ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ಕಾವೇರಿಗಾಗಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಭಾರೀ ಅವಘಡ ಒಂದು ಸಂಭವಿಸಿದೆ. ರೈಲು ತಡೆಡು ತಡೆದು ಪ್ರತಿಭಟಿಸುತ್ತಿದ್ದಾಗ ಯುವಕನೊಬ್ಬನಿಗೆ ಹೈಟೆನ್ಷನ್ ವೈರ್‌ ತಾಗಿದೆ.

By Praveen Sannamani

ತಮಿಳುನಾಡಿನಲ್ಲಿ ಕಾವೇರಿಗಾಗಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಭಾರೀ ಅವಘಡ ಒಂದು ಸಂಭವಿಸಿದೆ. ರೈಲು ತಡೆಡು ತಡೆದು ಪ್ರತಿಭಟಿಸುತ್ತಿದ್ದಾಗ ಯುವಕನೊಬ್ಬನಿಗೆ ಹೈಟೆನ್ಷನ್ ವೈರ್‌ ತಾಗಿದ್ದು, ಯುವಕ ಕೆಲವೇ ಸೇಕೆಂಡುಗಳಲ್ಲಿ ಸುಟ್ಟು ಕರಕಲಾಗಿರುವ ದುರಂತ ನಡೆದಿದೆ.

ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ಕರ್ನಾಟಕದ ಜೀವನದಿ ಕಿತ್ತುಕೊಳ್ಳಲು ತಮಿಳುನಾಡಿನಲ್ಲಿ ನಡಿಯುತ್ತಿರುವ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗಿದ್ದು, ಟ್ರೈನ್ ತಡೆದು ಅದರ ಮೇಲೆ ಹತ್ತಿ ಪ್ರೊಟೆಸ್ಟ್ ಮಾಡಲು ಹೋದವನು ಕರೆಂಟ್ ಶಾಕ್ ಹೊಡೆದು ಸುಟ್ಟು ಕರಕಲಾಗಿದ್ದಾನೆ.

ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ದಿಂಡಿವಾನಂಲ್ಲಿ ಕರ್ನಾಟಕಕ್ಕೆ ಬರ್ತಿದ್ದ ಟ್ರೈನ್ ತಡೆದು ಅದರ ಮೇಲೆ ಹತ್ತಿ ಪ್ರೊಟೆಸ್ಟ್ ಮಾಡುತ್ತಿದ್ದಾಗ ಈ ದುಂರತ ಸಂಭವಿಸಿದ್ದು, ಮಕ್ಕಳ್ ಕಚ್ಚಿಯ ಕಾರ್ಯಯಕರ್ತರು ಟ್ರೈನ್ ಮೇಲೆ ಹತ್ತಿ ಪ್ರೊಟೆಸ್ಟ್ ಮಾಡುತ್ತಿದ್ದರು ಎನ್ನಲಾಗಿದೆ.

ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ಈ ವೇಳೆ ರಂಜಿತ್ ಅನ್ನೋ ಯುವಕನಿಗೆ ವೈರ್ ಟಚ್ ಆಗಿದ್ದು, ಹೈಟೆನ್ಷನ್ ಹಿನ್ನೆಲೆ ಯುವಕನು ರೈಲಿನ ಮೇಲೆಯೇ ಹೊತ್ತಿ ಉರಿದಿದ್ದಾನೆ. ಕೆಲವೇ ಸೇಕೆಂಡುಗಳಲ್ಲಿ ಇಷ್ಟೇಲ್ಲಾ ಘಟನೆ ನಡೆದ್ದು, ಯುವಕನನ್ನು ರಕ್ಷಣೆ ಮಾಡುವಷ್ಟರಲ್ಲಿ ಆದಾಗಲೇ ರಂಜಿತ್ ಪ್ರಾಣ ಬಿಟ್ಟಿದ್ದ.

ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ಸದ್ಯ ಸಾಮಾಜಿಕ ಚಾಲತಾಣಗಳಲ್ಲಿ ಕಾವೇರಿಗಾಗಿ ಪ್ರತಿಭಟನೆ ವೇಳೆ ನಡೆದ ದುರಂತದ ವಿಡಿಯೋ ವೈರಲ್ ಆಗಿದ್ದು, ಘಟನೆ ಕಂಡು ಸ್ಥಳದಲ್ಲಿದ್ದ ಪ್ರತಿಭಟನಾಕಾರರಲ್ಲಿ ದಿಗ್ಬಮೆಗೆ ಒಳಗಾಗಿದ್ದಾರೆ. ಇದರ ಮಧ್ಯೆಯು ಕರ್ನಾಟ ಕದ ವಿರುದ್ಧ ತಮಿಳು ಹೋರಾಟಗಾರರ ಕಿಚ್ಚು ಮಾತ್ರ ನಿಂತಿಲ್ಲ.

ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ಕಾವೇರಿ ಹರಿಯು ಜಿಲ್ಲೆಗಳಲ್ಲಿ ಕರ್ನಾಟಕದ ವಿರುದ್ದ ಆಕ್ರೋಶ ಹೆಚ್ಚಾಗಿದ್ದು, ಕನ್ನಡಿಗರನ್ನೇ ಟಾರ್ಗೆಟ್ ಮಾಡಿ ಅಟ್ಯಾಕ್ ಗಳು ನಡಿಯುತ್ತಿದೆ. ಇನ್ನು ಕಾಂಚಿಪುರಂ, ಕಡಲೂರು, ತಿರುವಣ್ಣಾಮಲೈ , ಸೇಲಂ, ಧರ್ಮಪುರಿ, ಕೃಷ್ಣಗಿರಿಯಲ್ಲೂ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಪೊಲೀಸರ ಮೇಲೆ ಉದ್ರಿಕ್ತರು ಹಲ್ಲೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.

ಹೈ ಟೆನ್ಷನ್ ವೈರ್ ಟಚ್ ಆಗಿ ಸಾವನ್ನಪ್ಪಿದ ಯುವಕನ ವಿಡಿಯೋ ಇಲ್ಲಿದೆ ನೋಡಿ...

ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇತ್ತೀಚೆಗೆ ಅಂತರ್‌ರಾಜ್ಯಗಳ ನಡುವಿನ ವಾಜ್ಯಗಳು ಉಂಟಾದಾಗ ರೈಲು ತಡೆ ನಡೆಸಿ ಪ್ರತಿಭಟಿಸುವುದು ಸಾಮಾನ್ಯ ಸಂಗತಿ. ಆದರೆ ಈ ವೇಳೆ ಪ್ರತಿಭಟನಾಕಾರರು ಎಚ್ಚರಿಕೆಯಿಂದ ಪ್ರತಿಭಟಿಸುವುದು ಒಳಿತು. ಇಲ್ಲವಾದ್ರೆ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬುವುದಕ್ಕೆ ಈ ಘಟನೆ ಸಾಕ್ಷಿ.

ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇನೋವಾ ಮತ್ತು ಲಾರಿ ನಡುವೆ ಭೀಕರ ಅಪಘಾತ- 7 ಮಂದಿ ದುರ್ಮರಣ

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಸ ಫೋರ್ಡ್ ಎಂಡೀವರ್...

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನಿಜವೇ?

More from DriveSpark

Article Published On: Thursday, April 12, 2018, 13:45 [IST]
English summary
man electrocuted on top of train during Cauvery protests in Tamil Nadu.
Read more on video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+