Just In
- 1 hr ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 2 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 3 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 3 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಡ್ಯೂಟಿ ಅವರ್ಸ್ ಮುಗಿತು' ಎಂದು ವಿಮಾನ ಇಳಿದು ಹೊರ ನಡೆದ ಪೈಲೆಟ್..!!
ಇನ್ನೇನು ಆ ವಿಮಾನವು ಜೈಪುರದಿಂದ ದಿಲ್ಲಿಗೆ ಹೊರಡಬೇಕಾಗಿತ್ತು. ಹೀಗಾಗಿ ಪ್ರಯಾಣಿಕರೆಲ್ಲರು ಸಿದ್ಧರಾಗಿ ಕೂತಿದ್ದರು. ಆದ್ರೆ ವಿಮಾನ ಟೇಕ್ ಆಫ್ ಆಗುತ್ತೆ ಎಂದು ಕಾಯುತ್ತಿದ್ದ ಪ್ರಯಾಣಿಕರಿಗೊಂದು ಅಚ್ಚರಿ ಕಾದಿತ್ತು.
ಇನ್ನೇನು ಆ ವಿಮಾನವು ಜೈಪುರದಿಂದ ದಿಲ್ಲಿಗೆ ಹೊರಡಬೇಕಾಗಿತ್ತು. ಹೀಗಾಗಿ ಪ್ರಯಾಣಿಕರೆಲ್ಲರು ಸಿದ್ಧರಾಗಿ ಕೂತಿದ್ದರು. ಆದ್ರೆ ವಿಮಾನ ಟೇಕ್ ಆಫ್ ಆಗುತ್ತೆ ಎಂದು ಕಾಯುತ್ತಿದ್ದ ಪ್ರಯಾಣಿಕರಿಗೊಂದು ಅಚ್ಚರಿ ಕಾದಿತ್ತು. ಜೊತೆಗೆ ಪೈಲೆಟ್ ನಡೆಯಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಬಂದೊದಗಿತ್ತು.
ಡ್ಯೂಟಿ ಅವಧಿ ಮುಗಿಯಿತೆಂದು ಏರ್ ಇಂಡಿಯಾ ಪೈಲಟ್ ಒಬ್ಬ ವಿಮಾನವನ್ನು ರನ್ವೇನಲ್ಲಿಯೇ ಬಿಟ್ಟು ಹೊರಟು ಹೋಗಿರುವ ಪ್ರಸಂಗವು ಜೈಪುರನಲ್ಲಿ ನಡೆದಿದ್ದು, ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ ಕಾರಣ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 40 ಪ್ರಯಾಣಿಕರು ಪರಡಾಡಿದ ಘಟನೆ ನಡೆದಿದೆ.
ಹೀಗಾಗಿ ಜೈಪುರದಿಂದ ದೆಹಲಿಗೆ ಹೋಗಬೇಕಿದ್ದ ಪ್ರಯಾಣಿಕರನ್ನು ಬಸ್ ಮೂಲಕ ದೆಹಲಿಗೆ ಕಳುಹಿಸಲಾಗಿದ್ದು, ಇನ್ನೂ ಕೆಲವರಿಗೆ ಹೋಟೆಲ್ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಉಳಿದವರನ್ನು ಇಂದು ಬೆಳಗಿನ ವಿಮಾನದಲ್ಲಿ ಕಳುಹಿಸಲಾಗಿದೆ.
ಘಟನೆಗೆ ಕಾರಣ?
ಘಟನೆಗೂ ಮುನ್ನ ಅದೇ ವಿಮಾನದಲ್ಲಿ ಕರ್ತವ್ಯದಲ್ಲಿದ್ದ ಪೈಲೆಟ್ ತನ್ನ ನಿಗದಿತ ಅವಧಿಯ ಸೇವೆಯನ್ನು ಪೂರೈಸಿದ್ದ. ನಿಯಮ ಅನುಸಾರ ನಿಗದಿತ ಅವಧಿ ಹೊರತುಪಡಿಸಿ ವಿಮಾನ ಚಾಲನೆ ಮಾಡಲು ಸಾಧ್ಯವಿಲ್ಲ ಎಂದಿದ್ದಾನೆ.
Recommended Video
ಈ ಹಿನ್ನೆಲೆ 'ಪೈಲಟ್ ಕರ್ತವ್ಯದ ಅವಧಿ ಮುಗಿದಿದ್ದರಿಂದ ವಿಮಾನ ಹಾರಿಸಲಿಲ್ಲ,' ಎಂಬುದನ್ನು ಸ್ಪಷ್ಟಪಡಿಸಿರುವ ಸಂಗಾನೇರ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಎಸ್.ಬಲ್ಹಾರಾ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತು ಎಂದಿದ್ದಾರೆ.
ತಪ್ಪದೇ ಓದಿ-ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!
ಇನ್ನು ವಿಮಾನಯಾನ ನಿರ್ದೇಶನಾಲಯದ ಮಾರ್ಗಸೂಚಿಯಂತೆ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಪೈಲಟ್ ಅವಧಿ ಮುಗಿದ ನಂತರ ಕಾರ್ಯ ನಿರ್ವಹಿಸಬಾರದು ಎಂದಿದೆ.
ಇದೇ ಕಾರಣಕ್ಕೆ ದಿಲ್ಲಿಯಿಂದ ಜೈಪುರಕ್ಕೆ ಬಂದ ವಿಮಾನವು ನಿಗದಿತ ಸಮಯದಲ್ಲಿ ಮತ್ತೆ ಟೇಕ್ ಆಫ್ ಆಗಬೇಕಿತ್ತು. ಆದ್ರೆ ಅದೇ ವೇಳೆಗೆ ಪೈಲಟ್ ಕರ್ತವ್ಯ ಅವಧಿ ಕೂಡಾ ಮುಗಿದಿತ್ತು. ಇದರಿಂದ ಮಾರ್ಗಸೂಚಿಯಂತೆ ವಿಮಾನ ಚಲಾಯಿಸಲು ಪೈಲಟ್ ನಿರಾಕರಿಸಿದ್ದಾನೆ.
Trending on DriveSpark Kannada:
ತಮ್ಮ ಹುಟ್ಟುಹಬ್ಬದಂದು ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ಅನುಷ್ಕಾ ಶೆಟ್ಟಿ..!!