ಆಲ್ಟೋ 800 ಕಾರುಗಳ ಮಧ್ಯೆ ಭೀಕರ ಅಪಘಾತ- ಓರ್ವ ಯುವ ಕ್ರಿಕೆಟರ್ ದುರ್ಮರಣ
ಕೆಲವು ಘಟನೆಗಳಲ್ಲಿ ಚಾಲಕರ ಮಾಡುವ ಸಣ್ಣಪುಟ್ಟ ತಪ್ಪುಗಳೇ ಮಾಹಾದುರಂತಕ್ಕೆ ಕಾರಣವಾಗುತ್ತವೆ ಎನ್ನುವುದಕ್ಕೆ ನಿನ್ನೆ ನಡೆದ ಮಾರುತಿ ಸುಜುಕಿ ಆಲ್ಟೋ 800 ಕಾರುಗಳ ಮಧ್ಯೆ ನಡೆದಿರುವ ಅಪಘಾತವೇ ಸಾಕ್ಷಿ.
Recommended Video

ದೇಶದಲ್ಲಿ ಪ್ರತಿದಿನ ಒಂದಿಲ್ಲಾ ಒಂದು ಭೀಕರ ರಸ್ತೆ ಅಪಘಾತ ಸಂಭವಿಸುತ್ತಲೇ ಇರುತ್ತವೆ. ಆದ್ರೆ ಕೆಲವು ಘಟನೆಗಳಲ್ಲಿ ಚಾಲಕರ ಮಾಡುವ ಸಣ್ಣಪುಟ್ಟ ತಪ್ಪುಗಳೇ ಮಾಹಾದುರಂತಕ್ಕೆ ಕಾರಣವಾಗುತ್ತವೆ ಎನ್ನುವುದಕ್ಕೆ ನಿನ್ನೆ ನಡೆದ ಮಾರುತಿ ಸುಜುಕಿ ಆಲ್ಟೋ 800 ಕಾರುಗಳ ಮಧ್ಯೆ ನಡೆದಿರುವ ಅಪಘಾತವೇ ಸಾಕ್ಷಿ.

ತಮಿಳುನಾಡಿನ ಸೇಲಂ-ಮಧುರೈ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರುತಿ ಸುಜುಕಿ ಆಲ್ಟೋ 800 ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 26 ವರ್ಷ ಓರ್ವ ಯುವ ಕ್ರಿಕೆಟರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ವೆಲ್ಲೂರು ಬಳಿಯ ನಮಕ್ಕಲ್ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಕಾರು ಹಿಂದಿಕ್ಕುವ ಭರದಲ್ಲಿ ಈ ಅಪಘಾತ ಸಂಭಿಸಿದೆ. ಪರಿಣಾಮ ಆಲ್ಟೋ 800 ಎರಡು ಕಾರುಗಳು ಸೇತುವೆ ಒಂದರ ಬಳಿ ಮೊಗಚಿ ಬಿದ್ದಿವೆ.

ಘಟನೆ ತೀವ್ರ ಗಾಯಗೊಂಡಿದ್ದ ಯುವ ಕ್ರಿಕೆಟರ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಮತ್ತೊಂದು ಕಾರಿನಲ್ಲಿ ಮತ್ತಿಬ್ಬರು ತೀವ್ರ ಗಾಯಗಳಾಗಿದ್ದ ಪರಿಣಾಮ ಸ್ಥಳೀಯರ ಸಹಾಯದೊಂದಿದೆ ವೆಲ್ಲರೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಯುವ ಕ್ರಿಕೆಟರ್ ಇದ್ದ ಕಾರು ಪೊಂಗಲ್ ಹಬ್ಬದ ಹಿನ್ನೆಲೆ ಏರ್ಪಡಿಸಲಾಗಿದ್ದ ಟೂರ್ನಿಯೊಂದರಲ್ಲಿ ಭಾಗಿಯಾಗಲು ಮಧುರೈಗೆ ತೆರಳುತ್ತಿದ್ದರು ಎಂಬ ಮಾಹಿತಿ ದೊರೆತಿದ್ದು, ಇನ್ನೊಂದು ಕಾರಿನಲ್ಲಿದ್ದ ಒಟ್ಟು ಮೂವರಲ್ಲಿ ವೈದ್ಯರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Trending On DriveSpark Kannada:
ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..
ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು
ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಘಟನೆ ಬಗ್ಗೆ ವೆಲ್ಲೂರು ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಪ್ರಾಥಮಿಕ ತನಿಖೆ ವೇಳೆ ಯುವ ಕ್ರಿಕೆಟರ್ ಇದ್ದ ಕಾರಿನ ಚಾಲಕ ಮಾಡಿದ ತಪ್ಪಿನಿಂದಾಗಿಯೇ ಈ ದುರಂತ ನಡೆದಿದೆ ಎಂಬುವುದು ಸಾಬೀತಾಗಿದೆ.

ವೈದ್ಯರಿದ್ದ ಮಾರುತಿ ಸುಜುಕಿ ಆಲ್ಟೋ 800 ಕಾರನ್ನು ಹಿಂದಿಕ್ಕಲು ಹೋಗಿದ್ದ ಕ್ರಿಕೆಟರ್ ಇದ್ದ ಆಲ್ಟೋ 800 ಕಾರು ಬೈಕ್ ಒಂದಕ್ಕೆ ಸಣ್ಣ ಪ್ರಯಾಣದಲ್ಲಿ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡಿದ್ದು, ಅದೇ ಸಮಯಕ್ಕೆ ಪಕ್ಕದಲ್ಲೇ ಚಲಿಸುತ್ತಿದ್ದ ಕಾರಿಗೆ ರಭಸವಾಗಿ ಗುದ್ದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಎರಡು ಕಾರುಗಳು ಬಿಡ್ಜ್ ಬಳಿಯ ಕಾಲುವೆಗೆ ಬಿದ್ದಿದ್ದು, ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಆದ್ರೆ ಅದೃಷ್ಟವಾಶಾತ್ ಕಾರು ಅಪಘಾತದಲ್ಲಿ ಬೈಕ್ ಸವಾರ ಪ್ರಾಣಪಾಯದಿಂದ ಪಾರಾಗಿದ್ದು, ಬೈಕ್ ಇಂಡಿಕೇಟರ್ ದುರಸ್ತಿಯಾಗುವುದನ್ನು ಬಿಟ್ಟು ಯಾವುದೇ ತೊಂದರೆಯಾಗಿಲ್ಲ.

ಒಂದು ಗಮಸಬೇಕಾದ ಅಂಶ ಏನೆಂದರೇ ಅಪಘಾತದಲ್ಲಿ ಸಿಲುಕಿದ ಎರಡು ಕಾರುಗಳಲ್ಲೂ ಯಾವುದೇ ಜೀವರಕ್ಷಕ ಏರ್ಬ್ಯಾಗ್ ಸೌಲಭ್ಯಗಳನ್ನು ಹೊಂದಿಲ್ಲ. ಜೊತೆಗೆ ಎಬಿಎಸ್ ಸೇರಿದಂತೆ ಯಾವುದೇ ಸುಧಾರಿತ ತಂತ್ರಜ್ಞಾನ ವ್ಯವಸ್ಥೆಯು ಇರಲಿಲ್ಲ.
Trending On DriveSpark Kannada:
ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!
ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್ರ್ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!
ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು
ಬಹುನೀರಿಕ್ಷಿತ 2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿಗಾಗಿ ಬುಕ್ಕಿಂಗ್ ಆರಂಭ
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








