ಆಲ್ಟೋ ಕಾರು ಮತ್ತು ಲಾರಿ ನಡುವೆ ಡಿಕ್ಕಿ- ಸ್ಥಳದಲ್ಲೇ ನಾಲ್ವರು ದುರ್ಮರಣ
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವೇಗದಲ್ಲಿದ್ದ ಮಾರುತಿ ಆಲ್ಟೋ ಕಾರೊಂದು ಸರಕು ಸಾಗಿಸುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಲ್ಟೋ ಕಾರು ಪುಡಿ ಪುಡಿಯಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವೇಗದಲ್ಲಿದ್ದ ಮಾರುತಿ ಆಲ್ಟೋ ಕಾರೊಂದು ಸರಕು ಸಾಗಿಸುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಲ್ಟೋ ಕಾರು ಪುಡಿ ಪುಡಿಯಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ದೇಶಾದ್ಯಂತ ದಿನಂಪ್ರತಿ ಹತ್ತಾರು ಅಪಘಾತ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳು ಲಾರಿ ಮತ್ತು ಕಾರುಗಳ ಮಧ್ಯೆಯೇ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ನಿನ್ನೆ ತಡರಾತ್ರಿ ಮುಂಬೈ ಬಳಿಯು ಭೀಕರ ಅಪಘಾತದಲ್ಲಿ ಕಾರು ಚಾಲಕ ಸೇರಿ ಮೂವರು ದುರ್ಮರಣಕ್ಕಿಡಾಗಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರನ್ನು ಪುಣೆ ಮೂಲದ ಯಶವಂತ್ ಮಾನೆ(45), ಯಶವಂತ್ ಮಾನೆ ಅವರ ಪತ್ನಿ ಶಾರಾದಾ(40), ಮಗ ರಾಕೇಶ್(19) ಮತ್ತು ಕಾರು ಚಾಲನೆ ಮಾಡುತ್ತಿದ್ದ ರಾಮಚಂದ್ರ ಕೃಷ್ಣಾ ಎಂದು ಗುರುತಿಸಲಾಗಿದೆ.
Recommended Video


ವರದಿಗಳ ಪ್ರಕಾರ ಅಪಘಾತದಲ್ಲಿ ಮೃತಪಟ್ಟ ಯಶವಂತ್ ಮಾನೆ ಅವರು ಸರ್ಕಾರಿ ವೈದ್ಯರಾಗಿದ್ದರು ಎನ್ನಲಾಗಿದ್ದು, ಘಟನೆಗೆ ಕಾರು ಚಾಲಕ ಮಾಡಿದ ತಪ್ಪುಗಳೆ ದುರಂತಕ್ಕೆ ಕಾರಣ ಎಂಬುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ.

ಘಟನೆಗೂ ಮುನ್ನ ವೇಗದ ಚಾಲನೆ ಮಾಡುತ್ತಿದ್ದ ಆಲ್ಟೋ ಕಾರು ಚಾಲಕನು ನಿಯಂತ್ರಣ ತಪ್ಪಿದ್ದು, ಲಾರಿ ಹಿಂಭಾಗಕ್ಕೆ ಗುದ್ದಿಸಿದ್ದಾನೆ. ಗುದ್ದಿದ ರಭಸಕ್ಕೆ ಲಾರಿ ಹಿಂಭಾಗ ಕೂಡಾ ಜಖಂಗೊಂಡಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.

ಘಟನೆ ನಡೆದ ತಕ್ಷಣವೇ ಲಾರಿ ಚಾಲಕ ಕೂಡಾ ಕಾರಿನಲ್ಲಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದು, ಸ್ಥಳೀಯ ಪೊಲೀಸ ಕರೆ ಮಾಡಿ ನಡೆದ ಘಟೆನೆಯ ಬಗ್ಗೆ ವಿವರ ನೀಡಿದ್ದಾನೆ. ಆದ್ರೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕಾರಿನಲ್ಲಿದ್ದ ಎಲ್ಲರೂ ಉಸಿರು ಚೆಲ್ಲಿದ್ದರು.

ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಅಪಘಾತದ ಸ್ಥಳದಲ್ಲಿದ್ದ ಕಾರುನ್ನು ತೆರವುಗೊಳಿಸಿದ್ದು, ಲಾರಿ ಚಾಲಕ ನೀಡಿದ ಮಾಹಿತಿ ಮೇರೆಗೆ ತನಿಖೆ ನಡೆಸುತ್ತಿದ್ದಾರೆ.
ತಪ್ಪದೇ ಓದಿ-ವಾಹನಗಳ ನಂಬರ್ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ?

ಇನ್ನು ಘಟನೆ ಬಗ್ಗೆ ಅವಲೋಕನ ಮಾಡಿದಾಗ ಆಲ್ಟೋ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯ ಬಗ್ಗೆ ಹಲವು ಅನುಮಾನಗಳಿದ್ದು, ಎಬಿಎಸ್, ಏರ್ಬ್ಯಾಗ್ ಮತ್ತು ಗಟ್ಟಿಮುಟ್ಟಾದ ಬಾಡಿ ಕಿಟ್ ಇಲ್ಲದಿರುವುದು ಕೂಡಾ ಅಪಘಾತದ ತೀವ್ರತೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಬಹುದು.


Click it and Unblock the Notifications








