀ ದೂರದಲ್ಲೇ ಈ ಘಟನೆ ನಡೆದಿದ್ದು, ರಕ್ತದ ಮಡುವಲ್ಲಿ ಬಿದ್ದಿದ್ದ ಪ್ರಣಾಯ್ ಅವರನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದರಾದ್ರೂ ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದ್ದಾರೆ.
ಇನ್ನು ಪ್ರಕರಣ ಬೇಧಿಸಲು ರಚಿಸಲಾಗಿದ್ದ ಪೊಲೀಸರ ತಂಡವು ಸಿಸಿಟಿವಿ ಪುಟೆಜ್ ಆಧಾರಿಸಿ ಬೈಕ್ ನೋಂದಣಿ ಸಂಖ್ಯೆಯನ್ನು ಪತ್ತೆ ಮಾಡಿ ರೌಡಿಗಳನ್ನ ಟ್ರೇಸ್ ಮಾಡಿದ್ದಾರೆ. ಮೂರು ಸುತ್ತು ಫೈರಿಂಗ್ ಮಾಡಿದ ನಂತರ 24 ವರ್ಷದ ಆರೋಪಿ ಕಾರ್ತಿಕ್ನನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದು, ಈ ವೇಳೆ ರೌಡಿಶೀಟರ್ ಕಾರ್ತಿಗ್ಗೆ ಮತ್ತು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ.
ಘಟನೆಗೂ ಮುನ್ನ ಭಾನುವಾರದಂದು ಪ್ರಣಾಯ್ ತನ್ನ ಸ್ನೇತರೊಂದಿಗೆ ಹೊರಗೆ ಪಾರ್ಟಿ ಮುಗಿಸಿ ಮನೆಗೆ ಹೋಗಿ ಮತ್ತೆ ತನ್ನ ಗೆಳತಿಯನ್ನು ಭೇಟಿಯಾಗಲು ಹೊರಟಿದ್ದರು ಎನ್ನಲಾಗಿದ್ದು, ಪ್ರಣಾಯ್ ಮಿಶ್ರಾ ಮೂಲತಃ ಒಡಿಶಾದವರು ಎಂದು ತಿಳಿದುಬಂದಿದೆ.