Just In
- 58 min ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 1 hr ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 2 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 2 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!
ಇನ್ನು ಮುಂದೆ ಪಾದಾಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ಭಾರತದ ಹೆದ್ದಾರಿ ಮತ್ತು ಮುಖ್ಯ ರಸ್ತೆಗಳಲ್ಲಿ ಪ್ರವೇಶ ಮಾಡದಿರುವಂತೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ.
ಪಾರ್ಲಿಮೆಂಟರಿ ಸ್ಟಾಂಡ್ ಸಮಿತಿಯು ನೀಡಿರುವ ವರದಿ ಪ್ರಕಾರ ಇನ್ನು ಮುಂದೆ ಹೆದ್ದಾರಿ ಮತ್ತು ಮುಖ್ಯ ರಸ್ತೆಗಳಲ್ಲಿ ಪಾದಾಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ಪ್ರವೇಶ ಮಾಡದಿರಲು ಸೂಚಿಸಿದೆ.
ಮೋಟಾರ್ ವಾಹನಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ರಚಿಸಿದ ಸಮೀತಿಯಲ್ಲಿ ಈ ರೀತಿಯ ಸಲಹೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ನಿಯಮ ಜಾರಿಗೆ ತರಲು ಈಗಾಗಲೇ ಚಿಂತನೆ ನೆಡೆಸಿದೆ.
2016 ಮೋಟಾರ್ ಕಾಯ್ದೆಯ ಪ್ರಕಾರ ಸರ್ಕಾರ ಸಲಹೆ ಸೂಚನೆ ಪಡೆದುಕೊಳ್ಳುವ ಸಲುವಾಗಿ ಈ ಪಾರ್ಲಿಮೆಂಟರಿ ಸ್ಟಾಂಡ್ ಸಮಿತಿ ರಚನೆ ಮಾಡಿತ್ತು.
ಮೋಟಾರ್ ಹೊಂದಿಲ್ಲದೆ ಇರುವ ಸಂಚಾರಿ ಸಾಧನಗಳಿಗೆ ಈ ನಿರ್ಬಂಧ ಹೇರಲಾಗುವುದು ಎನ್ನಲಾಗಿದ್ದು, ಸರ್ಕಾರ ಈ ನಿಯಮವನ್ನು ಜಾರಿಗೆ ತರುವ ಸಂಭವವಿದೆ ಎನ್ನಲಾಗಿದೆ.
ಜನರು ರಸ್ತೆ ಮಧ್ಯೆ ಹಾದು ಹೋಗುವ ಸಂದರ್ಭದಲ್ಲಿ ಅತಿ ಹೆಚ್ಚು ಸಾವು ನೋವುಗಳು ಸಂಭವಿಸುತ್ತಿರುವ ಕಾರಣ ಈ ನಿರ್ಧಾರಕ್ಕೆ ಸಮೀತಿ ಬಂದಿದೆ.
ಸಮೀತಿಯ 243 ನಿಯಮದ ಪ್ರಕಾರ ಪಾದಚಾರಿಗಳು ಅತಿ ಹೆಚ್ಚು ನಿಧಾನಗತಿಯಲ್ಲಿ ಸಂಚಾರ ಮಾಡುವವರಾಗಿದ್ದು, ಇದರಿಂದಾಗಿ ಅತಿ ವೇಗದ ವಾಹನಗಳಿಗೆ ಸಿಲುಕಿ ಸಾವನ್ನಪ್ಪುವ ಸಂಭವಗಳು ಹೆಚ್ಚಿಗೆ ಇರುವ ಕಾರಣ ಈ ನಿರ್ಣಯಕ್ಕೆ ಬರಲಾಗಿದೆ.
ಈ ನಿಯಮಗಳನ್ನು ಮೀರಿ ಪಾದಾಚಾರಿಗಳು ಮುಖ್ಯ ರಸ್ತೆ ಅಥವಾ ಹೆದ್ದಾರಿಗಳಲ್ಲಿ ಹೋದಲ್ಲಿ ದಂಡ ಕಟ್ಟಬೇಕು ಅಥವಾ ಶಿಕ್ಷೆಗೆ ಗುರಿಪಡಿಸಬೇಕು ಎಂಬ ನಿಯಮ ತರಬೇಕು ಎಂದು ಸಮೀತಿ ಒತ್ತಾಯಿಸಿದೆ.
ಪಾದಾಚಾರಿಗಳ ಮತ್ತು ಸೈಕಲ್ ಸವಾರರ ಪರ ಸಾಮಾಜಿಕ ಕಾರ್ಯಕರ್ತರು ಈಗಾಗಲೇ ಬ್ಯಾಟ್ ಬೀಸಿದ್ದು, ಸಮೀತಿ ನೀಡಿರುವ ವರದಿ ಅವೈಜ್ಞಾನಿಕ ಎಂದಿದ್ದಾರೆ.
ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ ಮೋಟಾರ್ ಇಲ್ಲದ ಸಂಚಾರಿ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುವ ಬದಲು, ಪಾದಾಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ಕೊಡಲಿ ಏಟು ಇಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರೆಶ್ನಿಸಿದ್ದಾರೆ.
ಈ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಸರ್ಕಾರ ಈ ಬಿಲ್ ಅನುಷ್ಠಾನಕ್ಕೆ ತಂದರೆ ಹೆಚ್ಚು ಜನರಿಗೆ ತೊಂದರೆಯಾಗಲಿದ್ದು, ಈ ಬಿಲ್ ವಿರೋಧಿಸಿ ನಾವು ಉಗ್ರ ಪ್ರತಿಭಟನೆ ನೆಡೆಸಲಿದ್ದೇವೆ ಎಂದಿದ್ದಾರೆ.
ಎಲ್ಲಾ ಹೆದ್ದಾರಿಗಳಲ್ಲಿ ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಪ್ರತ್ಯೇಕ ರಸ್ತೆ ಅಥವಾ ಫುಟ್ಪಾತ್ ಇಲ್ಲದೆ ಇರುವುದು ಈ ನಿಯಮ ಜಾರಿಗೆ ತರುವುದಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟು ಮಾಡಿದೆ ಎನ್ನಲಾಗಿದೆ.
ಇಷ್ಟೆಲ್ಲಾ ತೊಂದರೆಗಳ ನಡುವೆ ಸರ್ಕಾರಕ್ಕೆ ಪಾರ್ಲಿಮೆಂಟರಿ ಸ್ಟಾಂಡ್ ಸಮಿತಿಯು ಸಲ್ಲಿಸಿರುವ ಈ ಕಾಯ್ದೆ ಕಾರ್ಯರೂಪಕ್ಕೆ ಬಂದರೆ ಹೆಚ್ಚಿನ ಜನಕ್ಕೆ ತೊಂದರೆಯಾಗುವುದಂತೂ ಖಂಡಿತ.